ಕರಕುಶಲ ವಸ್ತು ಮೇಲಿನ ಜಿಎಸ್ಟಿ ಹಿಂಪಡೆಯದ ಮೋದಿ: ಪ್ರಸನ್ನ ಅಸಮಾಧಾನ
ಬೆಂಗಳೂರು, ಮೇ 09: ಕರಕುಶಲ ವಸ್ತುಗಳು ಹಾಗೂ ಖಾದಿ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ಹಿಂಪಡೆಯುವುದಾಗಿ ಹೇಳಿದ್ದ ಪ್ರಧಾನಿ ಮೋದಿ ತಮ್ಮ ವಚನಕ್ಕೆ ತಕ್ಕಂತೆ ನಡೆದುಕೊಳ್ಳದೆ. ರಾಮರಾಜ್ಯದ ಕನಸು ನನಸು ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು೮ ಹಿರಿಯ ಕರಕುಶಲ ಮತ್ತು ಖಾದಿ ಹೋರಾಟಗಾರ ಪ್ರಸನ್ನ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರದಲ್ಲಿ ಆಳ್ವಿಕೆ ಮಾಡುತ್ತಿರುವ ಬಿಜೆಪಿ ಸರ್ಕಾರವು ರಾಮರಾಜ್ಯವನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ, ವಚನ ಭ್ರಷ್ಟವಾಗಿದೆ. ರಾಮರಾಜ್ಯದ ಮೂಲ ಆಧಾರವೇ ಕೈಉತ್ಪಾದಕತೆಯಾಗಿದೆ. ಕರಕುಶಲ ಕೈಗಾರಿಕೆಯಿಂದ ಸ್ವರಾಜ್ಯ ಸ್ವದೇಶಿ ವಿಕೇಂದ್ರಿಕರಣ ಪರಿಸರ ಸಂರಕ್ಷಣೆ ಬಡತನ ನಿವಾರಣೆ ಇತ್ಯಾದಿ ಪರಿಕಲ್ಪನೆಗಳು ಜೀವ ತಳೆಯುವುದು.ಕರಕುಶಲ ಉತ್ಪನ್ನಗಳ ಮೇಲೆ ತಾನು ವಿಧಿಸಿದ್ದ ಬರ್ಬರವಾದ ಜಿ.ಎಸ್.ಟಿ ತೆರಿಗೆಯನ್ನು ಹಿಂತೆಗೆದುಕೊಳ್ಳವುದಾಗಿಯೂ, ಶೂನ್ಯ ತೆರಿಗೆಯ ವ್ಯವಸ್ಥೆಗೆ ಇಪ್ಪತ್ತೊಂಬತ್ತು ಕೈಉತ್ಪನ್ನಗಳನ್ನು ತರುವುದಾಗಿಯೂ ನೀಡಿದ್ದ ವಚನವನ್ನು ಮರೆತಿದೆ ಎಂದರು.
ದೇಶದ ಒಟ್ಟು ಉತ್ಪಾದಕತೆಯಲ್ಲಿ ಅರವತ್ತು ಪ್ರತಿಶತ ಉತ್ಪಾದಕತೆಯನ್ನು ನಿಭಾಯಿಸುತ್ತದೆ ಈ ಗ್ರಾಮೀಣ ಕ್ಷೇತ್ರ! ಮಳೆಆಧಾರಿತ ಕೃಷಿ, ಕೈಮಗ್ಗ ನೇಕಾರಿಕೆ, ಕುಶಲಕರ್ಮ, ಸುಸ್ಥಿರ ಹೈನುಗಾರಿಕೆ, ಪಾರಂಪರಿಕ ಮೀನುಗಾರಿಕೆ, ಕುಂಬಾರಿಕೆ, ಕಮ್ಮಾರಿಕೆ, ಇತ್ಯಾದಿ ಕ್ಷೇತ್ರಗಳ ಬಡ ಜನರು ಈ ತೆರಿಗೆಗಿಂತ ಮಿಗಿಲಾಗಿ ಅವರು, ತರಿಗೆ ವ್ಯವಸ್ಥೆಯ ಭಾರ, ಪರಕೀಯ ಭಾಷೆಯ ಭಾರ, ಕಂಪ್ಯೂಟರೀಕರಣದ ಭಾರ, ತೆರಿಗೆ ಅಧಿಕಾರಿಗಳ ಕಿರುಕುಳ, ಸಾಗಾಣಿಕೆಯಲ್ಲಿ ಆಗುತ್ತಿರುವ ಉಪಟಳ, ಕಚ್ಚಾಮಾಲಿನ ಪೂರೈಕೆಯಲ್ಲಾಗಿರುವ ಅಡಚಣೆ, ಮಧ್ಯವರ್ತಿಗಳ ಕಾಟ, ಭ್ರಷ್ಟಾಚಾರದ ಕಾಲ, ಇತ್ಯಾದಿಗಳಿಂದ ಸೊರಗಿದ್ದಾರೆ.

ಜಿ.ಎಸ್.ಟಿ ತೆರಿಗೆಯನ್ನು ನಾವು ಜಜಿûಯ ತೆರಿಗೆ ಎಂದು ಕರೆಯುತ್ತೇವೆ. ಪರಿಸರ ಪ್ರಕೃತಿ ಹಾಗೂ ನೈತಿಕತೆಗಳಿಗೆ ಮಾರಕವಾಗಿರುವ ಕೈಗಾರಿಕಾ ಉತ್ಪನ್ನಗಳು ಸರಕಾರಕ್ಕೆ ಈ ತಪ್ಪು ಕಾಣಿಕೆ ನೀಡುವುದರಲ್ಲಿ ಅರ್ಥವಿದೆ. ಆದರೆ, ಕೈಉತ್ಪನ್ನಗಳ ಮೇಲೆ ತರಿಗೆ ವಿಧಿಸಿ ಬಾಜಪ ಸರಕಾರವು ಅಕ್ಷಮ್ಯ ಅಪರಾಧ ಮಾಡಿದೆ.
ಶೂನ್ಯ ತೆರಿಗೆ ವ್ಯವಸ್ಥೆ ಜಾರಿಗೆ ಬಂದರೆ ಗ್ರಾಮೀಣ ಕೈಉತ್ಪಾದಕರು ಸಂಘಟಿತರಾಗಿ, ಅಮುಲ್, ಲಿಜ್ಜತ್ ಪಾಪಡ್, ದೇಸಿ, ದಸ್ತಕಾರ್ ಆಂದ್ರ ಇತ್ಯಾದಿ ಸಹಕಾರಿ ಸಂಘಟನೆಗಳ ಮಾದರಿಯಲ್ಲಿ ನಗರ ಮಾರುಕಟ್ಟೆಯನ್ನು ಯಶಸ್ವಿಯಾಗಿ ಪ್ರವೇಶಿಸಬಲ್ಲವು ಎಂಬ ಉದ್ದೇಶದಿಂದ ಗ್ರಾಮ ಸೇವಾ ಸಂಘವು ಜಿ.ಎಸ್.ಟಿ ವಿರೋಧಿ ಹೋರಾಟವನ್ನು ನಡೆಸಿಕೊಂಡು ಬಂದಿದೆ. ಕೇಂದ್ರ ಸರಕಾರವು ತಕ್ಷಣದಲ್ಲಿ ತನ್ನ ವಚನವನ್ನು ಪೂರೈಸದೆ ಹೋದರೆ ಗ್ರಾಮೀಣ ಬಡವರ ಕೆಂಗಣ್ಣಿನ ಕೋಪಕ್ಕೆ ಅದು ಗುರಿಯಾಗಲಿದೆ, ಹೋರಾಟವು ಹೆಚ್ಚು ವಿಸ್ತøತವಾಗಿ ಮೇಲೆದ್ದು ಬರಲಿದೆ ಎಂದು ಎಚ್ಚರಿಕೆ ನೀಡುತ್ತಿದ್ದೇವೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications