IAS ವಿದ್ಯಾರ್ಥಿಗಳಿಗಾಗಿ ಸಮುತ್ಕರ್ಷ್ ಸಂಸ್ಥೆಯಿಂದ ಅಣುಕು ಸಂದರ್ಶನ
ಬೆಂಗಳೂರು, ಜನವರಿ 8: ರಾಷ್ಟ್ರ ನಿರ್ಮಾಣಕ್ಕಾಗಿ ಯುವಕರನ್ನು ಒಂದಿಲ್ಲೊಂದು ರೀತಿಯಲ್ಲಿ ಸಜ್ಜುಗೊಳಿಸುತ್ತಿರುವ ಸಮುತ್ಕರ್ಷ್ ಸಂಸ್ಥೆ ಮುಖ್ಯ ಸಂದರ್ಶನಕ್ಕೆ ಅನುಕೂಲವಾಗುವಂತೆ ಅಣುಕು ಸಂದರ್ಶನವನ್ನು ನಡೆಸಲಿದೆ.
ಸಮುತ್ಕರ್ಷ ಕಳೆದ ವರ್ಷ ನಾಗರಿಕ ಸೇವಾ ಪರೀಕ್ಷೆಗಳಲ್ಲಿ (ಐ.ಎ.ಎಸ್, ಐ.ಪಿ.ಎಸ್ ಪರೀಕ್ಷೆ) ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಅಣುಕು ಸಂದರ್ಶನ ಏರ್ಪಡಿಸಿತ್ತು. ರಾಜ್ಯದಿಂದ ಸುಮಾರು 30 ಜನ ಆಸಕ್ತ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಮತ್ತು ಅದರಲ್ಲಿ 14 ಜನ ತೇರ್ಗಡೆ ಹೊಂದಿದ್ದರು.
ಬೆಂಗಳೂರಿನ ಬಸವನಗುಡಿ, ವಿವಿ ಪುರಂನಲ್ಲಿರುವ ಬಿ ಎಂಎಎಸ್ ಕಾಲೇಜ್ ಆಫ್ ಕಾಮರ್ಸ್ ಮತ್ತು ಮ್ಮಯಾನೇಜ್ ಮೆಂಟ್ ಕಾಲೇಜಿನಲ್ಲಿ ಜನವರಿ 10 ಮತ್ತು 11 ರಂದು ಅಣುಕು ಸಂದರ್ಶನ ನಡೆಯಲಿದೆ.

ಹಿರಿಯ ನಿವೃತ್ತ ಅಧಿಕಾರಿಗಳನ್ನೊಳಗೊಂಡ ತಂಡದಿಂದ ಮುಖ್ಯ ಸಂದರ್ಶನಕ್ಕೆ ಅನುಕೂಲವಾಗಲು ಅಣುಕು ಸಂದರ್ಶನ ನಡೆಯಲಿದ್ದು, ಸಂದರ್ಶನಕ್ಕೆ ಯಾವುದೇ ಶುಲ್ಕ ಇರುವದಿಲ್ಲ. ಆಸಕ್ತರು ಈ ಸಂದರ್ಶನದ ಅನುಕೂಲ ಪಡೆದುಕೊಳ್ಳಬೇಕೆಂದು ಟ್ರಸ್ಟ್ ಕಾರ್ಯದರ್ಶಿ ಜಿತೇಂದ್ರ ಪಿ.ನಾಯಕ್ ತಿಳಿಸಿದ್ದಾರೆ.












Click it and Unblock the Notifications