'ರಾಹುಲ್, ನೀವು ಹೇಳಿದ್ದಕ್ಕೆಲ್ಲ ಜೈ ಅನ್ನುವವರಲ್ಲ ನಾವು'!
ಮಳೆ ನಿಂತುಹೋದ ಮೇಲೆ ಹನಿಯೊಂದು ಜಾರಿದೆ, ಮಾತೆಲ್ಲ ಮುಗಿದ ಮೇಲೆ ದನಿಯೊಂದು ಮೂಡಿದೆ ಎನ್ನುವ ಹಾಗೆ, ರಾಹುಲ್ ಗಾಂಧಿಯ ಮೌಂಟ್ ಕಾರ್ಮೆಲ್ ಕಾಲೇಜಿನ ಮೋಜಿನ ಪ್ರಸಂಗ ಇನ್ನೂ ರಿಂಗಿಣಿಸುತ್ತಲೇ ಇದೆ, ಸೋಷಿಯಲ್ ಮೀಡಿಯಾದಲ್ಲಿ ಪ್ರತಿಧ್ವನಿಸುತ್ತಲೇ ಇದೆ. ರಾಹುಲ್ ಅವರಿಗೆ ಮುಜುಗರ ತಂದ ಪ್ರಸಂಗವನ್ನು ಸಮರ್ಥಿಸಿಕೊಂಡು ವಿದ್ಯಾರ್ಥಿನಿಯೊಬ್ಬರು ಬರೆದ ಲೇಖನ ವಾಟ್ಸಾಪ್ನಲ್ಲಿ ಹರಿದಾಡುತ್ತಿದೆ. ಅದನ್ನು ಇಲ್ಲಿ ಯಥಾವತ್ತಾಗಿ ನೀಡುತ್ತಿದ್ದೇವೆ.
***
ಆತ್ಮೀಯ ರಾಹುಲ್ ಗಾಂಧಿ, ನಮ್ಮ ಕಾಲೇಜಿನಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿದ್ದೆ. ನಿಮ್ಮ ಲೆಕ್ಟರ್ ಕುರಿತು ನನ್ನ ಕೆಲ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೆಂದಿದ್ದೇನೆ. ಮೊದಲನೇಯದಾಗಿ, ನಾವು ಸ್ವತಂತ್ರವಾಗಿ ವಿಚಾರ ಮಾಡುವಂಥ ಯುವತಿಯರು, ನೀವು ಹೇಳಿದ್ದಕ್ಕೆಲ್ಲ ತಲೆಯಾಡಿಸುವಂಥ, ಜೈಜೈಕಾರ ಮಾಡುವಂಥವರಲ್ಲ.
ನೀವು ಅರುಹಿದ ಕೆಲ ವಿಚಾರಧಾರೆಗಳನ್ನು ನಾವು ಮೆಚ್ಚಿಕೊಂಡೆವು ಮತ್ತು ಬೆಂಬಲಿಸಿದೆವು. ಕೆಲ ವಿಷಯಗಳ ಪ್ರಸ್ತಾಪನೆ ನಮಗೆ ಒಪ್ಪಿಗೆಯಾಗಲಿಲ್ಲ ಮತ್ತು ಅದಕ್ಕೆ ಅಸಮ್ಮತಿ ವ್ಯಕ್ತಪಡಿಸಿದೆವು. ದಯವಿಟ್ಟು ಇದನ್ನು ಕ್ರೀಡಾಸ್ಫೂರ್ತಿಯಿಂದ ತೆಗೆದುಕೊಳ್ಳಿ.
ಒಂದು ವೇಳೆ ಸ್ವಚ್ಛ ಭಾರತ ಅಭಿಯಾನ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ನಿಮ್ಮ ಮಾತು ಒಪ್ಪಿಕೊಂಡಿದ್ದರೂ ಅದು ದೇಶದ ವೈಫ್ಯಲ್ಯತೆಯಾಗುತ್ತದೆಯೇ ಹೊರತು ಪ್ರಧಾನಿ ಅವರದೊಬ್ಬರದೇ ಅಲ್ಲ! ಪೊಲಿಯೋ ಅಭಿಯಾನದಂತೆ ಸ್ವಚ್ಛ ಭಾರತ ಅಭಿಯಾನ ಕೂಡ ಪ್ರತಿ ವ್ಯಕ್ತಿಯ ಭಾಗವಹಿಸುವಿಕೆಯಿಂದ ಸಾಧ್ಯವಾಗುವಂಥದ್ದು. ದಶಕಗಳ ಪ್ರಯತ್ನದ ನಂತರ ಈಗ ಅದರ ಪ್ರತಿಫಲ ಸಿಗುತ್ತಿದೆ. ಇನ್ನು, ದಶಕಗಳಿಂದ, ಶತಮಾನಗಳಿಂದ ದೇಶದಲ್ಲಿ ತುಂಬಿಕೊಂಡಿರುವ ಕೊಳೆಯನ್ನು ಒಂದೇ ವರ್ಷದಲ್ಲಿ ತೊಲಗಿಸಲು ಹೇಗೆ ಸಾಧ್ಯ? [#RahulStumped? ನೋ ವೆ ಅಂತಾರೆ ಕಾರ್ಮೆಲ್ ಯುವತಿ]

ನೀವು ಮತ್ತು ನಾವು ಸೇರಿದಂತೆ ಎಲ್ಲರೂ ಸಾಂಸ್ಕೃತಿಕ ಬದಲಾವಣೆ ತರಬೇಕು. ಕೇವಲ ಮೋದಿ ಮತ್ತು ಅವರ ಅಧಿಕಾರಿಗಳಿಂದ ದೇಶವನ್ನು ಸ್ವಚ್ಛಗೊಳಿಸಲು ಸಾಧ್ಯವೆ? ಸಾಧ್ಯವೇಇಲ್ಲ. ದೇಶದ ಉದ್ಧಾರಕ್ಕಾಗಿ ಆರಂಭಿಸಿದಂಥ ಇಂಥ ಅಭಿಯಾನದ ಯಶಸ್ಸಿಗಾಗಿ ನಾವು ಪ್ರತಿಯೊಬ್ಬರೂ ಕೈಜೋಡಿಸಬೇಕು.
ಏನೇ ಆಗಲಿ, ದೇಶದ ಬಗ್ಗೆ ಸಕಾರಾತ್ಮಕ ಧೋರಣೆ ಇರುವಂಥ ನನ್ನಂಥ ಲಕ್ಷಾಂತರ ಯುವಕ ಯುವತಿಯರೆಲ್ಲ ಸೇರಿಕೊಂಡು ನಮ್ಮ ಸುತ್ತಮುತ್ತಲಿನ ಪ್ರದೇಶ ಸ್ವಚ್ಛ ಮಾಡುವುದು, ಜನರಲ್ಲಿ ಜಾಗೃತಿ ಮೂಡಿಸುವುದು, ಕಸದಬುಟ್ಟಿ ಹಂಚುವುದನ್ನು, ನಮಗಿರುವ ನಿಯಮಿತ ಸಾಮರ್ಥ್ಯದಲ್ಲಿಯೇ ಸಾಧ್ಯವಾದಮಟ್ಟಿಗೆ ಮಾಡುತ್ತಿದ್ದೇವೆ. ಅದಕ್ಕಾಗಿ, ನೀವು ಕೇಳಿದ ಪ್ರಶ್ನೆಗೆ ನಾನು 'ಯಸ್' ಎಂದು ಉತ್ತರಿಸಿದೆ. [ಅಂಗೈ ತೋರಿಸಿ ಅವಲಕ್ಷಣ ಎನ್ನಿಸಿಕೊಂಡ ರಾಹುಲ್!]
ಎರಡನೇಯದಾಗಿ, ಮೇಕ್ ಇನ್ ಇಂಡಿಯಾ ಫ್ಲಾಪ್ ಆಗಿದೆ ಎಂಬ ಪ್ರಶ್ನೆಗೆ ಅಲ್ಲಿಯೇ ಉತ್ತರಿಸಬೇಕೆಂದಿದ್ದೆ. ಆದರೆ, ಅಲ್ಲಿ ಸಾಕಷ್ಟು ಗದ್ದಲವೆದ್ದಿದ್ದರಿಂದ ಸಾಧ್ಯವಾಗಲಿಲ್ಲ. ಈ ಕಾರ್ಯಕ್ರಮ ಯಶಸ್ವಿಯಾಗಲು ನೀವು ಏನಾದರೂ ಮಾಡಿದ್ದೀರಾ? ಮೇಕ್ ಇನ್ ಇಂಡಿಯಾ ಸಾಧ್ಯವಾಗಿಸಲು ಮಸೂದೆಗಳನ್ನು ಅನುಮೋದಿಸುವುದನ್ನು ಹೊರತುಪಡಿಸಿ ನಿಮ್ಮನ್ನು ಏನೂ ಕೇಳಿಲ್ಲ. ಇದನ್ನು ಮಾಡ್ತೀರಾ? ಸಣ್ಣಸಣ್ಣ ಸಂಗತಿಗಳಿಗೆ ಜಾತಿ ಬಣ್ಣ ಬಳಿದು ದೇಶದ ದಾರಿ ತಪ್ಪಿಸಲು ಯತ್ನಿಸುತ್ತೀರಿ.
ನಿಮ್ಮ ಅಹಂಕಾರ ಪಕ್ಕಕ್ಕಿಡಿ, ದೇಶ ಮುಂದುವರಿಯಲು ಸಹಾಯ ಮಾಡಿ. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಮೋದಿಯವರು ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನ ಶುರು ಮಾಡಿದ್ದಾರೆ. ಅದನ್ನಾದರೂ ಬೆಂಬಲಿಸಿದಿರಾ? ನಿಮ್ಮಿಂದ ಒಂದೇಒಂದು ಸಕಾರಾತ್ಮಕ ಮಾತು ಕೇಳಿಬಂದಿಲ್ಲ. ನಿಮ್ಮ ಮಾತು ಒಂದೇ, ಸರಕಾರ ಸರಿಯಿಲ್ಲ. ಸರಕಾರ ಸರಿ ಕೆಲಸ ಮಾಡುತ್ತಿಲ್ಲ ಅಂತ ಯಾರೇ ಹೇಳಿದರೂ ಬೆಂಬಲಿಸುತ್ತೀರಿ. ಕೆಲ ಕೆಲಸಗಳು ಕೆಟ್ಟದ್ದಿರಬಹುಹು, ಕೆಲವು ಒಳ್ಳೆಯವೂ ಇವೆ.
ಪ್ರಧಾನಿ ಸೂಟ್ ಹಾಕುವುದನ್ನೇ ದೊಡ್ಡ ಇಶ್ಶೂ ಮಾಡುತ್ತಿದ್ದೀರಿ ಮತ್ತು ಹೊದಲ್ಲೆಲ್ಲ ಅದನ್ನೇ ಮಾತಾಡುತ್ತಿದ್ದೀರಿ. ಅದೇ ಮುಲಾಯಂ ತಮ್ಮ ಹುಟ್ಟುಹಬ್ಬದಂದು 90 ಕೋಟಿ ಖರ್ಚು ಮಾಡಿದ ಸಂಗತಿಯನ್ನು ಪ್ರಶ್ನಿಸಿದ್ದೀರಾ?
ನಾನೇನು ಬಿಜೆಪಿ ಭಕ್ತನಲ್ಲ. ದೇಶ ಮುನ್ನಡೆಯಬೇಕು ಎಂದು ಆಶಿಸುವ ಸಾಮಾನ್ಯ ವಿದ್ಯಾರ್ಥಿನಿ ಅಷ್ಟೆ. ನಮಗೆ ಸಕಾರಾತ್ಮಕವಾಗಿ ಮತ್ತು ರಚನಾತ್ಮಕವಾಗಿ ಕೆಲಸ ಮಾಡುವುದನ್ನು ಕಲಿಸಲಾಗಿದೆ. ನಿಮಗೂ ಅದನ್ನೇ ಹೇಳುತ್ತೇನೆ. ಸರಕಾರ ಮಾಡುತ್ತಿರುವ ಪ್ರತಿಯೊಂದನ್ನೂ ವಿರೋಧಿಸುವ ನಾಯಕ ನಮಗೆ ಬೇಕಿಲ್ಲ. ಇದು ಸಮಂಜಸವೂ ಅಲ್ಲ. ಯಾವುದನ್ನು ವಿರೋಧಿಸಬೇಕೋ ಅದನ್ನು ವಿರೋಧಿಸಿ, ಯಾವುದನ್ನು ಬೆಂಬಲಿಸಬೇಕೋ ಅದನ್ನು ಬೆಂಬಲಿಸಿ.
ಕಡೆಯದಾಗಿ, ನಿಮಗೆ ಮುಜುಗರ ತಂದವರಿಗೆ ಪಾಠ ಕಲಿಸಿ ಎಂದು ಬೆಂಗಳೂರಿಂದ ಹೊರಡುವ ಮುನ್ನ ರಾಜ್ಯ ಸರಕಾರಕ್ಕೆ ಹೇಳಿ ಹೋಗಿದ್ದೀರಂತೆ. ಇಲ್ಲಿ ನಡೆದಿದ್ದನ್ನೇ ಪ್ರತಿಷ್ಠೆಯನ್ನಾಗಿಸಿ ನೀವು ಈ ಮಟ್ಟಕ್ಕೆ ಇಳಿಯುತ್ತಿರುವುದು ನಿಜಕ್ಕೂ ದುರಾದೃಷ್ಟಕರ. ನಮ್ಮ ಕಾಲೇಜಿನ ವಿದ್ಯಾರ್ಥಿನಿಯರನ್ನು ಮತ್ತೆ ಕೆಣಕಬೇಡಿ. ಹಾಗೇನಾದರೂ ನಿಮ್ಮ ರಾಜ್ಯ ಸರಕಾರ ಮಾಡಿದರೆ ನಾವು ಮತ್ತೆ ಅದೇ ರೀತಿ ಪ್ರತಿಕ್ರಿಯಿಸಬೇಕಾಗುತ್ತದೆ, ಅದೂ ಇನ್ನೂ ದೊಡ್ಡ ಮಟ್ಟದಲ್ಲಿ.
ಅದೇನೋ ಕನ್ನಡದಲ್ಲಿ ಹೇಳ್ತಾರಲ್ಲ, ಬೆಂಕಿಯೊಂದಿಗೆ ಮತ್ತು ಯುವ ನಾರಿಯರೊಂದಿಗೆ ಯಾವತ್ತಿಗೂ ಸರಸವಾಡಬೇಡಿ. ಒಲಿದರೆ ನಾರಿ, ಮುನಿದರೆ ಮಾರಿ ಎಂಬುದನ್ನು ಮರೆಯಬೇಡಿ.
ಇಂತಿ,
ಮಾಧುರಿ, ಮೌಂಟ್ ಕಾರ್ಮೆಲ್ ಕಾಲೇಜು ವಿದ್ಯಾರ್ಥಿನಿ.
-
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
Gold: ದುಬೈಯಿಂದ ಭಾರತಕ್ಕೆ ಚಿನ್ನದ ಪೂರೈಕೆ ಪುನರಾರಂಭ; ಗ್ರಾಹಕರ ನಿರ್ಧಾರದಿಂದ ಬೆದರಿದ ವ್ಯಾಪಾರಿಗಳು -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ












Click it and Unblock the Notifications