ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ 4 ಪಟ್ಟು ಹೆಚ್ಚಳ
2006-2016ರ ಮಧ್ಯೆ ಹತ್ತು ವರ್ಷದಲ್ಲಿ ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯದ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದೆ ಎಂಬ ಅಂಶವೊಂದು ಪೊಲೀಸ ಕಮಿಷನರ್ ನೀಡಿದ ಮಾಹಿತಿಯಿಂದ ಗೊತ್ತಾಗುತ್ತದೆ. ಈ ಬಗ್ಗೆ ಇಂಡಿಯಾ ಸ್ಪೆಂಡ್ ನಲ್ಲಿ ವರದಿ ಮಾಡಲಾಗಿದೆ
ಬೆಂಗಳೂರು, ಮೇ 6: 2006-2016ರ ಮಧ್ಯೆ ಬೆಂಗಳೂರಿನಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಬೆಂಗಳೂರು ಪೊಲೀಸ್ ಕಮಿಷನರ್ ನೀಡಿದ ಮಾಹಿತಿಯೇ (ಸೆಕ್ಷನ್ 354) ಈ ಅಂಶದ ಬಗ್ಗೆ ಬೆಳಕು ಚೆಲ್ಲುತ್ತದೆ. ಪೊಲೀಸರ ಮಾಹಿತಿಯನ್ನು ವಿಶ್ಲೇಷಣೆ ಮಾಡಿದರೆ ಗೊತ್ತಾಗುವ ಅಂಶ ಏನು ಗೊತ್ತಾ?
ಈ ಹತ್ತು ವರ್ಷದಲ್ಲಿ 4241 ದೂರುಗಳು ದಾಖಲಾಗಿವೆ. ಅದರೆ ಶಿಕ್ಷೆ ಅಂತ ಆಗಿರುವುದು ಹದಿನಾರು ಪ್ರಕರಣಗಳಲ್ಲಿ ಮಾತ್ರ. 2006ರಲ್ಲಿ 150 ಇದ್ದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ 2016ರಲ್ಲಿ 776ಕ್ಕೆ ಏರಿಕೆ ಆಗಿದೆ. ಇದಕ್ಕೆ ತಜ್ಞರು ನೀಡುವ ಕಾರಣ ಏನೆಂದರೆ, ಒಂದೋ ಇಂಥ ಘಟನೆಗಳು ಹೆಚ್ಚಾಗಿವೆ. ಅಥವಾ ಇಂಥ ಘಟನೆ ನಡೆದಾಗ ದೂರು ನೀಡಬೇಕು ಎಂಬ ಅರಿವು ಮಹಿಳೆಯರಲ್ಲಿ ಹೆಚ್ಚಾಗಿದೆ.[ಓಲಾ ಕ್ಯಾಬ್ ಚಾಲಕನಿಂದ ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ]

2017ನೇ ಇಸವಿ ಆರಂಭವಾಗಿದ್ದೇ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳ ಹಲವು ಪ್ರಕರಣಗಳ ಮೂಲಕ. ಅಪಾರ ಸಂಖ್ಯೆಯ ಪೊಲೀಸರು ಇದ್ದರೂ ಎಂ ಜಿ ರಸ್ತೆ ಹಾಗೂ ಇತರೆಡೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಇದರಿಂದ ಮಹಿಳೆಯರಿಗೆ ಬೆಂಗಳೂರು ಸುರಕ್ಷಿತಲ್ಲ ಎಂಬ ಅಭಿಪ್ರಾಯ ಮೂಡಿತ್ತು.

ಬೆಂಗಳೂರಿನಲ್ಲಿ ಅಪರಾಧ ಕೃತಗಳಿಗೆ ಗಿರುವ ಶಿಕ್ಷೆ ಪ್ರಮಾಣ ಗಮನಿಸಿದರೆ ದೇಶದಾದ್ಯಂತ ಎದುರಿಸುತ್ತಿರುವ ಸಮಸ್ಯೆಗಳು ಗೊತ್ತಾಗುತ್ತವೆ. ನಿರ್ಭಯಾ ಪ್ರಕರಣದಲ್ಲಿ ಹೈ ಕೋರ್ಟ್ ತೀರ್ಪನ್ನು ಮೇ 4ರಂದು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಬೆಂಗಳೂರಿನಲ್ಲಿ ಅಂಥ ಕೆಟ್ಟ ಅನುಭವ ಆಗಿದ್ದನ್ನು ಕಾವ್ಯಾ ಎಂಬುವವರು ಹೇಳಿಕೊಂಡಿದ್ದಾರೆ.[ನೆಟ್ ಸಮಸ್ಯೆ ಬಗೆ ಸರಿಪಡಿಸಲೆಂದು ಬಂದವನಿಂದ ಲೈಂಗಿಕ ದೌರ್ಜನ್ಯ]

"ಆಗ ಬೆಳಗ್ಗೆ 8.30 ಸಮಯ. ಅಪರಿಚಿತನೊಬ್ಬ ನನ್ನ ಅವಚಿಕೊಂಡು ಮುತ್ತು ನೀಡಲು ಮುಂದಾದ. ಕೋರಮಂಗಲಕ್ಕೆ ನಾನು ಕೆಲಸಕ್ಕೆ ಹೋಗಬೇಕು ಎಂದು ನಡೆದು ಹೋಗ್ತಿದ್ದೆ. ಹತ್ತಾರು ಜನರು ಅಲ್ಲಿದ್ದರೂ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಆಗ ನಾನೇ ಆತನನ್ನು ಕೂಗು ಹಾಕಿ, ಒದ್ದು ಆತನಿಂದ ಬಿಡಿಸಿಕೊಂಡಾಗ ಅಕ್ಕಪಕ್ಕದವರು ಅವನನ್ನು ಬಿಡುವಂತೆ ಹೇಳಿದರು" ಎಂದು ಆಕೆ ತಮ್ಮ ಅನುಭವ ಹೇಳಿಕೊಂಡಿದ್ದಾರೆ.[ಬೆಂಗಳೂರಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ]

ಆದರೆ, ಅಲ್ಲಿಂದ ಕೆಲಸ ಹಾಗೂ ಮನೆ ಬದಲಾಯಿಸಿದ ಮೇಲೆ ಆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಕೋರ್ಟ್ ಗೆ ಹಾಜರಾಗುವುದಕ್ಕೆ ಆಗಲಿಲ್ಲ. ಆದರೆ ಪೊಲೀಸರು ತುಂಬ ಸಹಕಾರ ನೀಡಿದರು ಎಂದು ಅವರು ಹೇಳುತ್ತಾರೆ. ಈ ರೀತಿ ಪ್ರಕರಣಗಳು ತುಂಬ ಹೆಚ್ಚಾಗುತ್ತಿವೆ. ಆ ಕಾರಣಕ್ಕೆ ಇಂಥ ಪ್ರಕರಣಗಳು ನಡೆಯದಿರಲಿ ಎಂದು ಈಚೆಗೆ ಬೆಂಗಳೂರಿನಲ್ಲಿ ಪಿಂಕ್ ಹೊಯ್ಸಳ ಪರಿಚಯಿಸಲಾಗಿದೆ.
ಇಂಡಿಯಾ ಸ್ಪೆಂಡ್ ಮಾಹಿತಿ
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ?












Click it and Unblock the Notifications