ಬೆಂಗಳೂರಿಗರೆ, ಸಂಗೀತ ಸುಧೆಯಲ್ಲಿ ನೆನೆಯಲು ಸಿದ್ಧರಾಗಿ
ಬೆಂಗಳೂರು, ಡಿಸೆಂಬರ್ 03 : ಮಳೆಸುರಿಸದೆ ಆಟವಾಡಿಸುತ್ತಿರುವ ಕಾರ್ಮೋಡಗಳು, ಸುಯ್ಯನೆ ಬೀಸುತ್ತಿರುವ ಚಳಿಗಾಳಿಯ ನಡುವೆ ಬೆಚ್ಚನೆ ಸಂಗೀತದ ಅನುಭವ ಪಡೆಯಲು ಬೆಂಗಳೂರು ಸಜ್ಜಾಗಿದೆ. ಡಿಸೆಂಬರ್ 4ರಿಂದ 6ರವರೆಗೆ ಬೆಂಗಳೂರಿನಲ್ಲಿ ಸಂಗೀತದ ವರ್ಷಧಾರೆ ಸುರಿಯಲಿದೆ. ಬೆಂಗಳೂರಿಗರೆ, ಸಂಗೀತದ ಸುಧೆಯಲ್ಲಿ ನೆನೆಯಲು ಸಿದ್ಧರಾಗಿರಿ.
ಸುಗಮ ಸಂಗೀತದ ದಿಗ್ಗಜೆ, ಖ್ಯಾತ ಹಿನ್ನೆಲೆ ಸಂಗೀತಗಾರ್ತಿ ಕಸ್ತೂರಿ ಶಂಕರ್ ಅವರ ಮಯೂರ ಸ್ಕೂಲ್ ಆಫ್ ಮ್ಯೂಸಿಕ್ 'ಗೀತಸಮ್ಮಿಲನ'ದ 8ನೇ ವಾರ್ಷಿಕೋತ್ಸವವನ್ನು ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಂಜೆ ಹಮ್ಮಿಕೊಂಡಿದೆ. ಸಂಗೀತೋತ್ಸವದ ಉದ್ಘಾಟನೆ ಶುಕ್ರವಾರ ಸಂಜೆ 4.30ಕ್ಕೆ ಆಗಲಿದೆ. [ಕರ್ನಾಟಕ ಸಂಗೀತದಲ್ಲಿ ಕರ್ನಾಟಕವೆಲ್ಲಿ? ಕನ್ನಡವೆಲ್ಲಿ?]

ಈ ಕಾರ್ಯಕ್ರಮದಲ್ಲಿ ಸಂಗೀತ ದಿಗ್ಗಜರಾದ ವಿದ್ವಾನ್ ಅನೂರು ಅನಂತ ಕೃಷ್ಣಶರ್ಮ, ಬಾನ್ಸುರಿ ವಾದಕ ಪ್ರವೀಣ್ ಗೋಡ್ಖಿಂಡಿ ಮುಂತಾದವರು ಗಾನಸುಧೆ ಹರಿಸಲಿದ್ದಾರೆ. ಜೊತೆಗೆ, ಹಾರ್ಮೋನಿಯಂ ಅರುಣಾಚಲಪ್ಪ ಅವರ ಸ್ಮರಣಾರ್ಥ 'ಅರುಣಾ' ವಾರ್ಷಿಕ ಪ್ರಶಸ್ತಿ ಪ್ರದಾನ, ಮಯೂರ ಶಾಲೆ ವಿದ್ಯಾರ್ಥಿಗಳಿಂದ ಕಲಾ ಪ್ರದರ್ಶನ ಮುಂತಾದವುಗಳು ಶ್ರೋತೃಗಳನ್ನು ರಂಜಿಸಲಿವೆ.
ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ 5 ಗಂಟೆಗೆ ನಡೆಯಲಿರುವ ಎಸ್.ಡಿ. ಬರ್ಮನ್ ಮತ್ತು ಆರ್.ಡಿ. ಬರ್ಮನ್ ಸಂಗೀತ ಸಂಜೆ ಸಭಿಕರನ್ನು ಹಿಂದಿ ಚಿತ್ರಗೀತೆಗಳ ಸಂಗೀತ ಸಾಗರದಲ್ಲಿ ತೇಲಿಸಲಿದೆ. ಇದರಲ್ಲಿ ಅರ್ಚನಾ ಉಡುಪ, ಎಂಡಿ ಪಲ್ಲವಿ, ಪಂಚಮ್ ಹಳಿಬಂಡಿ ಮುಂತಾದವರು ಹಾಡಿ ರಂಜಿಸಲಿದ್ದಾರೆ. [ಕಾರು ಚಾಲಕನ ಸಂಗೀತ ಪ್ರತಿಭೆಗೆ ತಲೆದೂಗಿದ ಕಲಾಂ]

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗೀತಸಮ್ಮಿಲನಕ್ಕೆ ಸಹಕಾರ ನೀಡುತ್ತಿದ್ದು, ಸಂಗೀತ ನೃತ್ಯ ಅಕಾಡೆಮಿ ಪ್ರಾಯೋಜಿಸುತ್ತಿದೆ. ಎಸ್ ಡಿ ಬರ್ಮನ್ ಮತ್ತು ಆರ್ ಡಿ ಬರ್ಮನ್ ಸಂಗೀತ ಸಂಜೆಯ ನಿರೂಪಣೆಯನ್ನು 92.7 ಬಿಗ್ ಎಫ್ಎಂನ ಆರ್ ಜೆ ಮಯೂರ್ ರಾಘವೇಂದ್ರ ಅವರು ಮಾಡಲಿದ್ದಾರೆ.
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ












Click it and Unblock the Notifications