Get Updates
Get notified of breaking news, exclusive insights, and must-see stories!

Munirathna Case: ದರ್ಶನ್ ಬಳಿಕ ಶಾಸಕ ಮುನಿರತ್ನಗೆ ಸಂಕಷ್ಟ, ಆರ್‌ಆರ್ ನಗರದ ಬಗ್ಗೆ ಆ ಜ್ಯೋತಿಷಿ ಭವಿಷ್ಯ ನಿಜವಾಯ್ತು!

ಬೆಂಗಳೂರು, ಸೆಪ್ಟಂಬರ್ 20: ಕರ್ನಾಟಕದಲ್ಲಿ ನಟ ದರ್ಶನ್ ಬಂಧನ ಜೊತೆಗೆ ಬಿಜೆಪಿ ಶಾಸಕ ಮುನಿರತ್ನ ಅವರ ಬಂಧನ, ಅವರ ಮೇಲಿನ ಆರೋಪಗಳ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಒಬ್ಬರು ರಾಜಕಾರಣಿ ಮತ್ತೊಬ್ಬರು ಸ್ಯಾಂಡಲ್‌ವುಡ್ ಸ್ಟಾರ್. ಇವರಿಬ್ಬರು ಇದೀಗ ಸ್ತ್ರೀ ವಿಚಾರವಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ. ಇವರಿಬ್ಬರ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿರುವ ಮಧ್ಯೆಯೇ ರಾಜರಾಜೇಶ್ವರಿ ನಗರದ ವಾಸ್ತು ಬಗ್ಗೆ ನುಡಿದ ಭವಿಷ್ಯ ಮತ್ತೆ ಮುನ್ನೆಲೆಗೆ ಬರುತ್ತಿದೆ.

ಬೆಂಗಳೂರಿನ ಕುಬೇರ ಮೂಲೆ ಅಂತಲೂ ಕರೆಯಲಾಗುತ್ತಿರುವ ರಾಜರಾಜೇಶ್ವರಿ ನಗರದಲ್ಲಿಯೇ ಈ ಇಬ್ಬರು ಖ್ಯಾತನಾಮರು ವಾಸ ಮಾಡುತ್ತಿದ್ದಾರೆ. ಈ ಇಬ್ಬರು ಜೈಲಿಗೆ ಹೋಗಿರುವುದು ಸ್ತ್ರಿಯರ ಸಹವಾಸದಿಂದ ಎನ್ನುವುದು ಮತ್ತೊಂದು ವಿಶೇಷ. ಇವರ ಮೇಲಿನ ಆರೋಪಗಳ ಜೊತೆಗೆ ಅವರು ವಾಸಿಸುವ ಆರ್‌ಆರ್‌ ನಗರ ವಾಸ್ತು ಸರಿ ಇಲ್ಲ ಎಂದು ಈ ಹಿಂದೆ ಬಿಗ್ ಬಾಸ್ ಆರ್ಯವರ್ಧನ್ ಗುರೂಜಿ ನುಡಿದ ಭವಿಷ್ಯವು ಚರ್ಚೆಯಾಗುತ್ತಿದೆ.

MLA Munirathna and Actor Darshan are faced Issues with RR Nagar Vastu Dosha See Prediction

ಆರ್‌ಆರ್ ನಗರ ವಾಸ್ತು ಸರಿಯಿಲ್ಲ: ನಿಜವಾಯ್ತಾ ಜ್ಯೋತಿಷ್ಯ ಭವಿಷ್ಯ

ಕನ್ನಡ ಬಿಗ್ ಬಾಸ್ ಸ್ಪರ್ಧಿ ಆರ್ಯವರ್ಧನ್ ಗುರೂಜಿ ಅವರು, ಆರ್‌ಆರ್‌ ನಗರಲ್ಲಿ ವಾಸ್ತು ದೋಷವಿದೆ. ಇಲ್ಲಿ ಎಲ್ಲವು ಸರಿ ಇಲ್ಲ. ಹೀಗಾಗಿ ಇಲ್ಲಿ ವಾಸಿಸುವವರಿಗೆ ನೆಮ್ಮದಿ ಇರಲ್ಲ. ಎಲ್ಲವು ಇರುತ್ತದೆ ಆದರೆ ನೆಮ್ಮದಿ ಇರುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಇದು ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎನ್ನುವುದರ ಜೊತೆಗೆ ಅದರ ದಿಕ್ಕುಗಳ ಕುರಿತು ಮಾತನಾಡಿದ್ದರು.

ನಟ ದರ್ಶನ್ ಬಗ್ಗೆ ಆರ್ಯವರ್ಧನ್ ಹೇಳಿದ್ದೇನು?

ಇದೇ ದರ್ಶನ್ ಕುರಿತು ಹೇಳಿದ್ದ ಗುರೂಜಿ, ನಟ ದರ್ಶನ್ ಹೆಸರಿಗೆ ನಂಬರ್ 21 ಬರುತ್ತದೆ. ಈ ಸಂಖ್ಯೆ ಅವರನ್ನು ಹೆಚ್ಚು ಡಿಸ್ಟರ್ಬ್ ಮಾಡಲಿದೆ. ಏಕೆಂದರೆ ಈ ಸಂಖ್ಯೆ ಆತನ ಹುಟ್ಟಿನ ದಿನಾಂಕಕ್ಕೆ ವಿರುದ್ಧವಾಗಿದೆ. ದರ್ಶನ್ ಜಾತಕದಲ್ಲಿ ಶನಿ ಇರುವ ಕಾರಣ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಈ ವರ್ಷ ಅವರು ಸಣ್ಣ ದುಃಖ, ಸೋಲು ಅನುಭವಿಸುತ್ತಾರೆ. ರಾಜಕೀಯದಲ್ಲಿ ಪ್ರಚಾರ ಮಾಡುತ್ತಾರೆ ಎಂದೆಲ್ಲ ಭವಿಷ್ಯ ನುಡಿದಿದ್ದರು. ಕಳೆದ ಚುನಾವಣೆಯಿಂದ ಈವರೆಗೆ ಗಮನಿಸಿದರೆ, ಇದೆಲ್ಲವು ಆಗಿದೆ.

ದರ್ಶನ್ ಬಳಿಕ ಶಾಸಕ ಮುನಿರತ್ನಗೆ ಸಂಕಷ್ಟ

ನಟ ದರ್ಶನ್ ಬಂಧನ ಬಳಿಕ ಆರ್‌ಆರ್‌ ನಗರದ ಭವಿಷ್ಯ ನಿಜ ಎಂಬಂತೆ ಭಾಸವಾಗುತ್ತಿದೆ. ಬಿಜೆಪಿ ಶಾಸಕ ಮುನಿರತ್ನ ಆರ್‌ಆರ್‌ ವಿಧಾನಸಭಾ ಕ್ಷೇತ್ರದ ಶಾಸಕ. ಅವರು ಅಲ್ಲಿಯೇ ವಾಸಿಸುತ್ತಿದ್ದಾರೆ. ಅವರು ಚುನಾವಣೆ ಗೆಲ್ಲಲು ಸಾಕಷ್ಟು ತಂತ್ರಗಾರಿಕೆ ಮಾಡಿದ್ದು ಎಲ್ಲಿರಿಗು ಗೊತ್ತಿದೆ. ಆದರೆ ಗೊತ್ತಿರದ ಸಂಗತಿಗಳು ಈಗಷ್ಟೆ ಬೆಳಕಿಗೆ ಬರುತ್ತಿದೆ.

MLA Munirathna and Actor Darshan are faced Issues with RR Nagar Vastu Dosha See Prediction

ಗುತ್ತಿಗೆದಾರರ ಮೇಲಿನ ಜಾತಿನಿಂದನೆ, ಬೆದರಿಕೆ ಪ್ರಕರಣಗಳು ವರದಿ ಆಗಿವೆ. ರಾಜಕೀಯ ಎದುರಾಳಿಗೆ ಏಡ್ಸ್‌ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಯತ್ನ ಸೇರಿದಂತೆ ಅನೇಕ ಆರೋಪಗಳನ್ನು ಮುನಿರತ್ನ ಎದುರಿಸುತ್ತಿದ್ದಾರೆ.

ಸ್ತ್ರೀಯ ಸಹವಾಸ ಸೆರೆವಾಸ

ಒಂದು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದ ಶಾಸಕ ಮುನಿರತ್ನ ಅವರನ್ನು ರಾಮನಗರ ಪೊಲೀಸರು ಮಹಿಳೆ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬಂಧಿಸಿದ್ದಾರೆ. ಇದೊಂದಿಗೆ ಮತ್ತೊಬ್ಬ ಮಹಿಳೆ ತನ್ನ ಮೇಲೆಯು ಅತ್ಯಾಚಾರ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಸದ್ಯ ಅವರು ಸ್ತ್ರೀ ಸಹವಾಸದಿಂದ ಸದ್ಯ ಶಾಸಕರು ಸೆರೆವಾಸ ಅನುಭವಿಸುತ್ತಿದ್ದಾರೆ. ಜೀವನದಲ್ಲಿ ಸಾಕಷ್ಟು ತೊಂದರೆ, ಅಪಮಾನ ಎದುರಿಸುತ್ತಿದ್ದಾರೆ. ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿದೆ.

ಆರ್‌ಆರ್‌ ನಗರ ನಿವಾಸಿ ನಟ ದರ್ಶನ್ ಅವರು ನಟಿ ಪವಿತ್ರಾ ಗೌಡ ಅವರಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಅಶ್ಲೀಲ ಸಂದೇಶ ಮಾಡಿದ್ದ ಎಂದು ಚಿತ್ರದುರ್ಗ ವ್ಯಕ್ತಿ ರೇಣುಕಾಸ್ವಾಮಿಯನ್ನು ಕರೆತಂದು ಹಲ್ಲೆ ಮಾಡಿ, ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ, ಬಳ್ಳಾರಿ ಜೈಲು ಸೇರಿದಂತೆ ಒಟ್ಟು 100 ದಿನ ಜೈಲಿನಲ್ಲಿ ಕಳೆದಿದ್ದು, ದರ್ಶನ್ ಅವರ ಸೆರೆವಾಸ ಮುಂದುವರಿದಿದೆ. ಸ್ತ್ರೀಯ ಸಹವಾಸದಿಂದ ಸ್ಟಾರ್‌ ನಟನೊಬ್ಬ ಅಪಮಾನ, ತೊಂದರೆ, ಸಂಕಷ್ಟ ಎದುರಿಸುವಂತಾಗಿದೆ. ಸಮಾಜದಲ್ಲಿ ತಲೆ ತಗ್ಗಿಸುವಂತಾಗಿದೆ.

ಜ್ಯೂತಿಷ್ಯ, ವಾಸ್ತು, ಗ್ರಹ ಗತಿ ನಂಬುವವರು ವಾಸಿಸುವ ಸ್ಥಳದಿಂದ ಇದೆಲ್ಲ ಆಗುತ್ತಿದೆ ಎಂದು ನಂಬುತ್ತಾರೆ. ಇನ್ನು ಕೆಲವರು ಇದೆಲ್ಲ ಸತ್ಯವಲ್ಲ. ಜೀವನದಲ್ಲಿ ಏನು ನಡೆಯಬೇಕೋ ಅದು ನಡೆದೆ ನಡೆಯುತ್ತದೆ. ಅದಕ್ಕೆ ವಾಸಿಸುವ ಜಾಗ, ಬಣ್ಣ, ಸಂಖ್ಯೆ ಮುಖ್ಯವಾಗುವುದಿಲ್ಲ ಎಂದು ಹೇಳುವವರು ಇದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+