ಬೆಂಗಳೂರಿಗರೆ, ಸಂಗೀತ ಸುಧೆಯಲ್ಲಿ ನೆನೆಯಲು ಸಿದ್ಧರಾಗಿ
ಬೆಂಗಳೂರು, ಡಿಸೆಂಬರ್ 03 : ಮಳೆಸುರಿಸದೆ ಆಟವಾಡಿಸುತ್ತಿರುವ ಕಾರ್ಮೋಡಗಳು, ಸುಯ್ಯನೆ ಬೀಸುತ್ತಿರುವ ಚಳಿಗಾಳಿಯ ನಡುವೆ ಬೆಚ್ಚನೆ ಸಂಗೀತದ ಅನುಭವ ಪಡೆಯಲು ಬೆಂಗಳೂರು ಸಜ್ಜಾಗಿದೆ. ಡಿಸೆಂಬರ್ 4ರಿಂದ 6ರವರೆಗೆ ಬೆಂಗಳೂರಿನಲ್ಲಿ ಸಂಗೀತದ ವರ್ಷಧಾರೆ ಸುರಿಯಲಿದೆ. ಬೆಂಗಳೂರಿಗರೆ, ಸಂಗೀತದ ಸುಧೆಯಲ್ಲಿ ನೆನೆಯಲು ಸಿದ್ಧರಾಗಿರಿ.
ಸುಗಮ ಸಂಗೀತದ ದಿಗ್ಗಜೆ, ಖ್ಯಾತ ಹಿನ್ನೆಲೆ ಸಂಗೀತಗಾರ್ತಿ ಕಸ್ತೂರಿ ಶಂಕರ್ ಅವರ ಮಯೂರ ಸ್ಕೂಲ್ ಆಫ್ ಮ್ಯೂಸಿಕ್ 'ಗೀತಸಮ್ಮಿಲನ'ದ 8ನೇ ವಾರ್ಷಿಕೋತ್ಸವವನ್ನು ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಂಜೆ ಹಮ್ಮಿಕೊಂಡಿದೆ. ಸಂಗೀತೋತ್ಸವದ ಉದ್ಘಾಟನೆ ಶುಕ್ರವಾರ ಸಂಜೆ 4.30ಕ್ಕೆ ಆಗಲಿದೆ. [ಕರ್ನಾಟಕ ಸಂಗೀತದಲ್ಲಿ ಕರ್ನಾಟಕವೆಲ್ಲಿ? ಕನ್ನಡವೆಲ್ಲಿ?]

ಈ ಕಾರ್ಯಕ್ರಮದಲ್ಲಿ ಸಂಗೀತ ದಿಗ್ಗಜರಾದ ವಿದ್ವಾನ್ ಅನೂರು ಅನಂತ ಕೃಷ್ಣಶರ್ಮ, ಬಾನ್ಸುರಿ ವಾದಕ ಪ್ರವೀಣ್ ಗೋಡ್ಖಿಂಡಿ ಮುಂತಾದವರು ಗಾನಸುಧೆ ಹರಿಸಲಿದ್ದಾರೆ. ಜೊತೆಗೆ, ಹಾರ್ಮೋನಿಯಂ ಅರುಣಾಚಲಪ್ಪ ಅವರ ಸ್ಮರಣಾರ್ಥ 'ಅರುಣಾ' ವಾರ್ಷಿಕ ಪ್ರಶಸ್ತಿ ಪ್ರದಾನ, ಮಯೂರ ಶಾಲೆ ವಿದ್ಯಾರ್ಥಿಗಳಿಂದ ಕಲಾ ಪ್ರದರ್ಶನ ಮುಂತಾದವುಗಳು ಶ್ರೋತೃಗಳನ್ನು ರಂಜಿಸಲಿವೆ.
ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ 5 ಗಂಟೆಗೆ ನಡೆಯಲಿರುವ ಎಸ್.ಡಿ. ಬರ್ಮನ್ ಮತ್ತು ಆರ್.ಡಿ. ಬರ್ಮನ್ ಸಂಗೀತ ಸಂಜೆ ಸಭಿಕರನ್ನು ಹಿಂದಿ ಚಿತ್ರಗೀತೆಗಳ ಸಂಗೀತ ಸಾಗರದಲ್ಲಿ ತೇಲಿಸಲಿದೆ. ಇದರಲ್ಲಿ ಅರ್ಚನಾ ಉಡುಪ, ಎಂಡಿ ಪಲ್ಲವಿ, ಪಂಚಮ್ ಹಳಿಬಂಡಿ ಮುಂತಾದವರು ಹಾಡಿ ರಂಜಿಸಲಿದ್ದಾರೆ. [ಕಾರು ಚಾಲಕನ ಸಂಗೀತ ಪ್ರತಿಭೆಗೆ ತಲೆದೂಗಿದ ಕಲಾಂ]

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗೀತಸಮ್ಮಿಲನಕ್ಕೆ ಸಹಕಾರ ನೀಡುತ್ತಿದ್ದು, ಸಂಗೀತ ನೃತ್ಯ ಅಕಾಡೆಮಿ ಪ್ರಾಯೋಜಿಸುತ್ತಿದೆ. ಎಸ್ ಡಿ ಬರ್ಮನ್ ಮತ್ತು ಆರ್ ಡಿ ಬರ್ಮನ್ ಸಂಗೀತ ಸಂಜೆಯ ನಿರೂಪಣೆಯನ್ನು 92.7 ಬಿಗ್ ಎಫ್ಎಂನ ಆರ್ ಜೆ ಮಯೂರ್ ರಾಘವೇಂದ್ರ ಅವರು ಮಾಡಲಿದ್ದಾರೆ.
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications