'ವಿದ್ಯಾರ್ಥಿಗಳೇ ಭಯಪಡಬೇಡಿ, ಸಿಇಟಿ ಶುಲ್ಕ ಏರಿಕೆಯಿಲ್ಲ'
ಬೆಂಗಳೂರು, ಏ.20: ಇಂಜಿನಿಯರಿಂಗ್ ಹಾಗೂ ವೈದ್ಯ ಶಿಕ್ಷಣ ಕೋರ್ಸ್ ಗಳ ಶುಲ್ಕ ಹಾಗೂ ಸೀಟು ಹಂಚಿಕೆ ಗೊಂದಲ ಮುಂದುವರೆದಿದೆ. ಆದರೆ, ಸಿಇಟಿ ಯಥಾಸ್ಥಿತಿಯಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಗೊಂದಲಕ್ಕೆ ಒಳಗಾಗಬೇಕಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ವಿಧಾನಸೌಧದಲ್ಲಿ
ಶನಿವಾರ
ಸುದ್ದಿಗಾರರ
ಜತೆ
ಮಾತನಾಡಿದ
ಅವರು,
ಸಿಇಟಿ
ಸಂಬಂಧ
ಖಾಸಗಿ
ಶಿಕ್ಷಣ
ಸಂಸ್ಥೆಗಳ
ಆಡಳಿತ
ಮಂಡಳಿ
ಮುಖ್ಯಸ್ಥರ
ಜತೆ
ಮುಖ್ಯಮಂತ್ರಿ
ಸಿದ್ದರಾಮಯ್ಯ
ನೇತ್ರುತದಲ್ಲಿ
ಸಭೆ
ನಡೆಸಿ
ಮಾತುಕತೆ
ಮಾಡಲಾಗಿದೆ.
ಸೀಟು
ಹಂಚಿಕೆ
ಹಾಗೂ
ಶುಲ್ಕ
ನಿಗದಿಯಲ್ಲಿ
ಯಾವುದೇ
ಬದಲಾವಣೆ
ಇಲ್ಲ
ಎಂದು
ಮುಖ್ಯಮಂತ್ರಿಗಳು
ಈಗಾಗಲೇ
ಭರವಸೆ
ನೀಡಿದ್ದಾರೆ.
ಆ
ಪ್ರಕಾರ
ಕಳೆದ
ವರ್ಷದಂತೆ
ಪ್ರಕ್ರಿಯೆ
ಮುಂದುವರಿಸಲಾಗುವುದು
ಎಂದು
ಸಚಿವ
ದೇಶಪಾಂಡೆ
ಹೇಳಿದರು.
ವಿದ್ಯಾರ್ಥಿಗಳ ಹಿತ ರಕ್ಷಿಸುವುದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಯಾವುದೇ ಆತಂಕ ಹಾಗೂ ಗೊಂದಲ ಬೇಡ ಎಂದರು. ಸಿಇಟಿ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸುವುದಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳ ಜತೆ ನಾನು ಚರ್ಚೆ ನಡೆಸಿದ್ದೇನೆ. ಸಿಇಟಿಗೂ ಮುನ್ನ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾಮೆಡ್- ಕೆ ಪರೀಕ್ಷೆ ನಡೆಸಿಲ್ಲ. ಪಿಯುಸಿ ನಂತರದ ಕೋರ್ಸ್ ಗಳಿಗೆ ಸಂಬಂಧಿಸಿದ ಸಿಇಟಿ ಇನ್ನೂ ನಡೆದಿಲ್ಲ. ವೈದ್ಯ ಶಿಕ್ಷಣ ಪಿಜಿ ಕಾಮೆಡ್- ಕೆ ಪರೀಕ್ಷೆ ಮಾತ್ರ ನಡೆದಿದೆ ಎಂದು ಸ್ಪಷ್ಟಪಡಿಸಿದರು.
ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಶೇ.25ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕು ಎಂದು ನ್ಯಾಯಾಲಯ ನೀಡಿರುವ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಕಾನೂನು ಪ್ರಕಾರ ಎಲ್ಲರೂ ನಡೆದುಕೊಳ್ಳಬೇಕು. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ ಅವರ ಒಡೆತನದ ಕಾಲೇಜುಗಳಿಗೂ ಇದು ಅನ್ವಯವಾಗಲಿದೆ. ಕಾನೂನಿಗಿಂತ ಯಾರೂ ದೊಡ್ದವರಲ್ಲ ಎಂದು ದೇಶಪಾಂಡೆ ಹೇಳಿದರು.
ಕರ್ನಾಟಕ ವೃತ್ತಿಪರ ಶಿಕ್ಷಣ ಕಾಯ್ದೆ 2006ನ್ನು 2014ರ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಸಿದ್ದರಾಮಯ್ಯನವರ ಮುಂದಾಳ್ತನದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಈ ಕಾಯ್ದೆ ಜಾರಿಯಾದಲ್ಲಿ, ರಾಜ್ಯದಲ್ಲಿರುವ ಇಪ್ಪತ್ತು ಎಂಜಿನಿಯರಿಂಗ್ ಕಾಲೇಜುಗಳೂ ಮತ್ತು ಹತ್ತು ಮೆಡಿಕಲ್ ಕಾಲೇಜುಗಳಲ್ಲಿ ಮಾತ್ರ ಶುಲ್ಕ ಕಮ್ಮಿ ಇರುತ್ತದೆ. ಮಿಕ್ಕ 101 ಎಂಜಿನಿಯರಿಂಗ್ ಕಾಲೇಜುಗಳಲ್ಲೂ ಮತ್ತು 23 ಮೆಡಿಕಲ್ ಕಾಲೇಜುಗಳಲ್ಲೂ ಶುಲ್ಕ ಹೆಚ್ಚಳವಾಗುತ್ತದೆ. ಒಂದೊಂದು ಕಾಲೇಜಿನಲ್ಲೂ ಒಂದೊಂದು ಬಗೆಯ ಶುಲ್ಕವಿರಬಹುದು. ಸಿಇಟಿ ಕಾಯ್ದೆ ಯಾರಿಗೆ ಲಾಭ? ಯಾರಿಗೆ ನಷ್ಟ? ಮುಂದೆ ಓದಿ...