ಮಣಿಪುರ ವಿದ್ಯಾರ್ಥಿ ಹಲ್ಲೆ ಆರೋಪಿಗಳು ಅಂದರ್
ಬೆಂಗಳೂರು, ಅ.15: ಮಣಿಪುರ ಮೂಲದ ವಿದ್ಯಾರ್ಥಿ ಸೇರಿದಂತೆ ಮೂವರ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳನ್ನು ಘಟನೆ ನಡೆದ ಕೆಲ ಗಂಟೆಗಳಲ್ಲೇ ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ ಕೊತ್ತನೂರು ಬಸ್ ನಿಲ್ದಾಣದ ಬಳಿ ಥಡೊವ್ ವಿದ್ಯಾರ್ಥಿ ಸಂಘಟನೆ ಮುಖಂಡ ಮೈಕಲ್ ಲಾಜಾಥಾಂಗ್ ಸೇರಿದಂತೆ ಮೂವರ ಮೇಲೆ ಮೂವರು ಕುಡುಕರು ಹಲ್ಲೆ ನಡೆಸಿದ ಘಟನೆ ನಡೆದಿತ್ತು.
ಈ ಸಂಬಂಧ ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ದಾಖಲಿಸಿಕೊಂಡಿದ್ದರು. ಬುಧವಾರ ಮಧ್ಯಾಹ್ನದ ವೇಳೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.
ಏನಿದು ಪ್ರಕರಣ: ಕೊತ್ತನೂರು ಬಸ್ ನಿಲ್ದಾಣದ ಬಳಿ ರಸ್ತೆ ಬದಿ ಆಹಾರ ಮಳಿಗೆಯಲ್ಲಿ ಮೈಕಲ್ ಹಾಗೂ ಇನ್ನಿಬ್ಬರು ಊಟ ಮಾಡುತ್ತಿದ್ದರು. ರಾತ್ರಿ 10.30 ಸುಮಾರಿಗೆ ಅಲ್ಲೇ ರಸ್ತೆ ಬದಿಯಲ್ಲಿ ಗುಂಪಿನಲ್ಲಿ ಒಂದಷ್ಟು ಜನ ಸ್ಥಳೀಯರು ನಿಂತಿದ್ದರು. ಇವರಿದ್ದ ಬಳಿಗೆ ಮೂವರು ಕುಡುಕರು ಬಂದಿದ್ದಾರೆ. ಮೈಕಲ್ ಹಾಗೂ ಸ್ನೇಹಿತರು ಮಣಿಪುರಿ ಭಾಷೆಯಲ್ಲಿ ಮಾತನಾಡುತ್ತಿದ್ದನ್ನು ಕಂಡು ಹತ್ತಿರಕ್ಕೆ ಬಂದವನ್ನೊಬ್ಬ ಮೈಕಲ್ ಸ್ನೇಹಿತನ ಕೆನ್ನೆ ಊದಿಸಿದ್ದಾನೆ.
ನಾವೇನು
ನಿಮ್ಮ
ಬಗ್ಗೆ
ಮಾತನಾಡುತ್ತಿರಲಿಲ್ಲ
ಎಂದು
ಮಣಿಪುರಿಗಳು
ವಾದಿಸಿದ್ದಾರೆ.
ಮಾತಿಗೆ
ಮಾತು
ಬೆಳೆದಿದೆ.
ಇಲ್ಲಿ
ನೆಲೆಸಿರುವ
ನೀವು
ಕನ್ನಡದಲ್ಲಿ
ಮೊದಲು
ಮಾತನಾಡಿ
ಆಮೇಲೆ
ಮಿಕ್ಕಿದ್ದು
ಮಾತನಾಡೋಣ
ಎಂದು
ಕೂಗಾಡಿದ್ದಾರೆ.
ರಸ್ತೆ
ಬದಿ
ನಿಂತಿದ್ದ
ಇನ್ನೂ
ಕೆಲವರು
ಬಂದು
ಸೇರಿದ್ದಾರೆ.
Alok
Kumar,Addtnl
CP
on
student
attacked
in
B'lore
:
3
ppl
have
been
arrested,will
take
stringent
action
against
them
pic.twitter.com/NaLEkzZLBf
—
ANI
(@ANI_news)
October
15,
2014
ಈ
ಸಂದರ್ಭದಲ್ಲಿ
ಮೈಕಲ್
ಮೇಲೆ
ಹಲ್ಲೆ
ನಡೆದಿದೆ.
ನಂತರ
ಮಣಿಪುರಿಗಳು
ಬೈಕ್
ಹತ್ತಿ
ಅಲ್ಲಿಂದ
ತಪ್ಪಿಸಿಕೊಂಡಿದ್ದಾರೆ.
ಪೊಲೀಸ್
ಠಾಣೆಗೆ
ತೆರಳಿ
ದೂರು
ದಾಖಲಿಸಿದ್ದು,
ನಮ್ಮ
ಮೇಲೆ
ಹಲ್ಲೆ
ಮಾಡಿದವರು
ಚೆನ್ನಾಗಿ
ಕುಡಿದಿದ್ದರು
ನಾವು
ಏನು
ಹೇಳಿದರೂ
ಅವರಿಗೆ
ಅರ್ಥವಾಗುತ್ತಿರಲಿಲ್ಲ.
ಕನ್ನಡದಲ್ಲಿ
ಮಾತನಾಡಿ
ಎಂದು
ಪೀಡಿಸಿದರು
ಎಂದು
ದೂರಿನಲ್ಲಿ
ಹೇಳಿದ್ದಾರೆ.
ಈ
ಬಗ್ಗೆ
ಕ್ರಮ
ಕೈಗೊಂಡಿರುವ
ಪೊಲೀಸರು
ಆರೋಪಿಗಳನ್ನು
ಬಂಧಿಸಿದ್ದಾರೆ.
ಮಣಿಪುರದ
ವಿದ್ಯಾರ್ಥಿಗಳ
ಮೇಲೆ
ಹಲ್ಲೆ
ಪ್ರಕರಣದ
ಬಗ್ಗೆ
ಬಾಕ್ಸರ್
ಮೇರಿ
ಕೋಮ್
ಪ್ರತಿಕ್ರಿಯೆ:
Mary
Kom,Boxer
on
Manipuri
student
attacked
in
B'lore
:
Feels
sad
to
hear
this,such
incidents
shouldn't
happen
pic.twitter.com/zUiKIpdmFb
—
ANI
(@ANI_news)
October
15,
2014