Get Updates
Get notified of breaking news, exclusive insights, and must-see stories!

ಪರಿಸರ ಸಂರಕ್ಷಣೆಗೆ ಬೆಂಗಳೂರಲ್ಲಿ ಸೈಕಲ್ ಜಾಥಾ

ಬೆಂಗಳೂರು, ಡಿ. 14: 'ವಿಶ್ವ ಶಕ್ತಿ ಸಂರಕ್ಷಣಾ ದಿನಾಚರಣೆ' ಅಂಗವಾಗಿ ಅಸಿಸ್ಟ್​ಹೆಲ್ಪ್​ಸ್ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಸೈಕಲ್ ಜಾಥಾ ಆಯೋಜಿಸಿತ್ತು. ಸುಮಾರು 2000 ಕ್ಕೂ ಹೆಚ್ಚು ಶಾಲಾ ಮಕ್ಕಳು ಈ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದದ್ದರು.

ಖಾಲಿಯಾಗುವ ಶಕ್ತಿ ಮೂಲಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು, ನವೀಕರಣಗೊಳಿಸಬಲ್ಲ ಇಂಧನ ಶಕ್ತಿ ಬಳಕೆ ಒತ್ತು ನೀಡುವುದು ಮತ್ತು ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಸೈಕಲ್ ಜಾಥಾದ ಉದ್ದೇಶವಾಗಿತ್ತು.[ಪಾಲಿಥಿನ್ ಬ್ಯಾಗ್ ನಿಷೇಧ : ಉಡುಪಿ ಮಾದರಿ]

nature

ಜೀವಿಕ ಆಸ್ಪತ್ರೆ ಮತ್ತು ರೆಡ್ಡಿ ಆಸ್ಪತ್ರೆ ಮುಖ್ಯಸ್ಥರಾದ ಡಾ. ಅಶೋಕ್​ ರೆಡ್ಡಿ, ಚಲನಚಿತ್ರ ನಟರಾದ ಸುಚೇಂದ್ರ ಪ್ರಸಾದ್​, ನಟಿ ದೀಪಿಕಾ ದಾಸ್​ ಮತ್ತು ಆಶಿನಿ ಶೆಟ್ಟಿ ಭಾಗವಹಿಸಿದ್ದರು. ಆರ್​ ಜೆ ವಿನಾಯಕ್​ ಜೋಷಿ, ಲವ್​ ಗುರು ರಾಜೇಶ್​ ಸಾಥ್​ಮ ಅಂತಾರಾಷ್ಟ್ರೀಯ ಕ್ರೀಡಾಪಟು ಅರ್ಜುನ್​ ದೇವಯ್ಯ ಹಾಜರಿದ್ದರು.

ಸೈಕಲ್ ಜಾಥಾದಲ್ಲಿ 17 ವರ್ಷದೊಳಗಿನ ಮಕ್ಕಳು ಮತ್ತು ಯುವಕರು ಭಾಗವಹಿಸಿದರು. ಅಸಿಸ್ಟ್​ಹೆಲ್ಪ್​ ಪ್ರತಿಷ್ಠಾನ ಮತ್ತು ಕ್ವಿಟಿಲ್ಸ್​ ಇಂಡಿಯಾ ಆಯೋಜಿಸಿದ್ದ ಈ ಜಾಥಾ 5 ಕಿಮೀ ದೂರ ಸಾಗಿತು.[ಬಾಲ ಕಾರ್ಮಿಕರ ಉಳಿಸಲು ಇ ಪತ್ರಿಕೆ]

nature 1

ಎನ್​ಜಿಓ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಅಸಿಸ್ಟ್​ಹೆಲ್ಪ್​ ಪ್ರತಿಷ್ಟಾನ ಒಂದು 'ಪ್ರತಿಯೊಬ್ಬರು ಪ್ರತಿಯೊಬ್ಬರಿಗಾಗಿ' ಎಂಬ ಧ್ಯೇಯ ಇಟ್ಟುಕೊಂಡು ಕೆಲಸಮಾಡುತ್ತಿದೆ. ಆರೋಗ್ಯ, ಪರಿಸರ, ವಿದ್ಯಾಭ್ಯಾಸ ಮತ್ತು ಬಡತನದ ಬಗ್ಗೆ ಜಾಗೃತಿ ಮತ್ತು ನಿರ್ಮೂಲನೆಗೆ ಪ್ರಯತ್ನಪಡುತ್ತಿದೆ.

nature 2
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+