ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ಬಿಎಂಟಿಸಿ ಬಸ್
ಬೆಂಗಳೂರು, ಮಾ.5 : ಎಲೆಕ್ಟ್ರಾನಿಕ್ ಸಿಟಿ ತಲುಪಲು ಕಷ್ಟಪಡುವವರಿಗೆ ಸಿಹಿಸುದ್ದಿ. ಸದ್ಯ, ಇರುವ ಪ್ರಯಾಣದರದ ಜೊತೆಗೆ 15 ರೂ. ಹೆಚ್ಚು ಪಾವತಿ ಮಾಡಿದರೆ 45 ನಿಮಿಷಗಳಲ್ಲಿ ನಿಗದಿತ ಸ್ಥಳದಿಂದ ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ತಲುಪಬಹುದು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೈಸ್ ರಸ್ತೆಯಲ್ಲಿ ತನ್ನ ಸೇವೆಯನ್ನು ಆರಂಭಿಸಿದೆ. ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ತಲುಪುವ ನೂತನ ಬಸ್ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬುಧವಾರ ಚಾಲನೆ ನೀಡಿದ್ದಾರೆ. [ಬಿಎಂಟಿಸಿ ಆಪ್: ಬೆರಳ ತುದಿಯಲ್ಲೇ ಮಾಹಿತಿ]

ಸದ್ಯ, ಪೀಕ್ ಅವರ್ನಲ್ಲಿ ಎಲೆಕ್ಟ್ರಾನಿಕ್ ಸಿಟಿ ತಲುಪಲು ಒಂದು ಗಂಟೆಗೂ ಹೆಚ್ಚು ಸಮಯಬೇಕು. ಆದರೆ, 15 ರೂ. ಹೆಚ್ಚುವರಿ ಪ್ರಯಾಣದರ ಪಾವತಿ ಮಾಡಿದರೆ, 45 ನಿಮಿಷದಲ್ಲಿ ನಿಗದಿತ ಸ್ಥಳದಿಂದ ಎಲೆಕ್ಟ್ರಾನಿಕ್ ಸಿಟಿ ತಲುಪಬಹುದು. ತ್ವರಿತವಾಗಿ ಬಸ್ ಸೇವೆ ಒದಗಿಸಲು ಈ ಸೇವೆ ಆರಂಭಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. [ವೈಟ್ ಫೀಲ್ಡ್ ನಲ್ಲಿ ಚಕ್ರ ಸಾರಿಗೆ ಸೇವೆ]
ಎಲ್ಲಿಂದ ಈ ಸೇವೆ : ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ತಲುಪುವ ಸೇವೆ ಜಯದೇವ, ಬನಶಂಕರಿ, ಶ್ರೀನಗರ, ವಿಜಯನಗರ ಟಿಟಿಎಂಸಿ, ಬಿಇಎಂಎಲ್ 5ನೇ ಹಂತ, ಸುಮನಹಳ್ಳಿ, ಯಶವಂತಪುರ, ಬಸವೇಶ್ವರನಗರದಿಂದ ಲಭ್ಯವಿದೆ.
ಈ ಮಾರ್ಗದಲ್ಲಿ ಪ್ರಯಾಣಿಸುವವರು ಮಾಸಿಕ ಪಾಸು, ವಾರ್ಷಿಕ ಪಾಸು ಸೇರಿದಂತೆ ಎಲ್ಲ ರೀತಿಯ ಪಾಸುಗಳಿಗೂ ಹೆಚ್ಚುವರಿ 15 ರೂ. ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಹೆಚ್ಚು ಶುಲ್ಕ ಪಾವತಿ ಮಾಡಿ ಸಂಚಾರ ದಟ್ಟಣೆ ಇಲ್ಲದೇ ಎಲೆಕ್ಟ್ರಾನಿಕ್ ಸಿಟಿ ತಲುಪಬಹುದು.
ಮಾರ್ಗದ ವಿವರಗಳು
* ಜಯದೇವ-ಎಲೆಕ್ಟ್ರಾನಿಕ್ ಸಿಟಿ : ಹುಲಿಮಾವು ಗೇಟ್, ಗೊಟ್ಟಿಗೆರೆ, ನೈಸ್ ರಸ್ತೆ
* ಬನಶಂಕರಿ-ಎಲೆಕ್ಟ್ರಾನಿಕ್ ಸಿಟಿ : ಕೋಣನಕುಂಟೆ ಕ್ರಾಸ್, ತಲಘಟ್ಟಪುರ
* ಶ್ರೀನಗರ-ಎಲೆಕ್ಟ್ರಾನಿಕ್ ಸಿಟಿ : ಹೊಸಕೆರೆಹಳ್ಳಿ ಕ್ರಾಸ್, ಪಿಇಎಸ್ ಕಾಲೇಜು, ನೈಸ್ ರಸ್ತೆ
* ವಿಜಯನಗರ-ಎಲೆಕ್ಟ್ರಾನಿಕ್ ಸಿಟಿ : ಚಂದ್ರಲೇಔಟ್, ನಾಗರಬಾವಿ ಸರ್ಕಲ್, ನೈಸ್ ರಸ್ತೆ
* ಬಿಇಎಂಎಲ್ 5ನೇ ಹಂತ-ಎಲೆಕ್ಟ್ರಾನಿಕ್ ಸಿಟಿ : ರಾಜರಾಜೇಶ್ವರಿ ಗೇಟ್, ಕೆಂಗೇರಿ, ನೈಸ್ ರಸ್ತೆ
* ಸುಮನಹಳ್ಳಿ-ಎಲೆಕ್ಟ್ರಾನಿಕ್ ಸಿಟಿ : ಸುಂಕದಕಟ್ಟೆ, ಗೊಲ್ಲರಹಟ್ಟಿ, ನೈಸ್ ರಸ್ತೆ
* ಯಶವಂತಪುರ-ಎಲೆಕ್ಟ್ರಾನಿಕ್ ಸಿಟಿ : ಜಾಲಹಳ್ಳಿ ಕ್ರಾಸ್, ಅಂಚೆಪಾಳ್ಯ
* ಜಯನಗರ ಟಿಟಿಎಂಸಿ- ಎಲೆಕ್ಟ್ರಾನಿಕ್ ಸಿಟಿ : ಅತ್ತಿಗುಪ್ಪೆ, ಪಿಇಎಸ್ ಕಾಲೇಜು, ನೈಸ್ ರಸ್ತೆ
* ಬಸವೇಶ್ವರನಗರ- ಎಲೆಕ್ಟ್ರಾನಿಕ್ ಸಿಟಿ : ವಿಜಯನಗರ, ನಾಗರಬಾವಿ ಸರ್ಕಲ್, ನೈಸ್ ರಸ್ತೆ
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ












Click it and Unblock the Notifications