ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಪಿ.ಸಿ ಸರ್ಕಾರ್ ಜಾದೂ
ಬೆಂಗಳೂರು ನವೆಂಬರ್ 2: ವಿಶ್ವ ವಿಖ್ಯಾತ ಇಂದ್ರಜಾಲ ಮಾಂತ್ರಿಕ ಪಿ.ಸಿ.ಸರ್ಕಾರ್ ಅವರ "ಇಂದ್ರಜಾಲ್" ಎಂಬ ಮೆಗಾ ಮ್ಯಾಜಿಕ್ ಶೋ ಟೌನ್ ಹಾಲ್ ನಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ತಮ್ಮ ಜಾದೂವಿನಲ್ಲಿ ತೇಲಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು.
ನವೆಂಬರ್ 11 ರ ವರೆಗೆ ನಡೆಯಲಿರುವ ಈ ಮ್ಯಾಜಿಕ್ ಶೋ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಾಗಿರುವ ನೂರಾರು ಕೈಚಳಕವನ್ನು ಪಿ ಸಿ ಸರ್ಕಾರ್ ತೋರಿಸುವ ಮೂಲಕ ಜನರನ್ನು ರಂಜಿಸಲಿದ್ದಾರೆ.
ಸರ್ಕಾರ್ ಅವರ ರಕ್ತದಲ್ಲೇ ಮ್ಯಾಜಿಕ್ ಬೆರೆತಿದ್ದು ಅವರೇ ಹೇಳುವಂತೆ "ನಾನು ನಿದ್ದೆ ಮಾಡುವಾಗ ಮ್ಯಾಜಿಕ್ ಅನ್ನು ಉಸಿರಾಡುತ್ತೇನೆ; ಎಚ್ಚರದಲ್ಲಿದ್ದಾಗ ಮ್ಯಾಜಿಕ್ ಗಾಗಿ ಕೆಲಸ ಮಾಡುತ್ತೇನೆ". ಮ್ಯಾಜಿಕ್ ಲೋಕಕ್ಕೆ ಗಣನೀಯ ಕೊಡುಗೆ ನೀಡಿರುವ ಸರ್ಕಾರ್ ಇಂಡಿಯನ್ ಮ್ಯಾಜಿಕ್ ಅದರಲ್ಲೂ ಅವರ ಪ್ರೀತಿಯ ಇಂದ್ರಾ-ಜಲ್- ನ ಕಿರೀಟವನ್ನು ಮತ್ತಷ್ಟು ಮೇಲಕ್ಕೇರಿಸಿದ್ದಾರೆ. ಇವರ ಮುಂದಾಳತ್ವದಿಂದಾಗಿ ಈ ಕಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾಗಿದೆ.
ಸರ್ಕಾರ್ ಕುಟುಂಬ ವಿಶ್ವದ ಅತಿ ದೊಡ್ಡ ಜಾದೂಗಾರ ಕುಟುಂಬವಾಗಿದೆ. ಪಿಸಿ ಸರ್ಕಾರ್ ಈ ಕಲೆಯನ್ನು ಮೊದಲ ಬಾರಿಗೆ ವಿಶ್ವ ವೇದಿಕೆಗೆ ಪರಿಚಯಿಸಿದರೆ ಅವರ ಮಕ್ಕಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಲೆಗೆ ಮಹತ್ವ ದೊರೆಯುವಂತೆ ಮಾಡಿದ್ದಾರೆ.
ಪ್ರಪಂಚದಾದ್ಯಂತ ಅನೇಕ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಸರ್ಕಾರ್ ಕುಟುಂಬ ಭಾರತೀಯ ಮ್ಯಾಜಿಕ್ ನ ರಾಯಭಾರಿಗಳಾಗಿದ್ದಾರೆ.
ಈ ಪರಂಪರೆಯ ಮುಂದುವರಿದ ಭಾಗವಾದ ಪಿಸಿ ಸರ್ಕಾರ್ ರನ್ನು ಸಾಮಾನ್ಯವಾಗಿ ಭಾರತದ ಲಿಯೊನಾರ್ಡೊ-ಡಾ-ವಿನ್ಸಿ ಎಂದು ಕರೆಯುತ್ತಾರೆ. ಈಗ ಅವರ ಪುತ್ರ ಪಿಸಿ ಸರ್ಕಾರ್ (ಮಾಸ್ಟರ್) ಕುಟುಂಬದ ಅತ್ಯಂತ ಕಿರಿಯ ಮ್ಯಾಜಿಶಿಯನ್ಸ್ ಆಗಿದ್ದು, ತನ್ನ ತಾತನಿಗೆ ಹೆಸರು ತಂದುಕೊಟ್ಟಿದ್ದ 'ಎ ಪೇಂಟರ್ ಮತ್ತು ಎ ಡ್ರಮ್ಮರ್' ಅನ್ನು ಹೊಸತನದ ಛಾಪು ಒತ್ತಿ ಮರು ಸೃಷ್ಟಿ ಮಾಡಿದ್ದಾರೆ. ಸರ್ಕಾರ್ ಕುಟುಂಬದ ಮ್ಯಾಜಿಕ್ ದೀಪ ಮತ್ತೆ ಪ್ರಕಾಶಮಾನವಾಗಿ ಉರಿಯುವಂತೆ ಮಾಡಿದ್ದಾರೆ.

ಭಾರತದ ನೀರು
ಭಾರತದ ನೀರು ಎಂಬ ವಿಷಯವನ್ನು ಇಟ್ಟುಕೊಂಡು ಪ್ರಪಂಚದಾದ್ಯಂತ ಸರ್ಕಾರ್ ಪ್ರದರ್ಶನ ನೀಡಿದ್ದು ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದಕ್ಕಾಗಿ ಬಳಸಿದ ವಸ್ತುಗಳನ್ನು ಕಂಡು ನಾನು ಈ ನೈಸರ್ಗಿಕ ಜಗತ್ತಿನಲ್ಲಿಲ್ಲ, ಬದಲಾಗಿ ಬೇರೆ ಯಾವುದೇ ಜಗತ್ತಿನಲ್ಲಿದ್ದೇನೆ ಎಂದು ಭಾವಿಸಿದೆ. ಇದು ನನ್ನನ್ನು ಬೆರಗುಗೊಳಿಸಿದೆ ಮತ್ತು ಬೆಚ್ಚಿಬೀಳಿಸಿದೆ. ನಿಜಕ್ಕೂ "ಮ್ಯಾಜಿಕ್" ಎಂದು ಕರೆಯಲ್ಪಡುವ ಏನೋ ಇದ್ದು ಅದನ್ನು ನಾನು ನಂಬಲು ಪ್ರಾರಂಭಿಸಿದೆ ಎಂಬುದು ಪ್ರದರ್ಶನ ವೀಕ್ಷಿಸಿದವರ ಅನುಭವ.

ಅವರ ಇನ್ನೊಂದು ಪ್ರದರ್ಶನ
ಅವರ ಇನ್ನೊಂದು ಪ್ರದರ್ಶನ "ಸೋಲ್ ಥ್ರೂ ದಿ ಸೋಲ್" ನಲ್ಲಿ ಭ್ರಮೆ ಹುಟ್ಟಿಸುವ ಸನ್ನಿವೇಶಗಳಿದ್ದವು, ಅವು ಪ್ರೇಕ್ಷಕರನ್ನು ತಮ್ಮ ಆಸನಗಳ ತುದಿಯಲ್ಲಿ ಕೂರುವಂತೆ ಮಾಡಿದವು. "ಬಡ್ರ್ಸ್ ಫ್ರಮ್ ನೋವೇರ್" ಎನ್ನುವುದು ಶುದ್ಧ ಮ್ಯಾಜಿಕಲ್ ವರ್ಕ್ ಆಗಿದ್ದು, ಅಲ್ಲಿ ಪಂಜರದಲ್ಲಿರುವ ಪಕ್ಷಿಗಳು ಸಂಪೂರ್ಣವಾಗಿ ಮಾಯವಾಗುತ್ತವೆ. ಏನು ನಡೆಯುತ್ತಿದೆ ಎಂದು ತಿಳಿಯುವಷ್ಟರಲ್ಲಿ ಈಜಿಪ್ಟ್ ರಾಜಕುಮಾರಿಯ ದೇಹ ಗಾಳಿಯಲ್ಲಿ ತೇಲಾಡಿ ಶವಪೆಟ್ಟಿಗೆಯಿಂದ ಕಣ್ಮರೆಯಾಗುತ್ತದೆ, ನಂತರ ಮತ್ತೆ ಕಾಣಿಸಿಕೊಳ್ಳುತ್ತದೆ. ಬೆಂಗಳೂರಿನ ಅತ್ಯುತ್ತಮ ಸಭಾಂಗಣದಲ್ಲಿ ಕೂತು ಪ್ರದರ್ಶನ ವೀಕ್ಷಿಸುವವರೂ ಸಂಪೂರ್ಣವಾಗಿ ಬೆವೆತು ಒದ್ದೆಯಾದದ್ದಿದೆ.

ನಂತರ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಸುತ್ತು
ನಂತರ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಸುತ್ತು. ಹೌದು, ಯುವತಿಯೊಬ್ಬಳ ನಡುವನ್ನು ತುಂಡರಿಸಿ ಮತ್ತೆ ಒಂದಾಗಿಸಿದಾಗ ಆಕೆ ಜೀವಂತವಾಗಿ ಮೇಲೆದ್ದು ಬರುತ್ತಾಳೆ. ಪ್ರೇಕ್ಷಕರಿಂದ ಈ ಪ್ರದರ್ಶನಕ್ಕೆ ಕರತಾಡನಗಳ ಸುರಿಮಳೆ. ಕೊನೆಗೆ ಜಾದೂಗಾರ ತನ್ನ ಮೇಲೆಯೇ ಮ್ಯಾಜಿಕ್ ಪ್ರಯೋಗಿಸಿಕೊಂಡ.

ವೇದಿಕೆಯಲ್ಲಿ ಅಸ್ಥಿ ಪಂಜರದ ಜೊತೆ ಗುರುತಿಸಿಕೊಂಡಿದ್ದ
ವೇದಿಕೆಯಲ್ಲಿ ಅಸ್ಥಿ ಪಂಜರದ ಜೊತೆ ಗುರುತಿಸಿಕೊಂಡಿದ್ದ ಆತ ತಕ್ಷಣ ಸಭಾಂಗಣದ ಮಧ್ಯ ಭಾಗದಲ್ಲಿ ಸಭಿಕರ ಮಧ್ಯ ಕಾಣಿಸಿಕೊಂಡ. ಇದರೊಂದಿಗೆ ಆತ ಒಬ್ಬ ಅತ್ಯುತ್ತಮ ಜಾದೂಗಾರ ಎಂಬುದನ್ನು ಸಾಬೀತು ಪಡಿಸಿದ. ಇಡೀ ಜನಸಮೂಹವೇ ಕ್ಷಣ ಕಾಲ ದಿಗ್ಭ್ರಮೆಗೊಂಡಿತು. ಅದರೊಂದಿಗೆ ವೇಗವಾಗಿ ಬೆಳೆಯುತ್ತಿರುವ ಯುವ ಆಧುನಿಕ ಜಾದೂಗಾರರನ್ನು ಪ್ರತಿಯೊಬ್ಬರೂ ಅಭಿನಂದಿಸಿದರು.

ಹಿರಿಯರ ಅನುಭವ
ಹಿರಿಯರ ಅನುಭವ ಮತ್ತು ಕಿರಿಯರ ಚಾಕಚಕ್ಯತೆಯಿಂದ ಅತ್ಯುತ್ತಮ ಪ್ರದರ್ಶನ ಆಯೋಜಿಸಲು ಸಾಧ್ಯವಾಗಿದೆ.
ಈ ರೋಮಾಂಚಕ ಪ್ರದರ್ಶನವನ್ನು ಪ್ರಿಯಾ ಕಲ್ಚರಲ್ ಆಯೋಜಿಸಿದ್ದು ಜೆಸಿ ರಸ್ತೆಯ ಟೌನ್ ಹಾಲ್ ನಲ್ಲಿ ನವೆಂಬರ್ 11 ರ ವರೆಗೆ ನಡೆಯಲಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications