Get Updates
Get notified of breaking news, exclusive insights, and must-see stories!

Namma Metro Work: ಬೆಂಗಳೂರಿನಲ್ಲಿ ಮುಚ್ಚಲಿದೆ ಪ್ರಮುಖ ಫ್ಲೈಓವರ್‌- ಹೆಚ್ಚಲಿದೆ ಸಂಚಾರ ದಟ್ಟಣೆ; ಮಾಹಿತಿ, ವಿವರ

ಬೆಂಗಳೂರು, ಅಕ್ಟೋಬರ್‌ 24: ಬೆಂಗಳೂರು ಮಹಾನಗರದ ಟ್ರಾಫಿಕ್‌ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಲಿದೆ. ಮೆಟ್ರೋ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಫ್ಲೈಓವರ್‌ವೊಂದನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೆಂಟ್ರಲ್‌ ಸಿಲ್ಕ್ ಬೋರ್ಡ್ ಜಂಕ್ಷನ್ ಫ್ಲೈಓವರ್‌ ಅನ್ನು ನಾಲ್ಕು ತಿಂಗಳುಗಳ ಕಾಲ ಮುಚ್ಚಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Namma Metro Work: Traffic may get worse in Bengaluru due to closure of flyover for metro work

ಮೆಟ್ರೋ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಲು ಸಿಲ್ಕ್ ಬೋರ್ಡ್ ಜಂಕ್ಷನ್ ಫ್ಲೈಓವರ್‌ನ ಒಂದು ಬದಿಯನ್ನು ಭಾಗಶಃ ಮುಚ್ಚಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಮಾಹಿತಿ ನೀಡಿದೆ.

ನಮ್ಮ ಮೆಟ್ರೋದ ಹೇಳಿಕೆಯ ಪ್ರಕಾರ, ಮಡಿವಾಳ ಬಳಿಯ ಫ್ಲೈಓವರ್‌ನ ಅಪ್ ಮತ್ತು ಡೌನ್ ರಾಂಪ್‌ನ ಮುಖ್ಯ ಕ್ಯಾರೇಜ್‌ವೇಯ ಎರಡೂ ಬದಿಗಳನ್ನು ಮುಚ್ಚಲಾಗುವುದು. 2.5 ಮೀಟರ್ ಅಗಲದ ರಸ್ತೆಯನ್ನು ನಾಲ್ಕು ತಿಂಗಳ ಕಾಲ ಬ್ಯಾರಿಕೇಡ್ ಮಾಡಲಾಗುವುದು.

Namma Metro Work: Traffic may get worse in Bengaluru due to closure of flyover for metro work

ನಮ್ಮ ಮೆಟ್ರೋ ಪ್ರಸ್ತುತ ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲವಾಗಿದೆ. ಒಟ್ಟು 72.2 ಕಿಮೀ ಉದ್ದವನ್ನು ಇದು ವ್ಯಾಪಿಸಿದೆ. ಹೆಚ್ಚುವರಿಯಾಗಿ, 97.84 ಕಿ.ಮೀ ಉದ್ದದ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ.

ಅಸ್ತಿತ್ವದಲ್ಲಿರುವ ಮೆಟ್ರೊ ನೆಟ್‌ವರ್ಕ್‌ ಎರಡು ಮಾರ್ಗಗಳನ್ನು ಒಳಗೊಂಡಿದೆ. ಅವುಗಳೆಂದರೆ ಹಸಿರು ಮತ್ತು ನೇರಳೆ ಮಾರ್ಗಗಳು. ನೇರಳೆ ಲೈನ್ 42.17 ಕಿಮೀ ದೂರವನ್ನು ಒಳಗೊಂಡಿದೆ. ಇದು 37 ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. ಆದರೆ, ಹಸಿರು ಮಾರ್ಗವು 3 ಕಿಮೀ ವ್ಯಾಪಿಸಿದೆ. ಇದು 29 ನಿಲ್ದಾಣಗಳನ್ನು ಒಳಗೊಂಡಿದೆ.

ಹಳದಿ, ಗುಲಾಬಿ ಮತ್ತು ನೀಲಿ ಮಾರ್ಗಗಳ ನಿರ್ಮಾಣವು ಪ್ರಸ್ತುತ ನಡೆಯುತ್ತಿದೆ. ಇದು ಮೆಟ್ರೋ ಜಾಲವನ್ನು 97.84 ಕಿಮೀ ವಿಸ್ತರಿಸಲಿದೆ.

ಟ್ರಾಫಿಕ್‌ ಸಮಸ್ಯೆಗೆ ಡಿಕೆಶಿ ಪರಿಹಾರ

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆಯನ್ನು ನಿವಾರಿಸಲು 190 ಕಿಮೀ ಉದ್ದದ ಸುರಂಗದ ಯೋಜನೆಯನ್ನು ಘೋಷಿಸಿದ್ದಾರೆ.

45 ದಿನಗಳಲ್ಲಿ ರಾಜ್ಯ ಸರ್ಕಾರವು ಯೋಜನೆಗೆ ಸಾರ್ವಜನಿಕ ಟೆಂಡರ್‌ಗಳನ್ನು ಆಹ್ವಾನಿಸುತ್ತದೆ ಎಂದು ತಿಳಿಸಿದ್ದಾರೆ.

ಸುರಂಗ ರಸ್ತೆಯ ಯೋಜನೆಯ ಸಂಪೂರ್ಣ ಅಧ್ಯಯನವನ್ನು ಕಂಪನಿಗಳು ನಡೆಸಲಿವೆ. ಸುರಂಗ ಮಾರ್ಗದ ಲೇನ್‌ಗಳ ಸಂಖ್ಯೆ ನಾಲ್ಕು ಅಥವಾ ಆರಾಗಿರುತ್ತದೆ ಎಂದು ಡಿಕೆಶಿ ಹೇಳಿದ್ದಾರೆ.

ಹೆಚ್ಚುವರಿಯಾಗಿ, ಗುಂಡಿಗಳ ಸಮಸ್ಯೆಯನ್ನು ಪರಿಹರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂಜಿನಿಯರ್‌ಗಳು ಮತ್ತು ಸಂಚಾರ ಪೊಲೀಸರ ಸಹಯೋಗದ ಅಗತ್ಯವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಒತ್ತಿ ಹೇಳಿದರು.

ಮಳೆಗಾಲದಲ್ಲಿ ಗುಂಡಿಗಳು ಹೆಚ್ಚಾಗಿ ಬೀಳುತ್ತವೆ. ಆ ಸಂದರ್ಭದಲ್ಲಿ ತಕ್ಷಣ ದುರಸ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+