ಮೆಟ್ರೋದಲ್ಲಿ ಲಗೇಜ್ 15 ಕೆಜಿ ಮೀರಿದರೆ 30 ರೂ. ಟಿಕೇಟ್ ಕಡ್ಡಾಯ
ಬೆಂಗಳೂರು, ಡಿಸೆಂಬರ್ 08 : ನಮ್ಮ ಮೆಟ್ರೋ ರೈಲಿನಲ್ಲಿ ಕೇವಲ ಪ್ರಯಾಣ ಮಾಡುವವರು ಮಾತ್ರ ಟಿಕೇಟ್ ಪಡೆಯುವುದಲ್ಲ ಇನ್ನುಮುಂದೆ ಲಗೇಜ್ ಗಳಿಗೂ ಕೂಡ ಹಣ ಪಾವತಿಸಬೇಕು.
ಹೌಡು ಪ್ರಯಾಣಿಕರು ತಮ್ಮ ಜತೆಯಲ್ಲಿ ತೆಗೆದುಕೊಂಡು ಹೋಗುವ ಬ್ಯಾಗ್ ಗಳಿಗೆ ಬಿಎಂಆರ್ ಸಿಎ ಎಲ್ ದರ ನಿಗದಿ ಮಾಡಿದೆ. ಈ ಹಿಂದೆ 15 ಕೆಜಿಗಿಂತ ಹೆಚ್ಚು ಭಾರವಿರುವ ಲಗೇಜ್ ತೆಗೆದುಕೊಂಡು ಹೋಗುವಂತಿರಲಿಲ್ಲ.
ಅದಾದ ನಂತರ ಪ್ರಯಾಣಿಕರ ಒತ್ತಾಯದ ಮೇರೆಗೆ 15 ಕೆಜಿ ಭಾರತದ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು ಅದರೆ 10 ರೂ. ನೀಡಬೇಕಾಗಿತ್ತು. ಅದರೆ ಇದೀಗ ದರವನ್ನು ಏರಿಕೆ ಮಾಡಿದೆ. 15 ಕೆ.ಜಿಗಿಂತ ಹೆಚ್ಚು ಭಾರವಿರುವ ಲಗೇಜ್ ತೆಗೆದುಕೊಂಡು ಹೋಗಬಹುದು ಆದರೆ 30ರೂ. ತೆರಬೇಕಾಗುತ್ತದೆ.

ತೂಕಕ್ಕೆ ಸಮರ್ಪಕ ಯಂತ್ರವಿಲ್ಲ:
ಲಗೇಜ್ ಹೊತ್ತು ಹೊರಗಡೆ ಹೋಗುವ ಮೊದಲು ಭದ್ರತಾ ಸಿಬ್ಬಂದಿಗಳು ಬ್ಯಾಗ್ ನ್ನು ಪರೀಕ್ಷಿಸುತ್ತಾರೆ. ಅವರು ತಮ್ಮ ಕೈಯಲ್ಲಿ ಬ್ಯಾಗ್ ಹಿಡಿದು ಅಂದಾಜಿನ ಮೇಲೆ ತೂಕವನ್ನು ಹೇಳುತ್ತಾರೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೊಮ್ಮೆ ಲಗೇಜ್ ಗೆ ಹಣ ತೆರುವುದಾದರೆ ಸಮರ್ಪಕ ತೂಕ ಯಂತ್ರವನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಿಯಮ ಜಾರಿಯಾಗಿ ಒಂದು ವಾರ:
ಲೇಗೇಜ್ ಗೆ ಹಣ ನೀಡುವ ನಿಯಮ ಜಾರಿಯಾಗಿ ಒಂದು ವಾರವಾಗಿದೆ. ಎಲ್ಲಾ ಮೆಟ್ರೋ ನಿಲ್ದಾಣದಲ್ಲಿಯೂ ಇನ್ನು ಪ್ರತ್ಯೇಕ ಟಿಕೇಟ್ ನೀಡುತ್ತಿಲ್ಲ. ಆದರೆ ಕೆಲವು ನಿಲ್ದಾಣಗಳಲ್ಲಿ ಮುನ್ಸೂಚನೆ ನೀಡದೆ ದಂಡ ವಿಧಿಸಿದ್ದಾರೆ. ಆದರೆ ತೂಕ ಯಂತ್ರ ಇಲ್ಲದಿರುವುದರಿಂದ ಕಡಿಮೆ ತೂಕದ ಬ್ಯಾಕಿಗೂ ಕೂಡ ಟಿಕೇಟ್ ನೀಡಬೇಕಾಗಿ ಬರಬಹುದು.

ಎಲ್ಲೂ ಇಲ್ಲದ ನಿಯಮ ಇಲ್ಲೇಕೆ ಎಂಬುದು ಪ್ರಾಯಣಿಕರ ಪ್ರಶ್ನೆ:
'ಒತ್ತಾಯದಿಂದ ಬ್ಯಾಗ್ಗಳಿಗೆ ಹಣ ಪಡೆಯುವುದು ಸರಿಯಲ್ಲ. ದೆಹಲಿ ಮೆಟ್ರೊದಲ್ಲಿ ಇಲ್ಲದ ನಿಯಮ ಇಲ್ಲಿ ಏಕೆ' ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ರೈಲು, ಕೆಎಸ್ ಆರ್ಟಿಸಿ ಹಾಗೂ ಬಿಎಂಟಿಸಿಯಲ್ಲಿ ಬ್ಯಾಗ್ಗಳಿಗೆ ಪ್ರತ್ಯೇಕ ಟಿಕೆಟ್ ಇಲ್ಲ. ಕೆಲವೊಂದು ಕಡೆ ಮಾತ್ರ 25 ಕೆಜಿ ಮೀರಿದರೆ 10 ರೂ. ತೆಗೆದುಕೊಳ್ಳುತ್ತಾರೆ. ವಿಮಾನದಲ್ಲಿ 19 ಕೆ.ಜಿ ಗಿಂತ ಹೆಚ್ಚಿದ್ದರೆ ಮಾತ್ರ 20 ಸಂಗ್ರಹಿಸುತ್ತಾರೆ'

500ರೂ. ಬದಲಾಗಿ 200 ರೂ. ದಂಡ
ಮೆಟ್ರೋದಲ್ಲಿ ಒಂದೊಮ್ಮೆ ಟೋಕನ್ ಕಳೆದುಕೊಂಡರೆ500 ರೂ. ದಂಡ ವಿಧಿಸುವುದಾಗಿ ಬಿಎಂಆರ್ ಸಿ ಎಲ್ ಒಂದು ವಾರದ ಹಿಂದೆ ಹೇಳಿತ್ತು. ಆದರೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ 500 ರೂ. ಇದ್ದ ದಂಡವನ್ನು200 ರೂ.ಗೆ ಇಳಿಕೆ ಮಾಡಲಾಗಿದೆ. ಆದರೆ ಅದರೊಂದಿಗೆ ಗರಿಷ್ಠ ಪ್ರಯಾಣ ದರ 60 ರೂ. 260ರೂ. ನೀಡಬೇಕು.
-
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
Gold: ದುಬೈಯಿಂದ ಭಾರತಕ್ಕೆ ಚಿನ್ನದ ಪೂರೈಕೆ ಪುನರಾರಂಭ; ಗ್ರಾಹಕರ ನಿರ್ಧಾರದಿಂದ ಬೆದರಿದ ವ್ಯಾಪಾರಿಗಳು -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ












Click it and Unblock the Notifications