ಕಾವೇರಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಹೊಸ ತಂತ್ರಜ್ಞಾನ ಸೇರ್ಪಡೆ
ಬೆಂಗಳೂರು, ಫೆ .19: ವಿವಿಧ ತಂತ್ರಜ್ಞಾನ ಅವಳಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ಕಾವೇರಿ ಹಾಸ್ಪೆಟಲ್ ಹೃದ್ರೋಗ ಚಿಕಿತ್ಸೆಗಾಗಿ ನೂತನವಾಗಿ ಕಾರ್ಡಿಯಾಕ್ ಕ್ಯಾತ್ಲ್ಯಾಬ್' ಕೇಂದ್ರವನ್ನು ನಿರ್ಮಾಣ ಮಾಡಿದೆ. ಈ ಕೇಂದ್ರದ ಉದ್ಘಾಟನೆ ಸಮಾರಂಭವು ಫೆಬ್ರವರಿ 19ರಂದು ಕೋನಪ್ಪನ ಅಗ್ರಹಾರದಲ್ಲಿರುವ ಕಾವೇರಿ ಹಾಸ್ಪೆಟಲ್ನಲ್ಲಿ ನಡೆಯಲಿದೆ. ಶ್ರೀ ಜಯದೇವ ಹೃದಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಅವರು ಚಾಲನೆ ನೀಡಲಿದ್ದಾರೆ.
ಕಾವೇರಿ ಆಸ್ಪತ್ರೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಹಿರಿಯ ಹೃದಯ ತಜ್ಞರಾದ ಡಾ.ಜಿ.ವಿವೇಕ್, ಡಾ.ಗಣೇಶ್ ನಲ್ಲೂರು ಶಿವು ಭಾಗವಹಿಸಲಿದ್ದಾರೆ. ಈ ಇಬ್ಬರು ವೈದ್ಯರು ಹೃದ್ರೋಗ ವಿಷಯದಲ್ಲಿ ಹೆಚ್ಚು ಪರಿಣಿತಿ ಹೊಂದಿದ್ದು, ದೇಶ ಹಾಗೂ ವಿದೇಶದ ಹಲವು ಆಸ್ಪತ್ರೆಗಳ ಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಈ ತಂತ್ರಜ್ಞಾನದಿಂದ ಹೆಚ್ಚಿನ ಗುಣಮಟ್ಟದ ಇಮೇಜ್ಗಳನ್ನು ಪಡೆಯಬಹುದಾಗಿದೆ. ಅದರಲ್ಲೂ, ಕಡಿಮೆ ಪ್ರಮಾಣದ ವಿಕಿರಣದ ಬಳಕೆಯಲ್ಲಿ ಎಂಬುದು ಅತ್ಯಂತ ವಿಶೇಷ. ಆಸ್ಪತ್ರೆಗಳ ಸಹಯೋಗದೊಂದಿಗೆ ಹಲವಾರು ವಿಶ್ವ ದರ್ಜೆಯ ವೈದ್ಯರ ಸಲಹೆ ಮೇರೆಗೆ ತಂತ್ರಜ್ಞಾನವನ್ನು ರೂಪಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೃದಯ ಸಂಬಂಧಿ ರೋಗಗಳು ವಿವಿಧ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದ್ದು, ಇದನ್ನು ಪತ್ತೆ ಮಾಡುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಈ ತಂತ್ರಜ್ಞಾನ ಹೆಚ್ಚು ಉಪಕಾರಿಯಾಗಿ ಕೆಲಸ ಮಾಡಲಿದೆ ಹಾಗೂ ಒಂದು ಟಚ್ನಲ್ಲಿ ಎಲ್ಲವೂ ದೊರೆಯಲಿದೆ.

ತಂತ್ರಜ್ಞಾನದ ಮುಖ್ಯಾಂಶಗಳು:
- ಇದು ಹೊಸ ತಂತ್ರಜ್ಞಾನದ ಥೆರಪಿಯಾಗಿದೆ.
- ಹೆಚ್ಚಿನ ಗುಣಮಟ್ಟದ ಇಮೇಜ್ ನೀಡಲಿದೆ
- ಕಡಿಮೆ ರೇಡಿಯೇಷನ್ ಡೋಸ್
- ಟೇಬಲ್ ಸೈಡ್ ಟಚ್ ಸ್ಕ್ರೀನ್
- ಆಂಜಿಯೋಗ್ರಾಂ ಮಾಡಲು ಅನುಕೂಲವಾಗಿದೆ
- ಹೃದಯ ಸಂಬಂಧಿತ ರೋಡ್ ಮ್ಯಾಪಿಂಗ್
- ಹೃದಯ ಅನ್ವೇಷಣೆ
- ಅಡ್ವಾನ್ಸ್ ಮಾರ್ಕರ್ ಟೂಲ್ ಇನ್ ಟಚ್ ಸ್ಕ್ರೀನ್
Recommended Video
ಈ ಕ್ಯಾತ್ಲ್ಯಾಬ್ನಲ್ಲಿ ಫಿಲಿಪ್ಸ್ ಅಜುರಿಯನ್ -7 M12 (Philips Azurion -7 M12) ಎಂಬ ತಂತ್ರಜ್ಞಾನ ಅವಳಡಿಸಿಕೊಂಡಿದ್ದು, ಆ ಮೂಲಕ ಹೃದಯ ಸಂಬಂಧಿ ರೋಗಗಳಿಗೆ ಅಡ್ವಾನ್ಸ್ ತಂತ್ರಜ್ಞಾನದ ಮೂಲಕ ಶಸ್ತ್ರ ಚಿಕಿತ್ಸೆಯನ್ನು ಮಾಡಬಹುದಾಗಿದೆ. ಫಿಲಿಪ್ಸ್ ಅಜುರಿಯನ್-7 M12 ಎಂಬ ತಂತ್ರಜ್ಞಾನದ ಸಹಾಯದಿಂದ ಶಸ್ತ್ರಚಿಕಿತ್ಸೆ ಮಾಡುವುದರಿಂದ ಹೆಚ್ಚಿನ ನಿಖರತೆ ಸಾಧಿಸಲು ಅನುಕೂಲವಾಗುತ್ತದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications