ಮುನ್ನೋಟದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಕೆ
ಬೆಂಗಳೂರು, ಜೂನ್ 3: ಮೈಸೂರು ಸಾಮ್ರಾಜ್ಯವನ್ನು 1894 ರಿಂದ 1940ರವರೆಗೂ ಸಮರ್ಥವಾಗಿ ಆಳಿದ, ಜನತೆಯ ಅಚ್ಚುಮೆಚ್ಚಿನ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಇಂದಿನ ತಲೆಮಾರಿಗೆ ಎಷ್ಟು ಗೊತ್ತು? ಅವರ ಬಗ್ಗೆ ಒಂದಷ್ಟನ್ನಾದರೂ ತಿಳಿಸುವ ಪ್ರಯತ್ನವಾಗಿ ಅವರ ಜನ್ಮದಿನವಾದ ಜೂನ್ 4 ರಂದು ವಿಭಿನ್ನ ಕಾರ್ಯಕ್ರಮವೊಂದು ನಡೆಯುತ್ತಿದೆ.
ಬೆಂಗಳೂರಿನ ಬಸವನಗುಡಿಯ ಡಿವಿಜಿ ರಸ್ತೆಯ ಸೌತ್ ಅವೆನ್ಯೂ ಕಾಂಪ್ಲೆಕ್ಸ್ ನಲ್ಲಿ ನಾಳೆ (ಜೂನ್ 04) ಬೆಳಿಗ್ಗೆ 11:30 ಕ್ಕೆ ನಡೆಯುವ ಮುನ್ನೋಟ ಕಾರ್ಯಕ್ರಮದಲ್ಲಿ ಯುವ ಬರಹಗಾರ ಸಂದೀಪ್ ಕಂಬಿಯವರು ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು ಮಾತನಾಡಲಿದ್ದಾರೆ.[ಉತ್ತರ ಕರ್ನಾಟಕ ನವನಿರ್ಮಾಣ ವೇದಿಕೆಯಿಂದ ಬೆಂಗಳೂರಲ್ಲಿ ಅದ್ಧೂರಿ ಕಾರ್ಯಕ್ರಮ]

ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದುಕೊಂಡು ತಮಗಿದ್ದ ಅನೇಕ ಅಡೆತಡೆಗಳ ನಡುವೆಯೂ ನಲವತ್ತು ವರ್ಷಗಳ ಕಾಲ ಸುದೀರ್ಘವಾದ ಜನಪರ ಆಡಳಿತ ನಡೆಸಿ, ಕಲಿಕೆ, ಕೈಗಾರಿಕ, ಉದ್ಯಮ, ಸಂಪರ್ಕ, ಕೃಷಿ, ಆರೋಗ್ಯ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಮೈಸೂರು ಸಾಮ್ರಾಜ್ಯವನ್ನು ಅಭಿವೃದ್ಧಿಗೊಳಿಸಿದ ಕೃಷ್ಣರಾಜ ಒಡೆಯರ್ ಅವರನ್ನು ನೆನಪಿಸಿಕೊಂಡು, ಅವರಿಗೆ ನಮನ ಸಲ್ಲಿಸುವುದಕ್ಕಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಆಸಕ್ತರು ಭಾಗವಹಿಸಲು ಕೋರಲಾಗಿದೆ.












Click it and Unblock the Notifications