ಮೆಟ್ರೋದಲ್ಲಿ ಲಗೇಜ್ 15 ಕೆಜಿ ಮೀರಿದರೆ 30 ರೂ. ಟಿಕೇಟ್ ಕಡ್ಡಾಯ
ಬೆಂಗಳೂರು, ಡಿಸೆಂಬರ್ 08 : ನಮ್ಮ ಮೆಟ್ರೋ ರೈಲಿನಲ್ಲಿ ಕೇವಲ ಪ್ರಯಾಣ ಮಾಡುವವರು ಮಾತ್ರ ಟಿಕೇಟ್ ಪಡೆಯುವುದಲ್ಲ ಇನ್ನುಮುಂದೆ ಲಗೇಜ್ ಗಳಿಗೂ ಕೂಡ ಹಣ ಪಾವತಿಸಬೇಕು.
ಹೌಡು ಪ್ರಯಾಣಿಕರು ತಮ್ಮ ಜತೆಯಲ್ಲಿ ತೆಗೆದುಕೊಂಡು ಹೋಗುವ ಬ್ಯಾಗ್ ಗಳಿಗೆ ಬಿಎಂಆರ್ ಸಿಎ ಎಲ್ ದರ ನಿಗದಿ ಮಾಡಿದೆ. ಈ ಹಿಂದೆ 15 ಕೆಜಿಗಿಂತ ಹೆಚ್ಚು ಭಾರವಿರುವ ಲಗೇಜ್ ತೆಗೆದುಕೊಂಡು ಹೋಗುವಂತಿರಲಿಲ್ಲ.
ಅದಾದ ನಂತರ ಪ್ರಯಾಣಿಕರ ಒತ್ತಾಯದ ಮೇರೆಗೆ 15 ಕೆಜಿ ಭಾರತದ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು ಅದರೆ 10 ರೂ. ನೀಡಬೇಕಾಗಿತ್ತು. ಅದರೆ ಇದೀಗ ದರವನ್ನು ಏರಿಕೆ ಮಾಡಿದೆ. 15 ಕೆ.ಜಿಗಿಂತ ಹೆಚ್ಚು ಭಾರವಿರುವ ಲಗೇಜ್ ತೆಗೆದುಕೊಂಡು ಹೋಗಬಹುದು ಆದರೆ 30ರೂ. ತೆರಬೇಕಾಗುತ್ತದೆ.

ತೂಕಕ್ಕೆ ಸಮರ್ಪಕ ಯಂತ್ರವಿಲ್ಲ:
ಲಗೇಜ್ ಹೊತ್ತು ಹೊರಗಡೆ ಹೋಗುವ ಮೊದಲು ಭದ್ರತಾ ಸಿಬ್ಬಂದಿಗಳು ಬ್ಯಾಗ್ ನ್ನು ಪರೀಕ್ಷಿಸುತ್ತಾರೆ. ಅವರು ತಮ್ಮ ಕೈಯಲ್ಲಿ ಬ್ಯಾಗ್ ಹಿಡಿದು ಅಂದಾಜಿನ ಮೇಲೆ ತೂಕವನ್ನು ಹೇಳುತ್ತಾರೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೊಮ್ಮೆ ಲಗೇಜ್ ಗೆ ಹಣ ತೆರುವುದಾದರೆ ಸಮರ್ಪಕ ತೂಕ ಯಂತ್ರವನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಿಯಮ ಜಾರಿಯಾಗಿ ಒಂದು ವಾರ:
ಲೇಗೇಜ್ ಗೆ ಹಣ ನೀಡುವ ನಿಯಮ ಜಾರಿಯಾಗಿ ಒಂದು ವಾರವಾಗಿದೆ. ಎಲ್ಲಾ ಮೆಟ್ರೋ ನಿಲ್ದಾಣದಲ್ಲಿಯೂ ಇನ್ನು ಪ್ರತ್ಯೇಕ ಟಿಕೇಟ್ ನೀಡುತ್ತಿಲ್ಲ. ಆದರೆ ಕೆಲವು ನಿಲ್ದಾಣಗಳಲ್ಲಿ ಮುನ್ಸೂಚನೆ ನೀಡದೆ ದಂಡ ವಿಧಿಸಿದ್ದಾರೆ. ಆದರೆ ತೂಕ ಯಂತ್ರ ಇಲ್ಲದಿರುವುದರಿಂದ ಕಡಿಮೆ ತೂಕದ ಬ್ಯಾಕಿಗೂ ಕೂಡ ಟಿಕೇಟ್ ನೀಡಬೇಕಾಗಿ ಬರಬಹುದು.

ಎಲ್ಲೂ ಇಲ್ಲದ ನಿಯಮ ಇಲ್ಲೇಕೆ ಎಂಬುದು ಪ್ರಾಯಣಿಕರ ಪ್ರಶ್ನೆ:
'ಒತ್ತಾಯದಿಂದ ಬ್ಯಾಗ್ಗಳಿಗೆ ಹಣ ಪಡೆಯುವುದು ಸರಿಯಲ್ಲ. ದೆಹಲಿ ಮೆಟ್ರೊದಲ್ಲಿ ಇಲ್ಲದ ನಿಯಮ ಇಲ್ಲಿ ಏಕೆ' ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ರೈಲು, ಕೆಎಸ್ ಆರ್ಟಿಸಿ ಹಾಗೂ ಬಿಎಂಟಿಸಿಯಲ್ಲಿ ಬ್ಯಾಗ್ಗಳಿಗೆ ಪ್ರತ್ಯೇಕ ಟಿಕೆಟ್ ಇಲ್ಲ. ಕೆಲವೊಂದು ಕಡೆ ಮಾತ್ರ 25 ಕೆಜಿ ಮೀರಿದರೆ 10 ರೂ. ತೆಗೆದುಕೊಳ್ಳುತ್ತಾರೆ. ವಿಮಾನದಲ್ಲಿ 19 ಕೆ.ಜಿ ಗಿಂತ ಹೆಚ್ಚಿದ್ದರೆ ಮಾತ್ರ 20 ಸಂಗ್ರಹಿಸುತ್ತಾರೆ'

500ರೂ. ಬದಲಾಗಿ 200 ರೂ. ದಂಡ
ಮೆಟ್ರೋದಲ್ಲಿ ಒಂದೊಮ್ಮೆ ಟೋಕನ್ ಕಳೆದುಕೊಂಡರೆ500 ರೂ. ದಂಡ ವಿಧಿಸುವುದಾಗಿ ಬಿಎಂಆರ್ ಸಿ ಎಲ್ ಒಂದು ವಾರದ ಹಿಂದೆ ಹೇಳಿತ್ತು. ಆದರೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ 500 ರೂ. ಇದ್ದ ದಂಡವನ್ನು200 ರೂ.ಗೆ ಇಳಿಕೆ ಮಾಡಲಾಗಿದೆ. ಆದರೆ ಅದರೊಂದಿಗೆ ಗರಿಷ್ಠ ಪ್ರಯಾಣ ದರ 60 ರೂ. 260ರೂ. ನೀಡಬೇಕು.
-
Karnataka Weather: ಕಲಬುರಗಿಯಲ್ಲಿ 41ಡಿಸೆ ತಾಪಮಾನ, ಉಷ್ಣಅಲೆ ಎಚ್ಚರಿಕೆ, ಕೆಲವೆಡೆ ಮಳೆ ಸಾಧ್ಯತೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
IPL ಪ್ರೇಕ್ಷಕರಿಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ನಮ್ಮ ಮೆಟ್ರೋ ಸೇವೆ ವಿಸ್ತರಣೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ












Click it and Unblock the Notifications