ಪೊರಕೆ ಹಿಡಿದ ಕೇಂದ್ರ ಕಾನೂನು ಸಚಿವ ಸದಾನಂದ ಗೌಡ
ಬೆಂಗಳೂರು, ಫೆ. 8: ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಭಾನುವಾರ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರಿನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ ಕೇಂದ್ರ ಸಚಿವರು ಸ್ವಚ್ಛತೆ ಅರಿವಿನ ಬಗ್ಗೆ ಹೇಳಿದರು.
ಮೊದಲು ಪೊರಕೆ ಹಿಡಿದ ಗೌಡರು ಉದುರಿದ ಎಲೆಗಳನ್ನು ಸ್ವಚ್ಛ ಮಾಡಿದರು. ನಂತರ ಸ್ವತಃ ಕಾರ್ಯಕರ್ತರೊಂದಿಗೆ ಸೇರಿ ಕೈಯಿಂದಲೇ ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಸ್ವಚ್ಛ ಮಾಡಿದರು. ಶ್ವೇತ ವಸ್ತ್ರಧಾರಿಯಾಗಿ ರಸ್ತೆಗೆ ಇಳಿದಿದ್ದ ಗೌಡರೊಂದಿಗೆ ಕಾರ್ಯಕರ್ತರು ಜತೆಗಿದ್ದರು.

ಕಸ ಎತ್ತಿದ ಕೇಂದ್ರ ಸಚಿವ
ಕೈಯಲ್ಲಿ ಕಸ ಎತ್ತಿದ ಕೇಂದ್ರ ಸಚಿವ ಸದಾನಂದ ಗೌಡ.

ಪೊರಕೆ ಹಿಡಿದ ಗೌಡರು
ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಭಾನುವಾರ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕರ್ತರ ಸಾಥ್
ಶ್ವೇತ ವಸ್ತ್ರಧಾರಿಗಳಾಗಿ ಸದಾನಂದ ಗೌಡರಿಗೆ ಸಾಥ್ ನೀಡಿದ ಕಾರ್ಯಕರ್ತರು.

ಮೋದಿ ತತ್ವ ಪರಿಪಾಲನೆ
ಸದಾನಂದ ಗೌಡ ಕೊಂಚ ತಡವಾಗಿಯೇ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ದೆಹಲಿ ಚುನಾವಣೆ ಪ್ರಚಾರದಲ್ಲೂ ತೊಡಗಿಕೊಂಡಿದ್ದ ಗೌಡರು ಸ್ವಲ್ಪ ರಿಲೀಫ್ ಆದಂತೆ ಕಂಡುಬಂದರು.












Click it and Unblock the Notifications