ಹೊಲದಲ್ಲಿ ಕಳೆದ ಎಮ್ಮೆ ಫೇಸ್ಬುಕ್ ನಲ್ಲಿ ಸಿಕ್ತು
ಹೊಸಕೋಟೆ, ನವೆಂಬರ್ 30 : ಕಳೆದು ಹೋದ ಎಮ್ಮೆಗಳೆರಡು ಫೇಸ್ ಬುಕ್ ಮೂಲಕ ಸಿಕ್ಕಿ ರೈತನ ಮುಖದಲ್ಲಿ ಸಂತೋಷ ಮೂಡಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ಈಸ್ತೂರಿನಲ್ಲಿ ನಡೆದಿದೆ.
ಹೊಸಕೋಟೆಯ ಈಸ್ತೂರಿನಲ್ಲಿ ವಾಸವಿರುವ ದಂಪತಿಗಳಾದ ನಾರಾಯಣಸ್ವಾಮಿ ಮತ್ತು ಯಶೋಧಮ್ಮ ಅವರು ಎರಡು ಎಮ್ಮೆಗಳನ್ನು ಸಾಕಿದ್ದರು. ಯಶೋದಮ್ಮ ಅವರು ಸೋಮವಾರ(ನವೆಂಬರ್ 27)ರಂದು ಮಾಮೂಲಿನಂತೆ ಎಮ್ಮೆಯನ್ನು ಮೇಯಿಸಲು ಹೊಲಕ್ಕೆ ಕರೆದೊಯ್ದಿದ್ದಾಗ ಎಮ್ಮೆಗಳೆರಡು ತಪ್ಪಿಸಿಕೊಂಡು ಬಿಟ್ಟವು.

ನಾರಾಯಣಸ್ವಾಮಿ, ಯಶೋಧಮ್ಮ ಮತ್ತು ಅವರ ಪುತ್ರ ನಾಗೇಶ್ ಮೂವರೂ ಸೇರೆ ಸತತ ಎರಡು ದಿನಗಳ ಕಾಲ ಹುಡುಕಿದರೂ ಕಳೆದ ಎಮ್ಮೆಗಳ ಕುರುಹೇ ಸಿಕ್ಕಿಲ್ಲ, ಕೊನೆಗೆ ನಾರಾಯಣಸ್ವಾಮಿ ಕುಟುಂಬ ಎಮ್ಮೆಗಳ ಮೇಲೆ ಆಸೆ ಬಿಟ್ಟು ಕೈಚೆಲ್ಲಿ ತೂಕು ಬಿಟ್ಟರು.
ಇತ್ತ ತಪ್ಪಿಸಿಕೊಂಡ ಎಮ್ಮೆಗಳು ಅಲ್ಲಿಂದ 12 ಕಿ.ಮೀ ದೂರದ ಕೊಂಡರಹಳ್ಳಿಗೆ ಹೋಗಿವೆ. ಆ ಗ್ರಾಮದ ಯುವಕ ಮೋಹನ್ ಎಂಬುವರು ಅಡ್ಡಾದಿಡ್ಡಿ ಅಲೆದಾಡುತ್ತಿದ್ದ ಎಮ್ಮೆಗಳನ್ನು ನೋಡಿ, ಅವುಗಳನ್ನು ತಮ್ಮ ಮನೆಯ ಬಳಿ ಕಟ್ಟಿಹಾಕಿ, ಅವುಗಳ ಪೊಟೊ ತೆಗೆದು ಫೇಸ್ ಬುಕ್ ನಲ್ಲಿ ಹಾಕಿದ್ದಾರೆ. ಕಳೆದು ಕೊಂಡವರು ಸಂಪರ್ಕಿಸಿ ಎಂದು ತಮ್ಮ ಮೊಬೈಲ್ ಸಂಖ್ಯೆ ಸಹ ಪೊಟೊ ಜೊತೆಗೆ ಹಾಕಿದ್ದಾರೆ.
ಅಂದೇ ದಿನ ರಾತ್ರಿ ಎಮ್ಮೆ ಮಾಲಿಕ ನಾರಾಯಣಸ್ವಾಮಿ ಅವರ ಮಗ ನಾಗೇಶ್ ಫೇಸ್ ಬುಕ್ ನೋಡುವಾಗ ಅದರಲ್ಲಿ ಅವರ ಎಮ್ಮೆಗಳ ಪೊಟೊ ಕಾಣಿಸಿದೆ. ಕೂಡಲೇ ನಾಗೇಶ್ ಎಮ್ಮೆಗಳ ಚಿತ್ರ ಹಾಕಿದವರಿಗೆ ಕರೆ ಮಾಡಿ ಪೂರ್ಣ ಮಾಹಿತಿ ಪಡೆದು, ಬೆಳಿಗ್ಗೆಯೇ ಕುಟುಂಬ ಸಮೇತ ಹೋಗಿ ಎಮ್ಮೆಗಳನ್ನು ಕರೆದುಕೊಂಡು ಬಂದಿದ್ದಾರೆ.
ಎಮ್ಮೆಗಳನ್ನು ಕಳೆದುಕೊಂಡು ಕೈಚೆಲ್ಲಿ ಕೂತಿದ್ದವರಿಗೆ ಫೇಸ್ ಬುಕ್ ವರವಾಗಿ ಬಂದು ಕಳೆದ ಎಮ್ಮೆಗಳು ದೊರಕುವಲ್ಲಿ ಸಹಾಯ ಮಾಡಿದೆ. ಮಗ ನಾಗೇಶ್ ಫೇಸ್ ಬುಕ್ ಬಳಸುತ್ತಿದ್ದಕ್ಕೆ ಬಯ್ಯುತ್ತಿದ್ದ ನಾರಾಯಣಸ್ವಾಮಿ ಈಗ ಬಯ್ಯುತ್ತಿಲ್ಲವಂತೆ.!
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications