ಕ್ರೈಮ್ ಸ್ಟೋರಿ: ಒಂದು ಸೆಲ್ಫಿಯಿಂದ ಸಿಕ್ಕಿಬಿದ್ದ ಕೊಲೆಗಾರ
ಬೆಂಗಳೂರು, ಮೇ 24: ಕ್ರೈಮ್ ಸ್ಟೋರಿಗಳು ಎಷ್ಟು ಭಯಾನಕವೋ ಅಷ್ಟೇ ಕುತೂಹಲಕರವೂ ಇರುತ್ತವೆ. ಯಾವುದೇ ಕೊಲೆಗಾರ ಎಂಥಾದರೂ ಒಂದು ಸುಳಿವು ಬಿಟ್ಟೇ ಇರುತ್ತಾನೆ ಎಂಬುದು ಓಪನ್ ಸೀಕ್ರೆಟ್ಗಳಲ್ಲಿ ಒಂದು. ಕೆಲ ಪ್ರಕರಣಗಳಲ್ಲಿ ಕೊಲೆಗಾರ ಎಷ್ಟೇ ಚಾಲಾಕಿಯಾದರೂ ಏನಾದರೂ ಒಂದು ಯಡವಟ್ಟು ಮಾಡಿ ಪೊಲೀಸರಿಗೆ ಸುಳಿವು ಕೊಡುವುದುಂಟು. ಇಂಥದ್ದೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಕೊಲೆಗಾರನೊಬ್ಬ ಸೆಲ್ಫೀ ತೆಗೆದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನೇ ಮೈಸೂರು ನಿವಾಸಿ ಮಧುಸೂದನ್. ಐದು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸುತ್ತಿದ್ದ ಈತ ಸೆಲ್ಫಿ ಯಡವಟ್ಟು ಮತ್ತೆ ಕಂಬಿ ಎಣಿಸುವಂತೆ ಮಾಡಿದೆ.
35 ವರ್ಷದ ಮಧುಸೂದನ್ ಅಲಿಯಾಸ್ ಮಧು ಸೇರಿ ಏಳು ಮಂದಿಯ ತಂಡ 2014ರ ಮಾರ್ಚ್ 5ರಂದು ನಿವೃತ್ತ ಬ್ಯಾಂಕ್ ಮ್ಯಾನೇಜರ್ರೊಬ್ಬರನ್ನು ಹತ್ಯೆ ಮಾಡಿರುತ್ತಾರೆ. 65 ವರ್ಷದ ಆ ವೃದ್ಧ ಉದಯ್ ರಾಜ್ ಸಿಂಗ್ ಅವರನ್ನು ಕೊಂದದ್ದಲ್ಲದೆ ಅವರ ಪತ್ನಿ ಸುಶೀಲಮ್ಮರಿಗೆ ಇರಿದು ಗಾಯಗೊಳಿಸಿರುತ್ತಾರೆ. ಬಳಿಕ ಕೋಟ್ಯಂತರ ರೂ ಮೌಲ್ಯದ ವಜ್ರದ ಹಾರವನ್ನು ಕದ್ದೊಯ್ದಿರುತ್ತಾರೆ.

ನಷ್ಟದಲ್ಲಿದ್ದ ಮಧು
ಮಧುಸೂದನ್ ಖಾಸಗಿ ಬ್ಯಾಂಕ್ನಲ್ಲಿ ಸಹಾಯಕ ಮ್ಯಾನೇಜರ್ ಆಗಿರುತ್ತಾನೆ. ತಮ್ಮ ಸ್ನೇಹಿತರ ಜೊತೆಗೂಡಿ ಫ್ರಾಂಚೈಸಿ ಟ್ರೇಡಿಂಗ್ ಕಂಪನಿ ಆರಂಭಿಸುತ್ತಾನೆ. ಆದರೆ, ಒಂದು ಕೋಟಿ ರೂಗೂ ಅಧಿಕ ಮೊತ್ತದಷ್ಟು ನಷ್ಟ ಮಾಡಿಕೊಳ್ಳುತ್ತಾನೆ. ಅಧೇ ವೇಳೆ ಉದಯ್ ರಾಜ್ ಸಿಂಗ್ ತಮ್ಮ ಬಳಿ ಇದ್ದ ಪುರಾತನ ಚಿನ್ನ ಮತ್ತು ಡೈಮಂಡ್ ನೆಕ್ಲೇಸ್ ಅನ್ನು ಮಾರುವುದಾಗಿ ಆನ್ಲೈನ್ನಲ್ಲಿ ಜಾಹೀರಾತು ನೀಡುತ್ತಾರೆ. ಆಗ ಮಧು ಕ್ರಿಮಿನಲ್ ಆಲೋಚನೆ ಜಾಗೃತವಾಗುತ್ತದೆ. ವಜ್ರದ ಹಾರ ಕೊಳ್ಳುವ ಸೋಗಿನಲ್ಲಿ ಮಧು ಮತ್ತವನ ಸಹಚರರು ಸಿಂಗ್ ಮನೆಗೆ ಹೋಗುತ್ತಾರೆ. ಅವರ ಕತ್ತು ಸೀಳಿ ಸಾಯಿಸುತ್ತಾರೆ. ಅವರ ಪತ್ನಿಗೂ ಇರಿದು ಗಂಭೀರವಾಗಿ ಗಾಯಗೊಳಿಸಿ ಆಭರಣ ಸಮೇತ ಪರಾರಿಯಾಗುತ್ತಾರೆ.

ಬೇಲ್ ಪಡೆದು ಪರಾರಿ
ಈ ಪ್ರಕರಣವನ್ನು ಪೊಲೀಸರು ಭೇದಿಸಿ ಎಲ್ಲಾ ಆರೋಪಿಗಳನ್ನೂ ಬಂಧಿಸುತ್ತಾರೆ. ಆದರೆ, 2017 ಮೇ ತಿಂಗಳಲ್ಲಿ ಮಧುಸೂದನ್ಗೆ ಹೈಕೋರ್ಟ್ ಜಾಮೀನು ಕೊಡುತ್ತದೆ. ಆದರೆ, ಬೇಲ್ ಸಿಗುತ್ತಿದ್ದಂತೆಯೇ ಪಾತಕಿ ಮಧು ನಾಪತ್ತೆಯಾಗಿಬಿಡುತ್ತಾನೆ. 2019ರಲ್ಲಿ ಆರೋಪಿಗಳು ಪಾತಕಕೃತ್ಯ ಎಸಗಿದ್ದು ಸಾಬೀತಾಗಿ ಜೀವಾವಧಿ ಶಿಕ್ಷೆಯ ತೀರ್ಪು ಪ್ರಕಟವಾಗಿದೆ. ಆದರೆ, ಮಧುಸೂದನ್ ಮಾತ್ರ ನಾಪತ್ತೆಯಾಗಿರುತ್ತಾನೆ. ಪೊಲೀಸರು ಎಷ್ಟೇ ಬಲೆಬೀಸಿದರೂ ಈತನ ಸುಳಿವು ಸಿಗುವುದಿಲ್ಲ. ಇದೇ ವೇಳೆ, ಜಾಮೀನು ಪಡೆದು ಪರಾರಿಯಾಗುವ ಕ್ರಿಮಿನಲ್ಗಳ ಮೇಲೆ ನಿಗಾ ಇರಿಸಲೆಂದೇ ಬೆಂಗಳೂರು ಪೊಲೀಸರ ಒಂದು ತಂಡ ಇದೆ. ಆದರೂ ಬಹಳ ಕಾಲ ಈತನ ಸುಳಿವು ಪೊಲೀಸರಿ ಸಿಗುವುದಿಲ್ಲ.

ಅಪರಿಚಿತ ವ್ಯಕ್ತಿ ತೋರಿಸಿದ ಫೋಟೋ
ಪಾತಕಿ ಮಧುಸೂದನ್ ತನ್ನ ಸ್ನೇಹಿತನೊಂದಿಗೆ ತೆಗೆಸಿಕೊಂಡ ಸೆಲ್ಫಿ ಫೋಟೊ ಫೇಸ್ಬುಕ್ನಲ್ಲಿ ಪೋಸ್ಟ್ ಆಗುತ್ತದೆ. ಆಗಂತುಕ ವ್ಯಕ್ತಿಯೊಬ್ಬರು ಆಡುಗೋಡಿ ಠಾಣೆಗೆ ಹೋಗಿ ಮಧು ಫೋಟೋ ಬಗ್ಗೆ ಪೊಲೀಸರ ಗಮನಕ್ಕೆ ತರುತ್ತಾರೆ. ಪೊಲೀಸರು ಆ ಫೋಟೋದಲ್ಲಿರುವುದು ಮಧುವೇ ಎಂಬುದನ್ನು ಖಚಿತಪಡಿಸಿಕೊಂಡು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸುತ್ತಾರೆ.

ಪಟ್ನಾ, ಪುಣೆಯಲ್ಲಿ ಕೆಲಸ
ಎಂಬಿಎ ಓದಿರುವ ಪಾತಕಿ ಮಧುಸೂದನ್ ಜೈಲಿನಿಂದ ಹೊರಬಂದು ತಪ್ಪಿಸಿಕೊಂಡ ಬಳಿಕ ತನ್ನ ಹೆಸರು ಬದಲಾಯಿಸಿಕೊಂಡು ಪಟ್ನಾ, ಪುಣೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿರುತ್ತಾನೆ. ಇತ್ತೀಚೆಗಷ್ಟೇ ಆತ ತನ್ನ ಸ್ನೆಹಿತನನ್ನು ನೋಡಲೆಂದು ಬೆಂಗಳೂರಿಗೆ ಬಂದಿರುತ್ತಾನೆ. ಪೀಣ್ಯ ಬಳಿಯ ಮಾಲ್ವೊಂದಕ್ಕೆ ಇಬ್ಬರೂ ಹೋಗಿದ್ದಾಗ ಒಂದು ಸೆಲ್ಫೀ ತೆಗೆದುಕೊಳ್ಳುತ್ತಾರೆ. ಈತನ ಸ್ನೇಹಿತ ಆ ಫೋಟೋವನ್ನು ಫೇಸ್ಬುಕ್ಗೆ ಪೋಸ್ಟ್ ಮಾಡುತ್ತಾನೆ. ಈ ರೀತಿಯಲ್ಲಿ ಮಧು ಸಿಕ್ಕಿಬಿದ್ದಿದ್ದಾನೆ.
(ಒನ್ಇಂಡಿಯಾ ಸುದ್ದಿ)
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ











Click it and Unblock the Notifications