ಆರೋಗ್ಯ ಸರಿಯಿಲ್ಲ ಎಂದು ಡ್ರಾಪ್ ಕೇಳಿದಳು, ನಡೆದಿದ್ದು ಅತ್ಯಾಚಾರ
ದೊಡ್ಡಬಳ್ಳಾಪುರ, ಜು.21: ಹಲವು ದಿನಗಳಿಂದ ಯುವತಿಯೊಬ್ಬಳು ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿದ್ದಳು. ದೊಡ್ಡಬಳ್ಳಾಪುರದ ನ್ಯೂಟ್ರಿಷನಲ್ ಕ್ಲಬ್ಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ವಾಪಸ್ ಆಗುತ್ತಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ದೊಡ್ಡಬಳ್ಳಾಪುರದ ಬಳಿ ನಡೆದಿದೆ.
ಚೆನ್ನಕೇಶವ ಅತ್ಯಾಚಾರ ಆರೋಪಿ, ಆತ ಕುಂಟನಹಳ್ಳಿಯ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಯುವತಿಯೊಬ್ಬಳು ಚಿಕಿತ್ಸೆ ಪಡೆದುಕೊಂಡು ಹಿಂದಿರುಗುತ್ತಿದ್ದ ಸಮಯದಲ್ಲಿ ಎಷ್ಟು ಹೊತ್ತು ಕಾದರೂ ಬಸ್ ಕೂಡ ಬರಲಿಲ್ಲ. ಬಸ್ಗಾಗಿ ಕಾಯುತ್ತಿದ್ದ ಯುವತಿ ಪಕ್ಕದ ಹಳ್ಳಿಯಲ್ಲಿರುವ ಆಕೆಯ ತಂಗಿಯ ಮನೆಗೆ ಹೋಗಲು ನಿರ್ಧರಿಸಿದ್ದಾಳೆ, ಬಳಿಕ ಅರಳುಮಲ್ಲಿಗೆ ಬಸ್ಸ್ಟಾಪ್ ಬಳಿ ಬಂದ ಟಿವಿಎಸ್ ಎಕ್ಸ್ಎಲ್ ನಲ್ಲಿದ್ದವರ ಬಳಿ ಡ್ರಾಪ್ ಕೇಳಿದ್ದಾಳೆ.
ಆತ ಆಕೆಯನ್ನು ಗಾಡಿಯಲ್ಲಿ ಕೂರಿಸಿಕೊಂಡ ಬಳಿಕ ಆಕೆಗೆ ಅನುಮಾನ ಬಂದಿದೆ ನಂತರ ನಿಲ್ಲಿಸುವಂತೆ ಎಷ್ಟೇ ಅಂಗಲಾಚಿದರೂ ಆತ ಕೇಳಲಿಲ್ಲ .ಬಳಿಕ ವಾಹನದಿಂದ ಹಾರಲು ಯತ್ನಿಸಿದ್ದು ವಿಫಲವಾಗಿ ಅಲ್ಲಿಯೇ ಬಿದ್ದಿದ್ದಾಳೆ ಬಳಿಕ ಆಕೆ ಓಡಲು ಆರಂಭಿಸಿದ್ದಾಳೆ ಆಕೆಯನ್ನೇ ಹಿಂಬಾಲಿಸಿದ ಆತ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ.

ಬಳಿಕ ಹೇಗೋ ನಡೆದುಕೊಂಡು ಬಂದು ತಂಗಿಯ ಮನೆಗೆ ತಲುಪಿದ್ದಾಳೆ, ನಡೆದ ವಿಚಾರವೆಲ್ಲಾ ಹೇಳಿದ ಬಳಿಕ ಶುಕ್ರವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ.












Click it and Unblock the Notifications