ಚಂದ್ರಶೇಖರ ಕಂಬಾರ 'ನಾಯೀಕತೆ' ನಾಟಕ ನಾಳೆ ಪ್ರದರ್ಶನ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರ ಅವರ 'ನಾಯೀಕತೆ' ನಾಟಕ ನಾಳೆ (ಶನಿವಾರ) ಸಂಜೆ 7.30ಕ್ಕೆ ಹನುಮಂತನಗರದ ಕೆ.ಹೆಚ್.ಕಲಾಸೌಧದಲ್ಲಿ ಪ್ರದರ್ಶನ ಆಗಲಿದೆ. ಸೈಡ್ ವಿಂಗ್ ಬೆಂಗ್ಳೂರ್ ತಂಡ ಈ ನಾಟಕವನ್ನು ಪ್ರಸ್ತುತ ಪಡಿಸಲಿದೆ. ಶೈಲೇಶ್ ಕುಮಾರ್ ಎಂ.ಎಂ. ನಾಟಕದ ನಿರ್ದೇಶನ ಮಾಡಿದ್ದಾರೆ.
ಪ್ರೀತಿ ಮತ್ತು ದುಡ್ಡು ಎರಡರ ನಡುವಿನ ನಾಟಕ
'ಗ್ರಾಮೀಣ ಸೊಗಡಿನ ನಾಟಕ' ಎಂದಷ್ಟೇ ಸೀಮಿತಗೊಳ್ಳದೇ, ಸಮಾಜದ ಪರಿಸ್ಥಿತಿಯನ್ನು ಒಂದು ಅದ್ಭುತ ಕಥೆಯ ಜೊತೆ ಪೋಣಿಸಿ, ಗ್ರಾಮೀಣ ಭಾಷೆಯ ಶ್ರೀಮಂತಿಕೆಯನ್ನು ಬೆರೆಸಿ, ಅಲೆಮಾರಿ ಜನಾಂಗದ ಹೊಟ್ಟೆಪಾಡಿನ ದುರಂತ ಚಿತ್ರಣವನ್ನು ಹಾಸ್ಯದ ಲೇಪನದೊಂದಿಗೆ ನೇಯ್ದು, ಹೆಣ್ಣಿನ ದಿಟ್ಟತನವನ್ನು ಮುಖ್ಯಭೂಮಿಕೆಯಲ್ಲಿರಿಸಿ, 'ಪ್ರೀತಿ-ಪ್ರೇಮ ದೊಡ್ಡದೋ? ಹಣ ದೊಡ್ಡದೋ?' ಎಂಬ ಪ್ರಶ್ನೆಯಿಂದ ಆರಂಭವಾಗುವ ಕಥೆಗೆ ಕಡೆಯಲ್ಲಿ ಮೇಲಿನ ಎಲ್ಲಾಅಂಶಗಳನ್ನೂ ಹದವಾಗಿ ಬೆರೆಸಿ ಕಂಬಾರರು ಉತ್ತರಿಸಿರುವ ನಾಟಕವೇ 'ನಾಯೀಕತೆ'.

ನಾಟಕದ ಮಜವೇ ರಿಯಲಿಸ್ಟಿಕ್ ಆಗಿ ಕಂಬಾರರು ಯಾವುದೇ ಮಡಿವಂತಿಕೆಯಿಲ್ಲದೇ ಪರಿಸ್ಥಿತಿಯನ್ನು ಚಿತ್ರಿಸಿರುವ ರೀತಿ ಹಾಗೂ ಈ ಪ್ರದರ್ಶನದಲ್ಲೂ ಸಹ ಅದೇ ರೀತಿ, ಯಾವುದೇ ಮಡಿವಂತಿಕೆಯಿಲ್ಲದೇ ರಿಯಲಿಸ್ಟಿಕ್ ಆಗಿ ಆ ಚಿತ್ರಣ ಮೂಡಿಬಂದಿದೆ. ವಸ್ತುವಿನ ಹಿಂದೆ ಓಡುತ್ತಿರುವ ಮನುಷ್ಯನಿಗೆ ಮತ್ತೊಬ್ಬ ಮನುಷ್ಯನೂ ವಸ್ತುವಂತೆ ಕಾಣುವ ಶೋಚನೀಯ ಪರಿಸ್ಥಿತಿಯಲ್ಲಿ, 'ಪ್ರೀತಿ- ಪ್ರೇಮ ದೊಡ್ಡದಲ್ಲವೇ?' ಎಂಬುದನ್ನು ಸಾರುವ ಈ 'ನಾಯೀಕತೆ' ಇಂದಿನ ಸಮಾಜಕ್ಕೆ ಅತ್ಯವಶ್ಯಕವಾದ ನಾಟಕ.
ನಾಟಕ ನಿರ್ದೇಶಕರ ಬಗ್ಗೆ
'ನಾಯೀಕತೆ' ನಾಟಕವನ್ನು ಶೈಲೇಶ್ ಕುಮಾರ್ ಎಂ.ಎಂ ನಿರ್ದೇಶನ ಮಾಡಿದ್ದಾರೆ. ಉದ್ಯಮಿಯಾಗಿರುವ ಶೈಲೇಶ್ ಕುಮಾರ್ ಅವರು ರಂಗಭೂಮಿಯ ಸೆಳೆತಕ್ಕೆ ಒಳಗಾಗಿ, ರಂಗಭೂಮಿಯಲ್ಲಿ ಒಂದು ವರ್ಷದ ಡಿಪ್ಲೋಮಾ ಮುಗಿಸಿ ನಂತರ 'ಸೊಂಡಲ್ ಮ್ಯಾನ್', 'ಸಲಿಲ', 'ಕಾಡ್ನಲ್ಲೊಂದೂರಿತ್ತಂತೆ' ಹೀಗೆ ಹಲವಾರು ಮಕ್ಕಳ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಇವರು ರಚಿಸಿವ ದ್ವಿವ್ಯಕ್ತಿ ಪ್ರದರ್ಶನ 'ಇಲ್ಲ.. ಅಂದ್ರೆ ಇದೆ !' ನಾಟಕವು ಯಶಸ್ವಿ 49 ಪ್ರದರ್ಶನಗಳನ್ನು ಕಂಡು ಹಲವಾರು ನಾಟಕೋತ್ಸವಗಳಲ್ಲಿ ಪ್ರದರ್ಶನವಾಗಿ ರಂಗಭೂಮಿಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಗಳಿಸಿದೆ.

ಕಲಾವಿದರ ಬಗ್ಗೆ
ಶೈಲೇಶ್ ಕುಮಾರ್.ಎಂ.ಎಂ, ಭರತ್ ಸ ಜಗನ್ನಾಥ್, ಲತಾ ಸರ್ವೇಶ್, ಆದಿತ್ಯ ಭಾರದ್ವಾಜ್, ಅಶ್ವಿತಾ ಹೆಗ್ಡೆ, ಕೃಷ್ಣಾನಂದ, ಗುರು ಪ್ರಸಾದ್, ಅರ್ಜುನ್, ಅಕ್ಷಯ್, ನವೀನ್, ರಚನಾ ಮುಧೋಳ್, ನಿಶ್ಚಲ್ ಮುಧೋಳ್, ನಿತ್ಯಾ ಜೋಶಿ, ಸಿಂಚನಾ, ನಿಶಿತಾ, ಶುಭಾಂಗ

ನಾಟಕ ತಂಡದ ಬಗ್ಗೆ
ನಿರಂತರವಾಗಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ, ಸಮಾನಮನಸ್ಕರು ಸೇರಿ ಆರಂಭಿಸಿರುವ ರಂಗತಂಡ 'ಸೈಡ್ ವಿಂಗ್ ಬೆಂಗ್ಳೂರ್'. ಇದು ಹೊಸ ತಂಡವಾಗಿದ್ದು ಈಗಾಗಲೇ ಐದು ಬೀದಿನಾಟಕಗಳನ್ನು ಹಾಗೂ 'ಇಲ್ಯಾಡ್ಗಣ್ಣ', 'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್', 'ಸಡನ್ನಾಗ್ ಸತೋದ್ರೆ? 'ಇಲ್ಲ..ಅಂದ್ರೆ ಇದೆ!', ಹಾಗೂ 'ಸರ್ಗ' ನಾಟಕಗಳನ್ನು ರಾಜ್ಯದೆಲ್ಲಡೆ ಮಾಡಿ ದೊಡ್ಡ ಪ್ರತಿಕ್ರಿಯೆಯನ್ನು ಪಡೆದಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications