Bengaluru 'Char Jam Yatra': ಟ್ರಾಫಿಕ್ ಸಮಸ್ಯೆ ಬಗ್ಗೆ ಮೋಹನದಾಸ್ ಪೈ ಅಪಹಾಸ್ಯ, ಪೋಸ್ಟ್ ವೈರಲ್
ಬೆಂಗಳೂರು, ಮಾರ್ಚ್ 13: ಬೆಂಗಳೂರ ಪ್ರವಾಸೋದ್ಯಮವು ನಗರದಲ್ಲಿ ಟೂರ್ ಪ್ಯಾಕೇಜ್ ಮೂಲಕ ನಗರದ ಪ್ರಮುಕ ಟ್ರಾಫಿಕ್ ಜಾಮ್ ಪ್ರದೇಶಗಳನ್ನು ಸುತ್ತಾಡಿಸಲಿದೆ ಎಂದು ಉದ್ಯಮಿ, ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನದಾಸ್ ಪೈ ಅವರು ಹೇಳಿಕೆ ಭಾರೀ ವೈರಲ್ ಆಗಿದೆ. ಬೆಂಗಳೂರು ಸಂಚಾರ ದಟ್ಟಣೆಯ ಕುರಿತ ಅವರ ಅಪಹಾಸ್ಯ ಆನ್ಲೈನ್ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಇದನ್ನು ಅವರು 'ಚಾರ್ ಜಾಮ್ ಯಾತ್ರಾ' ಅಂತಲೂ ಕರೆದಿದ್ದಾರೆ.
ನಗರದ ಸಂಚಾರ ದಟ್ಟಣೆ, ಸರ್ಕಾರ ನಡೆಯನ್ನು ಉದ್ಯಮಿ ಮೋಹನದಾಸ ಪೈ ಅಣುಕಿಸಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ನೆಟ್ಟಿಗರ ಮಧ್ಯೆ ನಗರದ ಟ್ರಾಫಿಕ್ ಮಧ್ಯೆ ಮತ್ತೆ ಭಾರೀ ಚರ್ಚೆಗೆ ಕಾರಣವಾಗಿದೆ.

''ಬೆಂಗಳೂರು ಪ್ರವಾಸೋದ್ಯಮವು ನಾಲ್ಕು ದಿನ ಮೂರು ರಾತ್ರಿ ಪ್ರವಾಸವನ್ನು ನಗರದ ಔಟರ್ ರಿಂಗ್ ರಸ್ತೆ, ಸಿಲ್ಕಬೋರ್ಡ್ ಜಂಕ್ಷನ್, ಮಾರತ್ತಹಳ್ಳಿ ಮತ್ತು ಎಚ್ಎಸ್ಆರ್ ಬಡಾವಣೆ' ಗಳಲ್ಲಿ ಟ್ರಿಪ್ ಆಯೋಜಿಸಿದೆ. ಇದನ್ನು ಅವರು ಬೆಂಗಳೂರು 'ಚಾರ್ ಜಾಮ್ ಯಾತ್ರಾ' ಅಂತ ಕರೆದಿದ್ದು, ಹತಾಷೆ ವ್ಯಕ್ತಪಡಿಸಿದ್ದಾರೆ. ಇದೊಂದು ದುಃಖಕರ ಜೋಕ್ ಆಗಿದೆ. ನಮಗೆ ಕನಿಷ್ಠ ಪಕ್ಷ ನಾವು ಬಳಲುತ್ತಿರುವ ಸಂಚಾರ ಸಮಸ್ಯೆ ಮತ್ತು ಕಾಳಜಿಯೇ ಇಲ್ಲದ ಸರ್ಕಾರದ ಬಗ್ಗೆ ನಮಗೆ ಹಾಸ್ಯ ಪ್ರಜ್ಞೆಯಾದರು ಇದೆ'' ಎಂದು ಅಸಮಾಧಾನ ತೋರ್ಪಡಿಸಿದ್ದಾರೆ.
ಉದ್ಯಮಿ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆ, ನೆಟ್ಟಿಗರು ಹೇಳಿದ್ದೇನು?
ಟ್ರಾಫಿಕ್ ಕುರಿತಾದ ಈ ಪೋಸ್ಟ್ ಸಾಕಷ್ಟು ಜನರನ್ನು ಕೆಣಕಿದೆ. ಚರ್ಚೆಗೆ ಪ್ರೇರೆಪಿಸಿದೆ. ನೀವು ನಗರದ ಸಮಸ್ಯೆ ಕುರಿತು ಇಷ್ಟೊಂದು ವಾಗ್ದಾಳಿ ನಡೆಸುತ್ತಿದ್ದೀರಿ. ಹಾಗಾದರೆ ನೀವೆ ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ಪರಿಹಾರ ತಿಳಿಸಿದೆ. ಸುರಂಗಗಳು, ಎತ್ತರದ ರಸ್ತೆಗಳು, ಫ್ಲೈಓವರ್ಗಳು, ಅಂಡರ್ಪಾಸ್ಗಳನ್ನು ನಿರ್ಮಿಸಬೇಕಾ? ಈ ಬಗ್ಗೆ ವಾಸ್ತವದ ನೆಲೆಗಟ್ಟಿನಲ್ಲಿ ಸಲಹೆ ನೀಡಿದೆ. ಅದು ಉಪಯುಕ್ತವಾಗುತ್ತದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
A sad joke on Bengaluru. At least we have a sense of humour about our suffering and an uncaring govt. pic.twitter.com/dvKkrPYXh7
— Mohandas Pai (@TVMohandasPai) March 12, 2025
ನೀವು ಇಂತಹ ಹೇಳಿಕೆ ಮೂಲಕ ಬೆಂಗಳೂರಿನ ಇಮೇಜ್ಗೆ ಹಾನಿ ಮಾಡುತ್ತಿದ್ದೀರಿ ಎಂದು ಕೆಲವು ಬಳಕೆದಾರರು ದೂರಿ ಕಾಮೆಂಟ್ ಮಾಡಿದ್ದಾರೆ. ಬೆಂಗಳೂರನ್ನು ಕೆಣಕುವ ವಿಚಾರದಲ್ಲಿ ನೀವು ಮುಂದೆ ಇರುತ್ತೀರಿ ಎಂದು ಮತ್ತೊಬ್ಬರು ಹೇಳಿದ್ದಾರೆ.
ಡಿಸಿಎಂ ಜೊತೆಗೆ ಉದ್ಯಮಿ ಚರ್ಚೆ
ಎಎನ್ಐ ವರದಿ ಪ್ರಕಾರ, ಉದ್ಯಮಿ ಮೋಹನದಾಸ್ ಪೈ ಅವರು, ಬೆಂಗಳೂರಿನ ತುರ್ತು ಸಮಸ್ಯೆಗಳ ಬಗ್ಗೆ ಚರ್ಚಿಸಲು ಶನಿವಾರ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ. ಸದಾಶಿವನಗರದಲ್ಲಿ ಚರ್ಚೆ ಆಗಿದೆ. ಅದರ ಬಳಿಕ "ಬೆಂಗಳೂರು ಒಂದು ದೊಡ್ಡ ನಗರ, ಜಾಗತಿಕವಾಗಿ ಗುರುತಿಸಿಕೊಂಡಿದೆ. ಇದೊಂದು ವಿಜ್ಞಾನ ನಗರ. ಇಲ್ಲಿರುವ ರಸ್ತೆಗಳು, ಪಾದಚಾರಿ ಮಾರ್ಗಗಳು, ನಮ್ಮ ಮೆಟ್ರೋ ವಿಸ್ತರಣೆ ಸೇರಿದಂತೆ ಸಮಗ್ರ ಅಭಿವೃದ್ಧಿ ಆಗಬೇಕು ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಮುಂದಿನ ಆರೇ ತಿಂಗಳಲ್ಲಿ ನಗರದಲ್ಲಿ ಗಮನಾರ್ಹ ಬದಲಾವಣೆ, ಅಭಿವೃದ್ಧಿ ಆಗುತ್ತದೆ. ಜನಪರ ಕಾಳಜಿ ಸರ್ಕಾರಕ್ಕೆ ಇದೆ ಎಂದು ಅವರು ತಿಳಿಸಿದ್ದಾರೆ ಎಂದು ವರದಿ ಆಗಿದೆ.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications