ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಂಕಿಗೆ ಮೋಸ: ನಟ, ನಿರ್ದೇಶಕ ಎಸ್.ನಾರಾಯಣ್ ಬಂಧನ

|
Google Oneindia Kannada News

ಬೆಂಗಳೂರು, ಏಪ್ರಿಲ್ 05: ಐಡಿಬಿಐ ಬ್ಯಾಂಕ್ ಗೆ ಹಣ ಮರುಪಾವತಿ ಮಾಡದ ಹಿನ್ನಲೆಯಲ್ಲಿ ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಎಸ್.ನಾರಾಯಣ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಆ ನಂತರ ಬಿಡುಗಡೆ ಮಾಡಿದ್ದಾರೆ.

ಐಡಿಬಿಐ ಬ್ಯಾಂಕಿನಿಂದ ಎಸ್.ನಾರಾಯಣ್ ಅವರು ಮೂರು ಕೋಟಿ ಸಾಲ ಪಡೆದಿದ್ದರು, ಅಸಲು, ಬಡ್ಡಿ ಸೇರಿ ಸುಮಾರು 10 ಕೋಟಿ ಹಣವನ್ನು ಎಸ್.ನಾರಾಯಣ್ ಬ್ಯಾಂಕಿಗೆ ಕಟ್ಟಬೇಕಾಗಿತ್ತು. ಆದರೆ ನಾರಾಯಣ್ ಅವರು ಹಣ ಪಾವತಿ ಮಾಡಿರಲಿಲ್ಲ, ನೀಡಿದ್ದ ನೊಟೀಸ್‌ಗಳನ್ನು ನಿರ್ಲಕ್ಷಿಸಿದ್ದರು.

ಹೀಗಾಗಿ ಬ್ಯಾಂಕು ನಾರಾಯಣ್ ಅವರ ವಿರುದ್ಧ ಪೊಲೀಸ್ ದೂರು ನೀಡಿದ್ದರು. ಹಾಗಾಗಿ ಇಂದು ಬಸವೇಶ್ವರ ನಗರ ಪೊಲೀಸರು ಎಸ್.ನಾರಾಯಣ್ ಅವರನ್ನು ಸಂಜೆ ವೇಳೆಗೆ ಪೊಲೀಸರು ವಶಕ್ಕೆ ಪಡೆದಿದ್ದರು.

Movie director S Narayan arrested today in Bengaluru

ಎಸ್.ನಾರಾಯಣ್ ಅವರನ್ನು ಸಾಲ ವಸೂಲಾತಿ ನ್ಯಾಯಾಧೀಕರಣಕ್ಕೆ ಪೊಲೀಸರು ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಕರಣದಿಂದ ಎಸ್.ನಾರಾಯಣ್ ಅವರಿಗೆ ಜಾಮೀನು ಮಂಜೂರು ಮಾಡಲಾಯಿತು, ಹಾಗಾಗಿ ಬಂಧಿಸಿದಷ್ಟೆ ವೇಗವಾಗಿ ಅವರು ಬಿಡುಗಡೆ ಆಗಿದ್ದಾರೆ.

English summary
Movie director S Narayan arrested by Basaveshwara Nagar police today. Police alleged that he fraud IDBI bank. He got bail and released immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X