Namma Metro: 13ನೇ ವರ್ಷಕ್ಕೆ ಕಾಲಿಟ್ಟ ನಮ್ಮ ಮೆಟ್ರೋ: ಸಾಧನೆಗಳು, ಮುಂದಿನ ಸವಾಲುಗಳು
ಬೆಂಗಳೂರು: ನಮ್ಮ ಮೆಟ್ರೋ ಆರಂಭವಾಗಿ ಇಂದಿಗೆ (ಅಕ್ಟೋಬರ್ 20) 12 ವರ್ಷಗಳು ಪೂರೈಸಿದ್ದು, 13ನೇ ವರ್ಷಕ್ಕೆ ಕಾಲಿಡುತ್ತಿದೆ. ಆರಂಭದಲ್ಲಿ ನಮ್ಮ ಮೆಟ್ರೋ ಬಗ್ಗೆ ಹಲವರು ಹಾಸ್ಯ ಮಾಡಿದ್ದುಂಟು, ಆಟಿಕೆ ರೈಲುಗಳಿಂತಿವೆ ಎಂದು ಕಾಲೆಳಿದಿದ್ದು ಉಂಟು ಆದರೆ ಈಗ ನಮ್ಮ ಮೆಟ್ರೋ ಬೆಂಗಳೂರು ಟ್ರಾಫಿಕ್ಗೆ ಪರಿಹಾರ ಎನ್ನುವಂತೆ ಕೆಲಸ ಮಾಡುತ್ತಿದೆ.
ಅಕ್ಟೊಬರ್ 20, 2011ರಲ್ಲಿ ನಮ್ಮ ಮೆಟ್ರೋ ಆರಂಭವಾಯಿತು. ಆರಂಭದಲ್ಲಿ 6.7 ಕಿಮೀ ವ್ಯಾಪ್ತಿಯಲ್ಲಿ ಮೆಟ್ರೋ ಮಾರ್ಗ ಇದ್ದಾಗ, 20 ಸಾವಿರ ಇದ್ದ ದೈನಂದಿನ ಪ್ರಯಾಣಿಕರ ಸಂಖ್ಯೆ ಈಗ 7 ಲಕ್ಷ ದಾಟಿದೆ. ನಮ್ಮ ಮೆಟ್ರೋ ಒಟ್ಟು ಮಾರ್ಗ ಈಗ 73.81 ಕಿಮೀ ಆಗಿದೆ.

ಆದರೂ ನಮ್ಮ ಮೆಟ್ರೋ ನಿರೀಕ್ಷಿತ ವೇಗದಲ್ಲಿ ಜಾಲವನ್ನು ವಿಸ್ತರಣೆ ಮಾಡುತ್ತಿಲ್ಲ, 13 ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಲೆಕ್ಕ ಹಾಕುವುದಾದರೆ, ಪ್ರತಿ ವರ್ಷ 5.5 ಕಿಮೀ ಮಾತ್ರ ನಮ್ಮ ಮೆಟ್ರೋ ಮಾರ್ಗ ಸೇರ್ಪಡೆಯಾಗಿದೆ. ಅಕ್ಟೋಬರ್ 9ರಂದು ಬಿಎಂಆರ್ ಸಿಎಲ್ ಸಂಪೂರ್ಣ ನೇರಳೆ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಿಸಿದೆ.
ದೇಶದ ಎರಡನೇ ಅತಿ ದೊಡ್ಡ ಮೆಟ್ರೋ
ನಮ್ಮ ಮೆಟ್ರೋ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದರೂ, ಬಿಎಂಆರ್ ಸಿಎಲ್ ಈಗ ದೇಶದ ಎರಡನೇ ಅತಿದೊಡ್ಡ ಕಾರ್ಯಾಚರಣೆಯ ಮೆಟ್ರೋ ಜಾಲವನ್ನು ಹೊಂದಿದೆ. 73.81 ಕಿಮೀ ಮಾರ್ಗದಲ್ಲಿ 66 ನಿಲ್ದಾಣಗಳಿದ್ದು, ಪ್ರತಿ ದಿನ 1.8 ಕೋಟಿ ರೂಪಾಯಿ ಸಂಗ್ರಹಿಸುತ್ತಿದೆ.
2ನೇ ಹಂತ, 2ಎ ಹಂತ ಮತ್ತು 2ಬಿ ಹಂತದಲ್ಲಿ ಇನ್ನೂ ಹಲವು ಮಾರ್ಗಗಳ ಕಾಮಗಾರಿ ನಡೆಯುತ್ತಿದ್ದು, ಇವು ಸಂಪೂರ್ಣವಾಗಲು ಇನ್ನೂ ಹೆಚ್ಚಿನ ಸಮಯವಾಗಲಿದೆ. 2011ರಲ್ಲಿ ಬೆಂಗಳೂರು ನಗರದಲ್ಲಿ ನೋಂದಾಯಿತ ವಾಹನಗಳ ಸಂಖ್ಯೆ 45.5 ಲಕ್ಷ ಇದ್ದರೆ, ಈಗ ಅದು 1.1 ಕೋಟಿ ಮೀರಿದ್ದು, ನಗರದಲ್ಲಿ ಟ್ರಾಫಿಕ್ ಹೆಚ್ಚಳಕ್ಕೆ ಕಾರಣವಾಗಿದೆ. 2ನೇ ಹಂತದ ಮೆಟ್ರೋ ಕಾರಿಡಾರ್ ಯೋಜನೆ ಸಂಪೂರ್ಣವಾದರೆ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ.
3 ವರ್ಷದಲ್ಲಿ ಪ್ರತಿ ದಿನ 20 ಲಕ್ಷ ಮಂದಿ ಪ್ರಯಾಣ
ದಿನದಿಂದ ದಿನಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. ಸಂಪೂರ್ಣ ನೇರಳೆ ಮಾರ್ಗ ಆರಂಭವಾದ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ ಎಂದು ಬಿಎಂಆರ್ಸಿಎಲ್ ಎಂಡಿ ಅಂಜುಮ್ ಪರ್ವೇಜ್ ಹೇಳಿದ್ದಾರೆ.
ಮುಂದಿನ ಮೂರು - ನಾಲ್ಕು ವರ್ಷಗಳು ನಮ್ಮ ಮೆಟ್ರೋಗೆ ಅತ್ಯಂತ ನಿರ್ಣಾಯಕ ಎಂದು ಅವರು ಹೇಳಿದ್ದಾರೆ. "ಹಳದಿ, ಗುಲಾಬಿ ಮತ್ತು ನೀಲಿ ಮಾರ್ಗಗಳಲ್ಲಿ ಮೆಟ್ರೋ ಸಂಚಾರ ಆರಂಭವಾದ ನಂತರ, ಮೆಟ್ರೋದಲ್ಲಿ ಜನರು ಪ್ರಯಾಣಿಸುವ ವಿಧಾನವನ್ನು ತೀವ್ರವಾಗಿ ಬದಲಾಯಿಸುತ್ತದೆ. ಈ ಎಲ್ಲಾ ಹೊಸ ಮಾರ್ಗಗಳು ತೆರೆದ ನಂತರ ದೈನಂದಿನ ಪ್ರಯಾಣಿಕರ ಸಂಖ್ಯೆ 20 ಲಕ್ಷಕ್ಕೆ ಹೆಚ್ಚಾಗುತ್ತದೆ" ಎಂದು ಹೇಳಿದರು. 2024ರಲ್ಲಿ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications