Get Updates
Get notified of breaking news, exclusive insights, and must-see stories!

ಕನ್ನಡದ ಗಂಧಗಾಳಿಯಿಲ್ಲದ ಗಣೇಶೋತ್ಸವ ಯಾರಿಗೆ ಬೇಕು?

ಬೆಂಗಳೂರು, ಆಗಸ್ಟ್ 22 : ಬೆಂಗಳೂರು ಗಣೇಶ ಉತ್ಸವ ಎನ್ನುವ ಹೆಸರಿನಲ್ಲಿ ಕನ್ನಡದ ಜೊತೆ ಕನ್ನಡೇತರ(ಹಿಂದೀ, ತಮಿಳು, ತೆಲುಗು) ಭಾಷೆಗಳ ಕಾರ್ಯಕ್ರಮಗಳನ್ನು ಕನ್ನಡಿಗರ ವಿರೋಧದ ನಡುವೆಯೂ ಪ್ರತಿ ವರ್ಷ ಆಯೋಜಿಸಿಕೊಂಡು ಬರುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ.

ಈತ್ತೀಚೆಗಂತೂ ಈ ಉತ್ಸವವು ಹೊರಗಿನ ಹಾಡುಗಾರರು, ಸಂಗೀತಗಾರರನ್ನು ಕರೆಸಿ ನಡೆಸುತ್ತಿರುವ ವ್ಯಾವಹಾರಿಕ ಚಟುವಟಿಕೆಯಂತಾಗಿದೆ. ಈ ನಡೆಯನ್ನು ಪ್ರಶ್ನಿಸಿದವರಿಗೆ ಇವರು ಕೊಡುವ ಅಸಡ್ಡೆಯ ಉತ್ತರ ಕನ್ನಡವೂ ಇದೆಯಲ್ಲ ಎನ್ನುವುದಾಗಿದೆ.

Oppose Bengaluru Ganesha Utsav for anti Kannada stand

ಆದರೆ ಇದು ನಾಡಿನ ರಾಜಧಾನಿಯಲ್ಲಿ ಕನ್ನಡದ ಬಳಕೆಯ ಪ್ರಶ್ನೆಯಾಗಿದೆ. ಹೊರಜಗತ್ತಿಗೆ ಬೆಂಗಳೂರಿನಲ್ಲಿ ಎಲ್ಲಾ ಭಾಷೆಗಳೂ ನಡೆಯುತ್ತವೆ ಎನ್ನುವ ಸಂದೇಶವನ್ನು ಕೊಡುತ್ತಿದೆ.

In Pics : ಗೌರಿ-ಗಣೇಶನನ್ನು ಬರ ಮಾಡಿಕೊಳ್ಳೋಣ ಬನ್ನಿ

ಇವರ ಕನ್ನಡ ವಿರೋಧಿ ಧೋರಣೆಗೆ ಸಾಕ್ಷಿಯಾಗಿ ಇವರ ಮಿಂಬಲೆ - (ಬೆಂಗಳೂರು ಗಣೇಶ ಉತ್ಸವ), ಇವರು ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಕೊಡುವ ಮಾಹಿತಿ ಎಲ್ಲಿಯೂ ಕನ್ನಡದ ಬಳಕೆಯಿಲ್ಲ. ಹಾಗೂ ಇವರು ಹಮ್ಮಿಕೊಂಡಿರುವ 55ನೇ ಉತ್ಸವ ಕುರಿತ ಜಾಹೀರಾತಿನ ವಿಡಿಯೋದಲ್ಲಿಯೂ ಕನ್ನಡವಿಲ್ಲ

ಒಟ್ಟಾರೆಯಾಗಿ ಉತ್ಸವದ ನೆಪದಲ್ಲಿ ಕನ್ನಡವನ್ನು ಬದಿಗೊತ್ತಿ ಕನ್ನಡದ ಬಳಕೆಗೆ ಧಕ್ಕೆ ತರುವ ಇವರ ಕನ್ನಡ ವಿರೋಧಿ ನಡೆಯನ್ನು ಕನ್ನಡಿಗರು ಒಕ್ಕೊರಲಿನಿಂದ ವಿರೋಧಿಸಿ ತಕ್ಕ ಸಂದೇಶ ಕೊಡಬೇಕಿದೆ.

ಕೆಳಗಿನ ವಿಳಾಸಗಳಿಗೆ ಮಿಂಚೆ ಬರೆದು ಇವರ ಕನ್ನಡ ವಿರೋಧಿ ನಡೆಯನ್ನು ವಿರೋಧಿಸೋಣ.

ಇಲ್ಲಿಗೆ ಮಿಂಚೆ ಬರೆಯಿರಿ : [email protected]

ಅವರ ಫೇಸ್ ಬುಕ್ ಖಾತೆಯಲ್ಲೂ ಬರೆದು ವಿರೋಧಿಸಿ:

ಟ್ವಿಟ್ಟರ್ ನಲ್ಲೂ ಬರೆದು ವಿರೋಧಿಸಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+