ಎಂಎನ್ ಸಿ ಕೆಲಸ ಬಿಟ್ಟು ಫುಡ್ ಡೆಲಿವರಿ ಗರ್ಲ್ ಆದ ಮೇಘನಾ!
ಈಕೆ ಮಹಿಳೆ. ಈಕೆಗಿರುವ ವಿಶೇಷ ಶಕ್ತಿಯೇ ಅದೇ ಏನೋ. ಎಲ್ಲಿಗೂ ಸಲ್ಲುವುದು ಆಕೆಯ ಗುಣ ವಿಶೇಷ. ತಾನು ಕಾಲಿಟ್ಟ ಪ್ರತೀ ಕ್ಷೇತ್ರದಲ್ಲೂ ಆಕೆ ತನ್ನ ಅಸ್ತಿತ್ವ ಸ್ಥಾಪಿಸಿಬಿಡುತ್ತಾಳೆ. ಫುಡ್ ಡೆಲಿವರಿ, ಕೊರಿಯರ್ ಬಾಯ್ ಹೀಗೆ ತಿರುಗಾಟದ ಕೆಲಸಗಳಲ್ಲಿ ಹೆಚ್ಚಾಗಿ ಪುರುಷರನ್ನೇ ಕಾಣುತ್ತೇವೆ. ಆದ್ರೆ ಇಲ್ಲೊಬ್ಬಾಕೆ ಮಹಿಳೆ ಫುಡ್ ಡೆಲಿವರಿ ಕೆಲಸಕ್ಕೂ ಸೈ ಎಂದು ಪುರುಷರಿಗೇ ಸೆಡ್ಡು ಹೊಡೆದು ನಿಂತಿದ್ದಾರೆ.
ಈಕೆ ಮೇಘನಾ ದಾಸ್. ಮಂಗಳೂರಿನ ಉರ್ವದವರು. ಮಾಡೋದು ಝೊಮ್ಯಾಟೋ ಫೂಡ್ ಕಂಪನಿಯಲ್ಲಿ ಡೆಲಿವರಿ ಗರ್ಲ್ ಕೆಲಸ. ಝೊಮಾಟೊ ಉಬರ್ ಈಟ್ಸ್, ಸ್ವಿಗ್ಗಿ ಯಂತಹಾ ಫುಡ್ ಪಾರ್ಸೆ ಲ್ ಕಂಪನಿಗಳಲ್ಲಿ ಹುಡುಗರೇ ಹೆಚ್ಚಾಗಿ ಫುಡ್ ಡೆಲಿವರಿ ಮಾಡ್ತಾರೆ. ಆದ್ರೆ ಮಂಗಳೂರಿನ ಮೇಘನಾ ದಾಸ್ ಯಾವುದೇ ಅಂಜು ಅಳುಕಿಲ್ಲದೆ ಫುಡ್ ಡೆಲಿವರಿ ಮಾಡೋ ಮೂಲಕ ಕೈತುಂಬಾ ಸಂಪಾದನೆ ಮಾಡ್ತಾರೆ. ಈಕೆ ಓದಿದ್ದು ಬಿಎ ಲಿಟರೇಚರ್.
ಈ ಹಿಂದೆ ಬೆಂಗಳೂರಿನ ಎಂಎನ್ ಸಿ ಹ್ಯಾವ್ಲೆಟ್ ಪ್ಯಾಕಾರ್ಡ್ ನಲ್ಲಿ ಟೆಕ್ನಿಕಲ್ ಸಪೋರ್ಟ್ ಎಕ್ಸಿಕ್ಯುಟಿವ್ ಆಗಿದ್ದರು. ನಂತರ ದುಬೈನ ಕಂಪನಿಯೊಂದರಲ್ಲಿ ಮೇನೇಜರ್ ಆಗಿ ಕೆಲಸ ನಿರ್ವಹಿಸಿದ್ದರು.

ಅಂದ ಹಾಗೆ ಈಕೆ ಬೈಕ್ ಪ್ರಿಯೆ. ಮೋಟಾರ್ ಸೈಕಲ್ ಏರಿ ಸವಾರಿ ಹೊರಡೋದಂದ್ರೆ ಈಕೆಗೆ ಬಲು ಇಷ್ಟ. ಇವರ ಹವ್ಯಾಸದಲ್ಲಿ ತೊಡಗಿಸಿಕೊಳ್ಳಲೂ ಇವರಿಗೆ ಅವಕಾಶವಿರುವುದರಿಂದ ಈ ಕೆಲಸವನ್ನು ಇಷ್ಟ ಪಟ್ಟು ಮಾಡುತ್ತಿದ್ದಾರಂತೆ. ಡೆಲಿವರಿ ಎಕ್ಸಿಕ್ಯುಟಿವ್ ಆಗಿ ಯಾವುದೇ ಒತ್ತಡಗಳಿಲ್ಲದೆ ಸ್ವತಂತ್ರವಾಗಿ ಕೆಲಸ ನಿಭಾಯಿಸಬಹುದು - ಇದು ಇವರ ಅನುಭವ.

ಆಹಾರವನ್ನು ಡೆಲಿವರಿ ಮಾಡುವ ಕೆಲಸ ಸಣ್ಣ ಮಟ್ಟದ್ದು ಎಂದು ನಾಚಿಕೆ ಪಡುವ ಅಗತ್ಯವಿಲ್ಲ. ಹಸಿವಾದಾಗ ಆಹಾರ ಒದಗಿಸಿ ಅವರ ಹಸಿವು ತಣಿಸುವ ಕೆಲಸಕ್ಕಿಂತ ಉತ್ತಮವಾದ ಕೆಲ ಬೇರೊಂದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಮೇಘನಾ. ಝೊಮಾಟೋ ಫುಡ್ ಕಂಪನಿಯಲ್ಲಿ ಡೆಲಿವರಿ ಗರ್ಲ್ ಆಗಿ ಕೆಲಸ ಮಾಡುವ ಈ ಸ್ವಾಭಿಮಾನಿ ಹೆಣ್ಣು ಇತರ ಮಹಿಳೆಯರಿಗೂ ಸ್ಫೂರ್ತಿ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications