Namma Metro: ಬೆಂಗಳೂರಿಗೆ ಬಂತು 3ನೇ ರೈಲು, ಜೂನ್ ಅಂತ್ಯಕ್ಕೆ 'ಹಳದಿ ಮಾರ್ಗ'ದ ಕಾರ್ಯಾಚರಣೆ?
ಬೆಂಗಳೂರು, ಮೇ 16: ಬೆಂಗಳೂರಿನ ನಮ್ಮ ಮೆಟ್ರೋ ಹೆಬ್ಬಗೋಡಿ ಡಿಪೋಗೆ ಪಶ್ಚಿಮ ಬಂಗಾಳದ ಟಿಟಾಗರ್ನಿಂದ ಹೊಸ ಡ್ರೈವರ್ಲೆಸ್ ಬೋಗಿಗಳು ಆಗಮಿಸಿವೆ. ಕಳೆ ತಿಂಗಳಾಂತ್ಯಕ್ಕೆ ರಸ್ತೆ ಮೂಲಕ ಹೊರಟ್ಟಿದ್ದ ಮೆಟ್ರೋ ಬೋಗಿಗಳು ಸುರಕ್ಷಿತವಾಗಿ ರಾಜಧಾನಿ ತಲುಪಿವೆ. ಇವುಗಳನ್ನು ಹಳಿಗೆ ಇಳಿಸಿ ಜೋಡಿಸುವ ಕಾರ್ಯ ನಡೆಯುತ್ತಿದೆ. ಈ ಮೂಲಕ ನಮ್ಮ ಮೆಟ್ರೋ ಹಳದಿ ಮಾರ್ಗದ ಕಾರ್ಯಾಚರಣೆಯ ಮಹತ್ವದ ಅಪ್ಡೇಟ್ ಸಿಕ್ಕಂತಾಗಿದೆ.
ಪಶ್ಚಿಮ ಬಂಗಾಳದ ಟಿಟಾಗರ್ ನಿಂದ ಕಳೆದ ಏಪ್ರಿಲ್ 29ರಂದು ಮೆಟ್ರೋ ಬೋಗಿಗಳನ್ನು ರವಾನಿಸಲು ಹಸಿರು ನಿಶಾನೆ ತೋರಿಸಲಾಗಿತ್ತು. ಮೂರನೇ ರೈಲಿನ ಒಟ್ಟು ಆರು ಬೋಗಿಗಳ ಪೈಕಿ ಮೂರು ರೈಲು ಬೋಗಿಗಳಿಗೆ ಅಂದು ಚಾಲನೆ ನೀಡಲಾಗಿತ್ತು. ಉಳಿದ ಮೂರು ಬೋಗಿಗಳನ್ನು ಮೇ 02ರಂದು ಕಳುಹಿಸಿದೆ.

ಜೂನ್ನಲ್ಲಿ ಹಳದಿ ಮಾರ್ಗ ಓಪನ್..?
ಬೃಹತ್ ಲಾರಿಗಳಿಂದ ರಸ್ತೆ ಮಾರ್ಗವಾಗಿ ಬಂದ ಮೂರನೇ ರೈಲನ್ನು ಕೆಳಗೆ ಇಳಿಸಿ ಹಳಿಗೆ ಜೋಡಿಸಲಾಗುತ್ತಿದೆ. ಶೀಘ್ರವೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತ (CMRS) ಅಧಿಕಾರಿಗಳ ಗುಂಪು ವಿವಿಧ ಹಂತಗಳಲ್ಲಿ ಹೊಸ ರೈಲನ್ನು ಪರಿಶೀಲಿಸಲಿದೆ. ಜೂನ್ ಅಂತ್ಯಕ್ಕೆ ಹಳದಿ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ ಚಿಂತನೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಚಿಂತನೆ ಇಟ್ಟುಕೊಂಡಿದೆ.
ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲು ಒಟ್ಟು ಸುಮಾರು 15 ರೈಲುಗಳ ಅಗತ್ಯವಿದೆ. ಸುಮಾರು ಎಂಟು ರೈಲುಗಳು ಸಿಕ್ಕಲ್ಲಿ ಅವನ್ನು ಪ್ರತಿ 15 ನಿಮಿಷಕ್ಕೆ ಒಂದರಂತೆ ಓಡಿಸಲಾಗುತ್ತದೆ. ಸದ್ಯ ಅಷ್ಟು ರೈಲುಗಳು ಲಭ್ಯವಿಲ್ಲ ಕಾರಣ, ಇರು ರೈಲಿನಲ್ಲೇ ಪ್ರತಿ 30 ನಿಮಿಷಕ್ಕೆ ಒಂದರಂತೆ ಓಡಿಸಲು ಪ್ಲಾನ್ ಮಾಡಿಕೊಂಡಿದೆ.
ಹಸಿರು ಮಾರ್ಗದ ರಾಷ್ಟ್ರೀಯ ವಿದ್ಯಾಯಲಯ ರಸ್ತೆಯಿಂದ ಬೊಮ್ಮಸಂದ್ರವರೆಗೆ ಒಟ್ಟು 18 ಕಿಲೋ ಮೀಟರ್ ಇದೆ. ಈ ಮಾರ್ಗ ಬೆಂಗಳೂರಿನ ಮಟ್ಟಿಗೆ ನಿರ್ಣಾಯಕ ಅಂತಲೂ ಹೇಳಲಾಗುತ್ತಿದೆ. ಈ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಪ್ರಯಾಣಿಕರು ಕಾಯುತ್ತಿದ್ದಾರೆ.
36 ಸೆಟ್ ರೈಲು ಬರಬೇಕಿದೆ
ನಮ್ಮ ಮೆಟ್ರೋ ಈಗಾಗಲೇ 216 ಬೋಗಿಗಳನ್ನು ಅಂದರೆ 36 ರೈಲು ಸೆಟ್ಗಳನ್ನು ತಯಾರಿಸಿ ಕೊಡುವಂತೆ ಚೀನಾ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಲ್ಲಿ ಒಂದಷ್ಟು ರೈಲುಗಳು ಪಶ್ಚಿಮ ಬಂಗಾಳದ ಟಿಟಾಗರ್ನಲ್ಲಿ ಸಿದ್ಧಗೊಳ್ಳಲಿವೆ. ಕೊರೋನಾ ನಂತರ ಚೀನಾ ಕಂಪನಿಯು ಟಿಟಾಗರ್ ಕಂಪನಿಗೆ ಬಿಡಿಭಾಗ ಹಸ್ತಾಂತರಿಸುತ್ತಿದೆ.
ಒಪ್ಪಂದಂತೆ ಮೂರನೇ ರೈಲು ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಪ್ರೊಟೋ ಟೈಪ್ ಮಾದರಿ ಮೆಟ್ರೋ ರೈಲುಗಳನ್ನು ಪೂರೈಸಲು ಕಂಪನಿ ಒಪ್ಪಿಕೊಂಡಿದೆ. ಒಪ್ಪಂದದ ಎಲ್ಲ ರೈಲುಗಳ ಪೈಕಿ 14-15 ರೈಲುಗಳು ಹಳದಿ ಮಾರ್ಗಕ್ಕೆ, ಉಳಿದವುಗಳಲ್ಲಿ ಗುಲಾಬಿ ಮಾರ್ಗ ಹಾಗೂ ಹಾಲಿ ಇರುವ ಮಾರ್ಗಗಳಲ್ಲೂ ಸಂಚರಿಸಲಿವೆ ಎಂದು ಬಿಎಂಆರ್ಸಿಎಲ್ ಮೂಲಗಳು ಮಾಹಿತಿ ನೀಡಿವೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications