ಕೆಪಿಸಿಸಿ ಕಚೇರಿಯ ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡ ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು, ಡಿಸೆಂಬರ್ 2: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಬೆಂಗಳೂರಿನಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿಯ ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಲಿಫ್ಟ್ ಕೆಟ್ಟಿದೆ ಎಂದು ಬೋರ್ಡ್ ಹಾಕಿದ್ದರೂ ಅದನ್ನು ನೋಡದೇ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಲಿಫ್ಟ್ ನೊಳಗೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಲಿಫ್ಟ್ ಜಾಮ್ ಹಾಗಿದೆ.

ಜಾಮ್ ಹಾಗಿದ್ದ ಲಿಫ್ಟ್ ನ್ನು ಓಪನ್ ಮಾಡಲು ಸಿಬ್ಬಂದಿ ಹರಸಾಹಸಪಟ್ಟರು. ಐದು ನಿಮಿಷದ ಬಳಿಕ ಲಿಫ್ಟ್ ನ್ನು ಓಪನ್ ಮಾಡಲಾಯಿತು. ನಂತರ ನಿಟ್ಟುಸಿರು ಬಿಟ್ಟ ಖರ್ಗೆ ಮತ್ತು ಶರಣಪ್ರಕಾಶ್ ಪಟೇಲ್ ಲಿಫ್ಟ್ ನಿಂದ ಹೊರ ಬಂದರು.












Click it and Unblock the Notifications