ಬೆಂಗಳೂರಿನಲ್ಲಿ ಬಿಟ್ಕಾಯಿನ್ ಆಸೆ ತೋರಿಸಿ 13.7 ಲಕ್ಷ ರೂ. ವಂಚನೆ
ಬೆಂಗಳೂರು, ಜನವರಿ 6: ಬಿಟ್ಕಾಯಿನ್ಗಳಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿದ ವಂಚಕರ ಬಲೆಗೆ ಬಿದ್ದ ಬೆಂಗಳೂರಿನ ಟೆಕ್ಕಿಯೊಬ್ಬರು 13.7 ಲಕ್ಷ ರೂಪಾಯಿ ಅನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನ ಗೊಟ್ಟಿಗೆರೆಯಲ್ಲಿ ನಡೆದಿದೆ. 31 ವರ್ಷದ ಈರಪ್ಪ ನಾಯ್ಕ್ ಎಂಬುವವರಿಗೆ ಬಿಟ್ಕಾಯಿನ್ಗಳಲ್ಲಿ ಹೂಡಿಕೆ ಮಾಡುವ ಆಸೆ ತೋರಿಸಿ ಮಕ್ಮಲ್ ಟೋಪಿ ಹಾಕಲಾಗಿದೆ. ಕಳೆದ ಅಕ್ಟೋಬರ್ 11 ಮತ್ತು ಡಿಸೆಂಬರ್ 15ರ ನಡುವೆ ಒಟ್ಟು 13.7 ಲಕ್ಷ ರೂಪಾಯಿ ಅನ್ನು ವಂಚಿಸಲಾಗಿದೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
"ಕಳೆದ ಅಕ್ಟೋಬರ್ 11ರಂದು 00202A NEXBTC ಫಾರ್ಚೂನ್ 019 ಎಂಬ ಹೆಸರಿನ ಅಪರಿಚಿತ ವಾಟ್ಸಾಪ್ ಗುಂಪಿಗೆ ಅವರನ್ನು ಸೇರಿಸಲಾಯಿತು. ಗುಂಪಿನಲ್ಲಿರುವ ವಂಚಕರು ಬಿಟ್ಕಾಯಿನ್ ವಹಿವಾಟು ಪ್ರಕ್ರಿಯೆಯ ಬಗ್ಗೆ ಮಾಹಿತಿ ಹಂಚಿಕೊಂಡರು, ಅದರಿಂದ ದೊಡ್ಡ ಲಾಭ ಗಳಿಸುವ ಸಲುವಾಗಿ ಹೂಡಿಕೆ ಮಾಡುವಂತೆ ಕೇಳಿದರು," ಎಂದು ವಿವರಿಸಲಾಗಿದೆ.
Recommended Video
ಆರಂಭದಲ್ಲೇ 3,04,262 ರೂಪಾಯಿ ಹೂಡಿಕೆ:
ಬಿಟ್ಕಾಯಿನ್ ಹೂಡಿಕೆಯ ಆಮಿಷದ ಹಿಂದಿನ ದುರಾಲೋಚನೆ ಬಗ್ಗೆ ಅರಿತುಕೊಳ್ಳದೇ ಆರಂಭಿಕ ಹಂತದಲ್ಲಿ 3,04,262 ರೂಪಾಯಿ ಹೂಡಿಕೆ ಮಾಡಲು ಒಪ್ಪಿಕೊಳ್ಳಲಾಯಿತು. ಹೆಚ್ಚಿನ ಮೊತ್ತ ಹೊರತೆಗೆಯಲು, ಗ್ರೂಪಿನ ಸದಸ್ಯರು ಹೆಚ್ಚು ಹೆಚ್ಚು ಹೂಡಿಕೆ ಮಾಡಿ ಲಾಭ ಗಳಿಸಿದ್ದಾರೆ ಎನ್ನುವಂತೆ ತಿಳಿಸಿದ್ದಾರೆ. ಆದಾಗ್ಯೂ, ಹಣವನ್ನು ಪಡೆಯಲು, ಅವರು ಇನ್ನೂ ಕೆಲವು ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂದರು, ಅದಕ್ಕೂ ಒಪ್ಪಿಕೊಳ್ಳಲಾಯಿತು. ಹಲವು ಶುಲ್ಕಗಳ ಹೆಸರಿನಲ್ಲಿ 10 ಲಕ್ಷ ರೂಪಾಯಿ ಹಣವನ್ನು ಪಾವತಿ ಮಾಡಿದರು. ಅದಾಗ್ಯೂ, ಒಂದು ರೂಪಾಯಿ ಕೂಡಾ ಹಿಂತಿರುಗಿ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಆಗ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಯಿತು.

ವಂಚನೆ ಪ್ರಕರಣ ದಾಖಲಿಸಿ ಪೊಲೀಸರು:
ಇದರ ಮಧ್ಯೆ ವಂಚನೆ ಪ್ರಕರಣವನ್ನು ತಿಳಿದ ಪೊಲೀಸರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ 66ಸಿ (ಯಾವುದೇ ವ್ಯಕ್ತಿಯ ಎಲೆಕ್ಟ್ರಾನಿಕ್ ಸಹಿ, ಪಾಸ್ವರ್ಡ್ ಅಥವಾ ಯಾವುದೇ ಇತರ ವಿಶಿಷ್ಟ ಗುರುತಿನ ವೈಶಿಷ್ಟ್ಯವನ್ನು ಮೋಸದಿಂದ ಬಳಸುವುದು) ಮತ್ತು 66 ಡಿ (ಯಾವುದೇ ಸಂವಹನದ ಮೂಲಕ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications