ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ.23ರಿಂದ ಸಾಲು ರಜೆ, ಕೆಎಸ್‌ಆರ್‌ಟಿಸಿಯಿಂದ ಹೆಚ್ಚು ಬಸ್

|
Google Oneindia Kannada News

ಬೆಂಗಳೂರು, ಜ. 17 : ಶನಿವಾರ, ಭಾನುವಾರ ಮತ್ತು ಗಣರಾಜ್ಯೋತ್ಸವದ ಸಾಲು-ಸಾಲು ರಜೆ ಇರುವುದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ಜ.23ರಿಂದ 25ರ ವರೆಗೆ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಿದೆ.

ಮೆಜೆಸ್ಟಿಕ್‌ನಲ್ಲಿ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಾರಣ ನಗರದ ವಿವಿಧ ಟಿಟಿಎಂಸಿಗಳಿಂದ ಹೆಚ್ಚುವರಿ ಬಸ್ಸುಗಳು ಸಂಚರಿಸಲಿವೆ. ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ವಿಜಯನಗರ ಟಿಟಿಎಂಸಿ, ಗಂಗಾ­ನಗರ, ಮಲ್ಲೇಶ್ವರ 18ನೇ ಕ್ರಾಸ್, ಜಯನಗರ 4ನೇ ಬ್ಲಾಕ್‌ ಮತ್ತಿತರ ಮುಂತಾದ ಸ್ಥಳಗಳಿಂದ ಹೆಚ್ಚುವರಿ ಬಸ್ ಸಂಚರಿಸಲಿವೆ. [ಟಿಕೆಟ್ ಬುಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ]

KSRTC

ಹೆಚ್ಚುವರಿ ಬಸ್ಸುಗಳಿಗೆ ಮುಂಗಡ ಟಿಕೆಟ್ ಪಡೆಯುವ ಪ್ರಯಾ­ಣಿಕರು ಈ ಸ್ಥಳಗಳಿಂದ ಪ್ರಯಾ­ಣಿ­ಸಬೇಕು. ಮುಂಗಡ­ಟಿಕೆಟ್ ರಹಿತ ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣದಿಂದಲೇ ಸಂಚರಿಸಲಿವೆ ಎಂದು ಕೆಎಸ್ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. [2015ರ ಸರ್ಕಾರಿ ರಜೆ ಪಟ್ಟಿ]

ಎಲ್ಲಿಗೆ ಬಸ್ : ಪೀಣ್ಯ ಬಸವೇಶ್ವರ ಬಸ್ ನಿಲ್ದಾಣದಿಂದ ಗಂಗಾವತಿ, ಕೊಪ್ಪಳ, ಬಾಗಲ­ಕೋಟೆ, ವಿಜಯ­ಪುರ, ಚಳ್ಳಕೆರೆ, ಬಳ್ಳಾರಿ, ಸಿರಗುಪ್ಪ, ಸಿಂಧನೂರು, ಮಾನ್ವಿ, ರಾಯಚೂರು, ಬೀದರ್‌, ಕಲಬುರ್ಗಿ ಮುಂತಾದ ಸ್ಥಳಗಳಿಗೆ ಹೆಚ್ಚುವರಿ ಬಸ್ ತೆರಳಲಿವೆ. [ಬಳ್ಳಾರಿ, ಹೊಸಪೇಟೆ ಬಸ್ ಹತ್ತಲು ಪೀಣ್ಯಕ್ಕೆ ಹೋಗಿ]

ಶಿವಮೊಗ್ಗ ಮಾರ್ಗದ ಮುಂಗ­ಡ­ರಹಿತ ಹಾಗೂ ಹೆಚ್ಚುವರಿ ಬಸ್ಸುಗಳು ಮೆಜೆಸ್ಟಿಕ್‌ ಮುಂಭಾ­ಗದ ಬಿಎಂಟಿಸಿ ಸರ್ವಿಸ್ ರಸ್ತೆಯ ಮೂಲಕ ಹೊರಡಲಿವೆ. ಜ.24 ಶನಿವಾರ, ಜ.25 ಭಾನುವಾರ, ಜ.26 ಸೋಮವಾರವಾಗಿದ್ದು ಸಾಲು-ಸಾಲು ರಜೆಗಳಿವೆ. ಗುರುವಾರ ಮತ್ತು ಶುಕ್ರವಾರದಿಂದಲೇ ಜನರು ಹೊರ ಉರುಗಳಿಗೆ ಪ್ರಯಾಣ ಬೆಳೆಸಲಿದ್ದಾರೆ.

English summary
In view of the Republic Day the Karnataka State Road Transport Corporation (KSRTC) will operate extra buses from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X