ಬೆಂಗಳೂರಲ್ಲಿ ಜನವರಿ 22 ಮತ್ತು 23ರಂದು ಕಾವೇರಿ ನೀರಿಲ್ಲ

ಬೆಂಗಳೂರು, ಜನವರಿ 20 : ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ತುರ್ತು ಕಾಮಗಾರಿಯ ಹಿನ್ನಲೆಯಲ್ಲಿ ನಗರದ ಬಹುತೇಕ ಪ್ರದೇಶದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ಹೇಳಿದೆ.

ಬೆಂಗಳೂರು ಜಲಮಂಡಳಿಯು ಕಾವೇರಿ ನೀರು ಸರಬರಾಜು ಯೋಜನೆ 1 ಮತ್ತು 2ನೇ ಹಂತದ ಪಂಪಿಂಗ್ ಸ್ಟೇಷನ್‌ನಲ್ಲಿ ವಿವಿಧ ಕಾಮಗಾರಿಯನ್ನು ಕೈಗೊಂಡಿದೆ. ಟಿ.ಕೆ.ಹಳ್ಳಿ, ಹಾರೋಹಳ್ಳಿ, ತಾತಗುಣಿಯಲ್ಲಿ ವಿವಿಧ ಕಾಮಗಾರಿ ನಡೆಯಲಿದೆ.

No water supply in Bengaluru on January 22 and 23

ಕಾಮಗಾರಿಗಳ ಹಿನ್ನಲೆಯಲ್ಲಿ ಜನವರಿ 22 ರಾತ್ರಿ 10 ಗಂಟೆಯಿಂದ 23/1/2019ರ ಸಂಜೆ 4 ಗಂಟೆಯ ತನಕ ನಗರದ ಬಹುತೇಕ ಪ್ರದೇಶದಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜಿಕರು ಸಹಕಾರ ನೀಡಬೇಕು ಎಂದು ಜಲಮಂಡಳಿ ಮನವಿ ಮಾಡಿದೆ.

ಯಾವ-ಯಾವ ಪ್ರದೇಶಗಳು : ಯಶವಂತಪುರ, ಮಲ್ಲೇಶ್ವರಂ, ಮತ್ತಿಕೆರೆ, ಗೋಕುಲ ಬಡಾವಣೆ, ಜಯಮಹಲ್, ವಸಂತನಗರ, ಆರ್.ಟಿ.ನಗರ, ಸಂಜಯ್ ನಗರ, ಸದಾಶಿವನಗರ, ಹೆಬ್ಬಾಳ, ಭಾರತೀ ನಗರ, ಸುಧಾಮನಗರ, ಪ್ಯಾಲೇಸ್ ಗುಟ್ಟಳ್ಳಿ, ಫ್ರೇಜರ್ ಟೌನ್.

ವಿಲ್ಸನ್ ಗಾರ್ಡನ್, ಹೊಂಬೇಗೌಡ ನಗರ, ಪಿಳ್ಳಣ್ಣ ಗಾರ್ಡನ್, ಬನ್ನಪ್ಪ ಪಾರ್ಕ್‌, ಶಿವಾಜಿನಗರ, ಜೀವನ್ ಭೀಮಾ ನಗರ, ಚಿಕ್ಕಲಾಲ್‌ಬಾಗ್, ಗವಿಪುರ, ಬ್ಯಾಟರಾಯನಪುರ, ಮೆಜೆಸ್ಟಿಕ್, ಕಸ್ತೂರಬಾ ರಸ್ತೆ, ಮಡಿವಾಳ, ಯಲಚೇನಹಳ್ಳಿ, ಇಸ್ರೋ ಲೇಔಟ್.

ಪೂರ್ಣಪ್ರಜ್ಞಾ ಲೇಔಟ್, ನೀಲಸಂದ್ರ, ಕೆ.ಆರ್.ಮಾರ್ಕೆಟ್, ಸಂಪಂಗಿ ರಾಮನಗರ, ಕುಮಾರಸ್ವಾಮಿ ಲೇಔಟ್, ಬನಶಂಕರಿ, ಬಿಎಸ್‌ಕೆ 2 ಮತ್ತು 3ನೇ ಹಂತ, ಜಯನಗರ, ಜೆ.ಪಿ.ನಗರ, ಬನಗಿರಿ, ಬಸವನಗುಡಿ, ಓಕಳಿಪುರ, ಚಾಮರಾಜಪೇಟೆ, ಪದ್ಮನಾಭನಗರ, ಹೊಸಕೆರೆಹಳ್ಳಿ.

ಭೈರಸಂದ್ರ, ಲಿಂಗರಾಜಪುರ, ಜಾನಕಿರಾಮ ಲೇಔಟ್, ಆರ್‌.ಎಸ್.ಪಾಳ್ಯ, ಆಡುಗೋಡಿ, ದೊಮ್ಮಲೂರು, ಬಿ.ಟಿ.ಎಂ.ಲೇಔಟ್, ಸಿ.ಎಲ್‌.ಆರ್, ಮೈಸೂರು ರಸ್ತೆ, ಶ್ರೀರಾಮಪುರ, ಇಂದಿರಾ ನಗರ 1ನೇ ಹಂತ, ಶ್ರೀನಗರ, ಹಲಸೂರು, ಶಾಂತಿನಗರ, ಕೋರಮಂಗಲ.

ವಿಜಯನಗರ, ಚೋಳೂರು ಪಾಳ್ಯ, ರಿಚ್‌ ಮಂಡ್ ಟೌನ್, ಅಶೋಕ ನಗರ, ಈಜಿಪುರ, ಮುನೇಶ್ವರ ನಗರ, ವಿ.ವಿ.ಪುರಂ, ಮಾವಳ್ಳಿ, ಗಾಂಧಿ ನಗರ, ಬ್ಯಾಟರಾಯನಪುರ, ಕತ್ರಿಗುಪ್ಪೆ, ಟೆಲಿಕಾಂ ಲೇಔಟ್, ಚಿಕ್ಕಪೇಟೆ, ಎಂ.ಜಿ.ರಸ್ತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+