Get Updates
Get notified of breaking news, exclusive insights, and must-see stories!

Bengaluru 'Char Jam Yatra': ಟ್ರಾಫಿಕ್ ಸಮಸ್ಯೆ ಬಗ್ಗೆ ಮೋಹನದಾಸ್ ಪೈ ಅಪಹಾಸ್ಯ, ಪೋಸ್ಟ್ ವೈರಲ್

ಬೆಂಗಳೂರು, ಮಾರ್ಚ್‌ 13: ಬೆಂಗಳೂರ ಪ್ರವಾಸೋದ್ಯಮವು ನಗರದಲ್ಲಿ ಟೂರ್ ಪ್ಯಾಕೇಜ್ ಮೂಲಕ ನಗರದ ಪ್ರಮುಕ ಟ್ರಾಫಿಕ್ ಜಾಮ್ ಪ್ರದೇಶಗಳನ್ನು ಸುತ್ತಾಡಿಸಲಿದೆ ಎಂದು ಉದ್ಯಮಿ, ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನದಾಸ್ ಪೈ ಅವರು ಹೇಳಿಕೆ ಭಾರೀ ವೈರಲ್ ಆಗಿದೆ. ಬೆಂಗಳೂರು ಸಂಚಾರ ದಟ್ಟಣೆಯ ಕುರಿತ ಅವರ ಅಪಹಾಸ್ಯ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಇದನ್ನು ಅವರು 'ಚಾರ್ ಜಾಮ್ ಯಾತ್ರಾ' ಅಂತಲೂ ಕರೆದಿದ್ದಾರೆ.

ನಗರದ ಸಂಚಾರ ದಟ್ಟಣೆ, ಸರ್ಕಾರ ನಡೆಯನ್ನು ಉದ್ಯಮಿ ಮೋಹನದಾಸ ಪೈ ಅಣುಕಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ನೆಟ್ಟಿಗರ ಮಧ್ಯೆ ನಗರದ ಟ್ರಾಫಿಕ್ ಮಧ್ಯೆ ಮತ್ತೆ ಭಾರೀ ಚರ್ಚೆಗೆ ಕಾರಣವಾಗಿದೆ.

Mohandas Pai Mocks Bengaluru s Traffic with Tourism Post Sparks Mixed Reactions

''ಬೆಂಗಳೂರು ಪ್ರವಾಸೋದ್ಯಮವು ನಾಲ್ಕು ದಿನ ಮೂರು ರಾತ್ರಿ ಪ್ರವಾಸವನ್ನು ನಗರದ ಔಟರ್ ರಿಂಗ್ ರಸ್ತೆ, ಸಿಲ್ಕಬೋರ್ಡ್ ಜಂಕ್ಷನ್, ಮಾರತ್ತಹಳ್ಳಿ ಮತ್ತು ಎಚ್‌ಎಸ್‌ಆರ್ ಬಡಾವಣೆ' ಗಳಲ್ಲಿ ಟ್ರಿಪ್ ಆಯೋಜಿಸಿದೆ. ಇದನ್ನು ಅವರು ಬೆಂಗಳೂರು 'ಚಾರ್ ಜಾಮ್ ಯಾತ್ರಾ' ಅಂತ ಕರೆದಿದ್ದು, ಹತಾಷೆ ವ್ಯಕ್ತಪಡಿಸಿದ್ದಾರೆ. ಇದೊಂದು ದುಃಖಕರ ಜೋಕ್ ಆಗಿದೆ. ನಮಗೆ ಕನಿಷ್ಠ ಪಕ್ಷ ನಾವು ಬಳಲುತ್ತಿರುವ ಸಂಚಾರ ಸಮಸ್ಯೆ ಮತ್ತು ಕಾಳಜಿಯೇ ಇಲ್ಲದ ಸರ್ಕಾರದ ಬಗ್ಗೆ ನಮಗೆ ಹಾಸ್ಯ ಪ್ರಜ್ಞೆಯಾದರು ಇದೆ'' ಎಂದು ಅಸಮಾಧಾನ ತೋರ್ಪಡಿಸಿದ್ದಾರೆ.

ಉದ್ಯಮಿ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ, ನೆಟ್ಟಿಗರು ಹೇಳಿದ್ದೇನು?

ಟ್ರಾಫಿಕ್ ಕುರಿತಾದ ಈ ಪೋಸ್ಟ್ ಸಾಕಷ್ಟು ಜನರನ್ನು ಕೆಣಕಿದೆ. ಚರ್ಚೆಗೆ ಪ್ರೇರೆಪಿಸಿದೆ. ನೀವು ನಗರದ ಸಮಸ್ಯೆ ಕುರಿತು ಇಷ್ಟೊಂದು ವಾಗ್ದಾಳಿ ನಡೆಸುತ್ತಿದ್ದೀರಿ. ಹಾಗಾದರೆ ನೀವೆ ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ಪರಿಹಾರ ತಿಳಿಸಿದೆ. ಸುರಂಗಗಳು, ಎತ್ತರದ ರಸ್ತೆಗಳು, ಫ್ಲೈಓವರ್‌ಗಳು, ಅಂಡರ್‌ಪಾಸ್‌ಗಳನ್ನು ನಿರ್ಮಿಸಬೇಕಾ? ಈ ಬಗ್ಗೆ ವಾಸ್ತವದ ನೆಲೆಗಟ್ಟಿನಲ್ಲಿ ಸಲಹೆ ನೀಡಿದೆ. ಅದು ಉಪಯುಕ್ತವಾಗುತ್ತದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ನೀವು ಇಂತಹ ಹೇಳಿಕೆ ಮೂಲಕ ಬೆಂಗಳೂರಿನ ಇಮೇಜ್‌ಗೆ ಹಾನಿ ಮಾಡುತ್ತಿದ್ದೀರಿ ಎಂದು ಕೆಲವು ಬಳಕೆದಾರರು ದೂರಿ ಕಾಮೆಂಟ್ ಮಾಡಿದ್ದಾರೆ. ಬೆಂಗಳೂರನ್ನು ಕೆಣಕುವ ವಿಚಾರದಲ್ಲಿ ನೀವು ಮುಂದೆ ಇರುತ್ತೀರಿ ಎಂದು ಮತ್ತೊಬ್ಬರು ಹೇಳಿದ್ದಾರೆ.

ಡಿಸಿಎಂ ಜೊತೆಗೆ ಉದ್ಯಮಿ ಚರ್ಚೆ

ಎಎನ್‌ಐ ವರದಿ ಪ್ರಕಾರ, ಉದ್ಯಮಿ ಮೋಹನದಾಸ್ ಪೈ ಅವರು, ಬೆಂಗಳೂರಿನ ತುರ್ತು ಸಮಸ್ಯೆಗಳ ಬಗ್ಗೆ ಚರ್ಚಿಸಲು ಶನಿವಾರ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ. ಸದಾಶಿವನಗರದಲ್ಲಿ ಚರ್ಚೆ ಆಗಿದೆ. ಅದರ ಬಳಿಕ "ಬೆಂಗಳೂರು ಒಂದು ದೊಡ್ಡ ನಗರ, ಜಾಗತಿಕವಾಗಿ ಗುರುತಿಸಿಕೊಂಡಿದೆ. ಇದೊಂದು ವಿಜ್ಞಾನ ನಗರ. ಇಲ್ಲಿರುವ ರಸ್ತೆಗಳು, ಪಾದಚಾರಿ ಮಾರ್ಗಗಳು, ನಮ್ಮ ಮೆಟ್ರೋ ವಿಸ್ತರಣೆ ಸೇರಿದಂತೆ ಸಮಗ್ರ ಅಭಿವೃದ್ಧಿ ಆಗಬೇಕು ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಮುಂದಿನ ಆರೇ ತಿಂಗಳಲ್ಲಿ ನಗರದಲ್ಲಿ ಗಮನಾರ್ಹ ಬದಲಾವಣೆ, ಅಭಿವೃದ್ಧಿ ಆಗುತ್ತದೆ. ಜನಪರ ಕಾಳಜಿ ಸರ್ಕಾರಕ್ಕೆ ಇದೆ ಎಂದು ಅವರು ತಿಳಿಸಿದ್ದಾರೆ ಎಂದು ವರದಿ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+