ಇಂದಿರಾನಗರದಲ್ಲಿ ನುಡಿರಾ ಸಲೂನ್ ಉದ್ಘಾಟಿಸಿದ ನಟಿ ಧನ್ಯಾ
ಬೆಂಗಳೂರು, ಸೆಪ್ಟಂಬರ್ 20: ದೇಶದಲ್ಲಿ ಮುಂಚೂಣಿಯಲ್ಲಿರುವ ಸಲೂನ್ ಚೇನ್ಗಳಲ್ಲಿ ಒಂದಾಗಿರುವ ನುಡಿರಾ ಇಂದು ಬೆಂಗಳೂರಿನ ಇಂದಿರಾನಗರದಲ್ಲಿ ತನ್ನ ಔಟ್ಲೆಟ್ ಅನ್ನು ಆರಂಭಿಸಿದೆ. ಇದು ಬೆಂಗಳೂರಿನಲ್ಲಿ ಬ್ರ್ಯಾಂಡ್ನ ಎರಡನೇ ಔಟ್ಲೆಟ್ ಆಗಿದೆ. ಬ್ರ್ಯಾಂಡ್ ತನ್ನ ಮೊದಲನೇ ಮಳಿಗೆಯನ್ನು ಕಾಡುಗೋಡಿಯಲ್ಲಿ ಆರಂಭ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದಿರಾನಗರದಲ್ಲಿ ಎರಡನೇ ಔಟ್ಲೆಟ್ ಅನ್ನು ಆರಂಭಿಸಿದೆ. ನಿನ್ನ ಸನಿಹಕೆ ಚಿತ್ರದ ನಟ-ನಟಿಯರಾದ ಸೂರಜ್ ಗೌಡ ಮತ್ತು ಧನ್ಯಾ ರಾಮ್ಕುಮಾರ್ ಅವರು ಈ ಔಟ್ಲೆಟ್ ಅನ್ನು ಉದ್ಘಾಟಿಸಿದರು.
ಈ ಸಲೂನ್ 2100 ಚದರಡಿ ವಿಸ್ತೀರ್ಣವನ್ನು ಹೊಂದಿದ್ದು, ಗ್ರಾಹಕರಿಗೆ ಅತ್ಯುತ್ತಮವಾದ ತ್ವಚೆ, ಉಗುರು ಮತ್ತು ಕೂದಲು ಪರಿಣತರಿಂದ ಗ್ರಾಹಕರಿಗೆ ಸೇವೆಯನ್ನು ಒಂದೇ ಸೂರಿನಡಿ ನೀಡಲಿದೆ. ಮೇಕಪ್, ನೇಲ್ಸ್, ಹೇರ್ಕೇರ್ ಮತ್ತು ಫೇಶಿಯಲ್ಸ್ ಅನ್ನು ಸಹ ಇಲ್ಲಿ ಮಾಡಲಾಗುತ್ತದೆ.ಈ ಸಲೂನ್ ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆವರೆಗೆ ವಾರದ ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ನುಡಿರಾದ ಮಾಲೀಕರಾದ ನದಿರಾನಾಯರ್ ಅವರು, ''ಮಹಿಳೆ ಮತ್ತು ಪುರುಷರಿಗೆ ಪರಿಪೂರ್ಣವಾದ ಮತ್ತು ಆತ್ಮೀಯವಾದ ಅನುಭವವನ್ನು ನೀಡುವ ಉದ್ದೇಶದಿಂದ ಈ ಸಲೂನ್ ಅನ್ನು ಆರಂಭಿಸಲಾಗಿದೆ. ಸಲೂನನ್ನು ಪ್ರವೇಶ ಮಾಡುತ್ತಿದ್ದಂತೆಯೇ ಗ್ರಾಹಕರಿಗೆ ರೂಪಾಂತರದ ಅನುಭವವಾಗಲಿದೆ. ನಮ್ಮ ನುಡಿರಾದಲ್ಲಿನ ತಂಡ ಮತ್ತು ನಾನು ಅತ್ಯುತ್ಕೃಷ್ಟವಾದ ಉತ್ಪನ್ನಗಳು ಮತ್ತು ವೃತ್ತಿಪರ ಸೇವೆಗಳೊಂದಿಗೆ ವಿಸ್ತಾರವಾದ ರೀತಿಯ ಅತ್ಯುತ್ತಮ ಗುಣಮಟ್ಟದ ಸೌಂದರ್ಯ ಸೇವೆಗಳನ್ನು ನೀಡಲಿದ್ದೇವೆ'' ಎಂದರು.

ನಿನ್ನ ಸನಿಹಕೆ ಚಿತ್ರದ ನಾಯಕ ನಟಿ ಧನ್ಯಾ ರಾಮ್ ಕುಮಾರ್ ಅವರು ಮಾತನಾಡಿ, ''ಎಲ್ಲಾ ಸೇವೆಗಳು ಉಪಯುಕ್ತವಾಗಿದ್ದರೂ, ನನ್ನ ವೈಯಕ್ತಿಕ ನೆಚ್ಚಿನದು ಕೂದಲು ಸೇವೆಗಳಾಗಿರಬೇಕು. ಬ್ರ್ಯಾಂಡ್ ನಂಬಲಾಗದಷ್ಟು ಕೂದಲು ಆರೈಕೆ ಮತ್ತು ಬಣ್ಣದ ಉತ್ಪನ್ನಗಳನ್ನು ಹೊಂದಿದೆ. ಜೊತೆಗೆ ಪ್ರೀತಿ ಮತ್ತು ಕಾಳಜಿಯಿಂದ ಗ್ರಾಹಕರ ನಿರೀಕ್ಷೆಗಳನ್ನು ನಿರ್ವಹಿಸಲು ಅಗತ್ಯವಾದ ಪರಿಣತಿಯನ್ನು ಹೊಂದಿದೆ'' ಎಂದು ತಿಳಿಸಿದರು.

Recommended Video
ನಿನ್ನ ಸನಿಹಕೆ ನಾಯಕ ನಟ/ ನಿರ್ದೇಶಕ ಸೂರಜ್ ಗೌಡ್ ಅವರು ಮಾತನಾಡಿ, ''ನುಡಿರಾದ ಅದ್ಭುತ ನೋಟ ಮತ್ತು ಭಾವನೆಯನ್ನು ಹೊಂದಿದೆ. ಇದು ಅತ್ಯುತ್ತಮ ಗುಣಮಟ್ಟದ ಸೇವೆಗಳಿಗೆ ಅನುಗುಣವಾಗಿರುತ್ತದೆ. ಇದಕ್ಕಿಂತ ಹೆಚ್ಚಾಗಿ. ಬ್ರ್ಯಾಂಡ್ ಗ್ರಾಹಕರ ಸಂಬಂಧ ಕೋಡ್ ಅನ್ನು ಹೊಂದಿದ್ದು, ಅದು ವೃತ್ತಿಪರವಾದರೂ ಬೆಚ್ಚಗಿರುತ್ತದೆ ಮತ್ತು ನಿಜವಾಗಿಯೂ ವೈಯಕ್ತೀಕರಿಸಿದೆ'' ಎಂದು ಹೇಳಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications