ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ಬಿಎಂಟಿಸಿ ಬಸ್
ಬೆಂಗಳೂರು, ಮಾ.5 : ಎಲೆಕ್ಟ್ರಾನಿಕ್ ಸಿಟಿ ತಲುಪಲು ಕಷ್ಟಪಡುವವರಿಗೆ ಸಿಹಿಸುದ್ದಿ. ಸದ್ಯ, ಇರುವ ಪ್ರಯಾಣದರದ ಜೊತೆಗೆ 15 ರೂ. ಹೆಚ್ಚು ಪಾವತಿ ಮಾಡಿದರೆ 45 ನಿಮಿಷಗಳಲ್ಲಿ ನಿಗದಿತ ಸ್ಥಳದಿಂದ ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ತಲುಪಬಹುದು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೈಸ್ ರಸ್ತೆಯಲ್ಲಿ ತನ್ನ ಸೇವೆಯನ್ನು ಆರಂಭಿಸಿದೆ. ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ತಲುಪುವ ನೂತನ ಬಸ್ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬುಧವಾರ ಚಾಲನೆ ನೀಡಿದ್ದಾರೆ. [ಬಿಎಂಟಿಸಿ ಆಪ್: ಬೆರಳ ತುದಿಯಲ್ಲೇ ಮಾಹಿತಿ]

ಸದ್ಯ, ಪೀಕ್ ಅವರ್ನಲ್ಲಿ ಎಲೆಕ್ಟ್ರಾನಿಕ್ ಸಿಟಿ ತಲುಪಲು ಒಂದು ಗಂಟೆಗೂ ಹೆಚ್ಚು ಸಮಯಬೇಕು. ಆದರೆ, 15 ರೂ. ಹೆಚ್ಚುವರಿ ಪ್ರಯಾಣದರ ಪಾವತಿ ಮಾಡಿದರೆ, 45 ನಿಮಿಷದಲ್ಲಿ ನಿಗದಿತ ಸ್ಥಳದಿಂದ ಎಲೆಕ್ಟ್ರಾನಿಕ್ ಸಿಟಿ ತಲುಪಬಹುದು. ತ್ವರಿತವಾಗಿ ಬಸ್ ಸೇವೆ ಒದಗಿಸಲು ಈ ಸೇವೆ ಆರಂಭಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. [ವೈಟ್ ಫೀಲ್ಡ್ ನಲ್ಲಿ ಚಕ್ರ ಸಾರಿಗೆ ಸೇವೆ]
ಎಲ್ಲಿಂದ ಈ ಸೇವೆ : ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ತಲುಪುವ ಸೇವೆ ಜಯದೇವ, ಬನಶಂಕರಿ, ಶ್ರೀನಗರ, ವಿಜಯನಗರ ಟಿಟಿಎಂಸಿ, ಬಿಇಎಂಎಲ್ 5ನೇ ಹಂತ, ಸುಮನಹಳ್ಳಿ, ಯಶವಂತಪುರ, ಬಸವೇಶ್ವರನಗರದಿಂದ ಲಭ್ಯವಿದೆ.
ಈ ಮಾರ್ಗದಲ್ಲಿ ಪ್ರಯಾಣಿಸುವವರು ಮಾಸಿಕ ಪಾಸು, ವಾರ್ಷಿಕ ಪಾಸು ಸೇರಿದಂತೆ ಎಲ್ಲ ರೀತಿಯ ಪಾಸುಗಳಿಗೂ ಹೆಚ್ಚುವರಿ 15 ರೂ. ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಹೆಚ್ಚು ಶುಲ್ಕ ಪಾವತಿ ಮಾಡಿ ಸಂಚಾರ ದಟ್ಟಣೆ ಇಲ್ಲದೇ ಎಲೆಕ್ಟ್ರಾನಿಕ್ ಸಿಟಿ ತಲುಪಬಹುದು.
ಮಾರ್ಗದ ವಿವರಗಳು
* ಜಯದೇವ-ಎಲೆಕ್ಟ್ರಾನಿಕ್ ಸಿಟಿ : ಹುಲಿಮಾವು ಗೇಟ್, ಗೊಟ್ಟಿಗೆರೆ, ನೈಸ್ ರಸ್ತೆ
* ಬನಶಂಕರಿ-ಎಲೆಕ್ಟ್ರಾನಿಕ್ ಸಿಟಿ : ಕೋಣನಕುಂಟೆ ಕ್ರಾಸ್, ತಲಘಟ್ಟಪುರ
* ಶ್ರೀನಗರ-ಎಲೆಕ್ಟ್ರಾನಿಕ್ ಸಿಟಿ : ಹೊಸಕೆರೆಹಳ್ಳಿ ಕ್ರಾಸ್, ಪಿಇಎಸ್ ಕಾಲೇಜು, ನೈಸ್ ರಸ್ತೆ
* ವಿಜಯನಗರ-ಎಲೆಕ್ಟ್ರಾನಿಕ್ ಸಿಟಿ : ಚಂದ್ರಲೇಔಟ್, ನಾಗರಬಾವಿ ಸರ್ಕಲ್, ನೈಸ್ ರಸ್ತೆ
* ಬಿಇಎಂಎಲ್ 5ನೇ ಹಂತ-ಎಲೆಕ್ಟ್ರಾನಿಕ್ ಸಿಟಿ : ರಾಜರಾಜೇಶ್ವರಿ ಗೇಟ್, ಕೆಂಗೇರಿ, ನೈಸ್ ರಸ್ತೆ
* ಸುಮನಹಳ್ಳಿ-ಎಲೆಕ್ಟ್ರಾನಿಕ್ ಸಿಟಿ : ಸುಂಕದಕಟ್ಟೆ, ಗೊಲ್ಲರಹಟ್ಟಿ, ನೈಸ್ ರಸ್ತೆ
* ಯಶವಂತಪುರ-ಎಲೆಕ್ಟ್ರಾನಿಕ್ ಸಿಟಿ : ಜಾಲಹಳ್ಳಿ ಕ್ರಾಸ್, ಅಂಚೆಪಾಳ್ಯ
* ಜಯನಗರ ಟಿಟಿಎಂಸಿ- ಎಲೆಕ್ಟ್ರಾನಿಕ್ ಸಿಟಿ : ಅತ್ತಿಗುಪ್ಪೆ, ಪಿಇಎಸ್ ಕಾಲೇಜು, ನೈಸ್ ರಸ್ತೆ
* ಬಸವೇಶ್ವರನಗರ- ಎಲೆಕ್ಟ್ರಾನಿಕ್ ಸಿಟಿ : ವಿಜಯನಗರ, ನಾಗರಬಾವಿ ಸರ್ಕಲ್, ನೈಸ್ ರಸ್ತೆ
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications