ರಾಜ್ಯದಲ್ಲಿ ಮೊದಲಗೆ ಬಾರಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ
ಬೆಂಗಳೂರು, ಏಪ್ರಿಲ್ 19: ರಾಜ್ಯದಲ್ಲಿ ಮೊದಲ ಸಲ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡಿದೆ. ಕಳೆದ ಒಂದು ವಾರದಿಂದ 34, 38, 17, 25 ಹೀಗೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೆ ಇತ್ತು. ಆದರೆ, ಇಂದು ಕೇವಲ 4 ಜನ ಸೋಂಕಿತರು ಮಾತ್ರ ದಾಖಲಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಹೌದು, ನಿನ್ನೆ ಸಂಜೆಯಿಂದ ಈವರೆಗೆ ಕೇವಲ 4 ಹೊಸ ಸೋಂಕಿತ ಪ್ರಕರಣಗಳು ರಾಜ್ಯದಲ್ಲಿ ದೃಢವಾಗಿದೆ. ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದ್ದಾರೆ.

ಈ ನಾಲ್ಕು ಕೇಸ್ಗಳು ದಾಖಲಾಗಿರುವುದು ಮೈಸೂರಿನಲ್ಲಿ ಎನ್ನುವುದು ಗಮನಾರ್ಹ. ಇಬ್ಬರು ಮೈಸೂರು ನಗರ ಹಾಗು ಮತ್ತಿಬ್ಬರು ನಂಜನಗೂಡು ಮೂಲದವರು. ಮೈಸೂರು ನಗರದ ನಿವಾಸಿಗಳು ದೆಹಲಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದರೆ, ನಂಜನಗೂಡಿನ ಇಬ್ಬರು ಈ ಹಿಂದಿನ ಸೋಂಕಿತರ ಜೊತೆಯಲ್ಲಿ ಸಂಪರ್ಕ ಹೊಂದಿದ್ದವರು.
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 4 #COVID19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸಂಖ್ಯೆ 388ಕ್ಕೆ ಏರಿದೆ. ಇಂದಿನವರೆಗೆ 105 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂಬುದು ಸಮಾಧಾನದ ವಿಷಯವಾಗಿದೆ. #IndiaFightsCornona pic.twitter.com/K2qZddcyhj
— B Sriramulu (@sriramulubjp) April 19, 2020
ಸದ್ಯ, ಕರ್ನಾಟಕದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಕ್ಯೆ 388ಕ್ಕೇರಿದೆ. ಇದರಲ್ಲಿ ಸೋಂಕಿತರಲ್ಲಿ 105 ಜನರು ಗುಣಮುಖರಾಗಿದ್ದಾರೆ. 14 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದಿದೆ.
ಉಳಿದ 269ರಲ್ಲಿ ಗರ್ಭಿಣಿ ಸೇರಿದಂತೆ 266 ಜನರ ಆರೋಗ್ಯ ಸ್ಥಿರ, 3 ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ.












Click it and Unblock the Notifications