ಕರ್ನಾಟಕದಲ್ಲಿ ಶಾಲೆ ಪುನಾರಂಭದ ಬಗ್ಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ
ಬೆಂಗಳೂರು,
ಜುಲೈ.19:
ಕರ್ನಾಟಕದಲ್ಲಿ
ಸದ್ಯದ
ಪರಿಸ್ಥಿತಿಯಲ್ಲಿ
ಶಾಲೆಗಳನ್ನು
ತೆರೆಯುವ
ಯಾವುದೇ
ತೀರ್ಮಾನಗಳನ್ನು
ತೆಗೆದುಕೊಂಡಿಲ್ಲ
ಎಂದು
ಪ್ರಾಥಮಿಕ
ಮತ್ತು
ಪ್ರೌಢಶಿಕ್ಷಣ
ಸಚಿವ
ಎಸ್.ಸುರೇಶ್
ಕುಮಾರ್
ಅವರು
ಸ್ಪಷ್ಟನೆ
ನೀಡಿದ್ದಾರೆ.
ಕೇಂದ್ರ
ಮಾನವ
ಸಂಪನ್ಮೂಲ
ಸಚಿವಾಲಯದ
ಅಪೇಕ್ಷೆಯಂತೆ
ಕರ್ನಾಟಕದಲ್ಲಿ
ಸೆಪ್ಟೆಂಬರ್
ಮಾಹೆಯಲ್ಲಿ
ಶಾಲೆಗಳನ್ನು
ತೆರೆಯುತ್ತೇವೆ
ಎಂದು
ಸರ್ಕಾರವು
ಅಭಿಪ್ರಾಯ
ವ್ಯಕ್ತಪಡಿಸಿರುವ
ಬಗ್ಗೆ
ವರದಿಯಾಗಿದೆ.
ಆದರೆ
ಈ
ಬಗ್ಗೆ
ರಾಜ್ಯ
ಸರ್ಕಾರದ
ಮಟ್ಟದಲ್ಲಿ
ಯಾವುದೇ
ನಿರ್ಣಯಗಳನ್ನು
ತೆಗೆದುಕೊಂಡಿರುವುದಿಲ್ಲ
ಎಂದು
ಸ್ಪಷ್ಟಪಡಿಸಿದ್ದಾರೆ.
Recommended Video
8,
9,
10ನೇ
ತರಗತಿ
ವಿದ್ಯಾರ್ಥಿಗಳಿಗೆ
ಚಂದನ
ವಾಹಿನಿಯಲ್ಲಿ
ಪಾಠ
ಶಿಕ್ಷಣ
ಇಲಾಖೆಯ
ನಮ್ಮ
ಅಧಿಕಾರಿಗಳು
ಸಭೆಯೊಂದರಲ್ಲಿ
ಭಾಗವಹಿಸಿದ
ಸಂದರ್ಭದಲ್ಲಿ
ವ್ಯಕ್ತಪಡಿಸಿರಬಹುದಾದ
ಸಾಮಾನ್ಯ
ಅಭಿಪ್ರಾಯವನ್ನು
ಈ
ರೀತಿ
ಪ್ರತಿಬಿಂಬಿಸಲಾಗಿದೆಯಷ್ಟೇ
ಎಂದು
ಸಚಿವ
ಎಸ್.ಸುರೇಶ್ಕುಮಾರ್
ಸ್ಪಷ್ಟನೆ
ನೀಡಿದ್ದಾರೆ.
ಶಾಲೆ
ಆರಂಭಿಸುವ
ಬಗ್ಗೆ
ಯಾವುದೇ
ಯೋಚನೆಯಿಲ್ಲ:
ಕೊರೊನಾವೈರಸ್
ಸೋಂಕು
ಹರಡುವಿಕೆಯ
ಅಟ್ಟಹಾಸದ
ನಡುವೆ
ಶಿಕ್ಷಣ
ಕ್ಷೇತ್ರದ
ಆದ್ಯತೆಗಳು
ಬೇರೆಯಿದೆ.
ಅವುಗಳನ್ನು
ಸಮರ್ಥವಾಗಿ
ನಿರ್ವಹಿಸುವಲ್ಲಿ
ರಾಜ್ಯ
ಸರ್ಕಾರ
ತನ್ನನ್ನು
ತೊಡಗಿಸಿಕೊಂಡಿದೆ.
ಯಾವುದೇ
ತೊಂದರೆಯಿಲ್ಲದ
ಮುಕ್ತ
ವಾತಾವರಣದ
ಸೃಷ್ಟಿಯಾದ
ನಂತರದಲ್ಲಿ
ಮಾತ್ರ
ವಿದ್ಯಾರ್ಥಿಗಳು
ಶಾಲೆಗಳಿಗೆ
ಹಾಜರಾಗುತ್ತಾರೆ.
ಸದ್ಯದ
ಮಟ್ಟಿಗೆ
ಶಾಲೆಗಳನ್ನು
ತೆರೆಯುವ
ಬಗ್ಗೆ
ನಾವು
ಯಾವುದೇ
ಯೋಚನೆ
ಮಾಡಿಲ್ಲ
ಹಾಗೂ
ಯಾವುದೇ
ನಿರ್ಣಯಗಳನ್ನು
ತೆಗೆದುಕೊಂಡಿಲ್ಲ.
ಈ
ಕುರಿತು
ಅನವಶ್ಯಕವಾಗಿ
ಆತಂಕಕ್ಕೆ
ಒಳಗಾಗುವ
ಅಗತ್ಯವಿಲ್ಲ
ಎಂದು
ಸಚಿವರು
ಸ್ಪಷ್ಟಪಡಿಸಿದ್ದಾರೆ.