ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಹಪರಿಸಿದ್ದ ನಾಲ್ವರ ಬಂಧನ
ಬೆಂಗಳೂರು, ಫೆ. 23: ಸ್ನೇಹಿತನ ಏಳಿಗೆ ಸಹಿಸಲಾಗದೇ ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಅಪಹರಣಕಾರರನ್ನು ಕೆ.ಜಿ. ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಶೇಖ್ ಜಬಿವುಲ್ಲಾ, ಸೈಯದ್ ಅಬ್ದುಲ್, ಶಹಬಾಜ್ ರಿಯಾಜ್ ಬಂಧಿತ ಆರೋಪಿಗಳು. ಬಂಧಿತರು ಕೆ.ಜಿ ಹಳ್ಳಿಯ ರಾಮ್ ಟೆಂಟ್ ರೋಡ್ ಬಳಿ ಯಿರುವ ಸಯ್ಯದ್ ನಯಾಜ್ ಎಂಬುವರನ್ನು ಫೆ. 16 ರಂದು ಬೆಂಜ್ ಕಾರಲ್ಲಿ ಅಪಹರಣ ಮಾಡಿದ್ದರು. ಕಣ್ಣಿಗೆ ಬಟ್ಟೆ ಕಟ್ಟಿ ಚಾಕು ತೋರಿಸಿ ಕೆ.ಆರ್. ಪುರಂನತ್ತ ಕರೆದೊಯ್ದಿದ್ದರು.

ಆ ಬಳಿಕ ಭಯಬಿದ್ದು ಅದೇ ದಿನ ಕೆ.ಆರ್. ಪುರಂ ಬಳಿ ಬಿಟ್ಟು ವಾಪಸು ಕಳಿಸಿದ್ದರು. ಮೂರು ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಸಯ್ಯದ್ ಕೆ.ಜಿ. ಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಟಿವಿ ಆಧರಿಸಿ ಕಾರ್ಯಾಚರಣೆ ನಡೆಸಿದ ಕೆ.ಜಿ. ಹಳ್ಳಿ ಪೊಲೀಸರು, ಸಿಸಿಟಿವಿ ಆಧರಿಸಿ ನಾಲ್ವರನ್ನು ಬಂಧಿಸಿದ್ದಾರೆ. ಇದರ ಸೂತ್ರಧಾರ ಅಸ್ಲಾಂಗಾಗಿ ಶೋಧ ನಡೆಸುತ್ತಿದ್ದಾರೆ.
Recommended Video
ಉಕ್ರೇನ್ ಮೇಲೆ ಯುದ್ಧ ಘೋಷಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ | Oneindia Kannada












Click it and Unblock the Notifications