ಕರವೇಯಿಂದ ಉಚಿತ ಉದ್ಯೋಗ ಮಾರ್ಗದರ್ಶನ ಶಿಬಿರ
ಬೆಂಗಳೂರು, ಜ.5: ಕರ್ನಾಟಕ ರಕ್ಷಣಾ ವೇದಿಕೆಯ "ಐಟಿ ಘಟಕ" ಕನ್ನಡಿಗ ಉದ್ಯೋಗಾರ್ಥಿಗಳ ಅನುಕೂಲಕ್ಕಾಗಿ "ಉದ್ಯೋಗ ಮಾರ್ಗದರ್ಶನ ಶಿಬಿರ"ವನ್ನು ಹಮ್ಮಿಕೊಂಡಿದೆ
ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ನಾಡು ನುಡಿಯ ವಿಚಾರವಾಗಿ ಕಳೆದ 15 ವರ್ಷಗಳಿಂದ ಹೋರಾಟಗಳನ್ನು ಮಾಡಿಕೊಂಡು ಬರುತ್ತಿರುವುದು ನಾಡಿನ ಜನತೆಗೆ ತಿಳಿದಿದೆ. [ಕನ್ನಡಿಗರಿಗೆ ಉದ್ಯೋಗ, ಅದೇ ನಿಜವಾದ ರಾಜ್ಯೋತ್ಸವ]
ಬೆಂಗಳೂರು ಮಹಾನಗರದಲ್ಲಿ ಸುಮಾರು ಎರಡು ದಶಕಗಳ ಹಿಂದೆ ಐಟಿ ಉದ್ಯಮವು ಸ್ಥಾಪನೆಯಾಗಿ ಇಂದು ಹೆಮ್ಮರವಾಗಿ ಬೆಳೆದಿದೆ. ದೇಶದ ವಿವಿಧ ಭಾಗಗಳಿಂದ ಜನರು ಐಟಿ ಉದ್ಯೋಗ ಅರಸಿ ಬೆಂಗಳೂರಿಗೆ ಬರುತ್ತಿದ್ದಾರೆ. [ಕನ್ನಡಿಗರಿಗೆ ಉದ್ಯೋಗ ಸಿಗಲಿ, ಕರವೇ ಮೆರವಣಿಗೆ]
ಈ
ಹೊತ್ತಿನಲ್ಲಿ
ರಾಜ್ಯದ
ನಾನ
ಭಾಗಗಳಲ್ಲಿ
ವಿದ್ಯಾಭ್ಯಾಸ
ಪಡೆದು
ತಮ್ಮ
ಅಭಿರುಚಿಗೆ
ಸರಿಹೊಂದುವ
ಐಟಿ
ಉದ್ಯೋಗವನ್ನು
ಹುಡುಕುತ್ತಿರುವ
ಕನ್ನಡಿಗರಿಗೆ
"ಉದ್ಯೋಗ
ಮಾರ್ಗದರ್ಶನ
ಶಿಬಿರ"ದ
ಮೂಲಕ
ಮಾರ್ಗದರ್ಶನವನ್ನು
ನೀಡುವುದು
ಕರ್ನಾಟಕ
ರಕ್ಷಣಾ
ವೇದಿಕೆಯ
"ಐಟಿ
ಘಟಕ"ದ
ಧ್ಯೇಯೋದ್ದೇಶಗಳಲ್ಲಿ
ಒಂದಾಗಿದೆ.
ಈ ನಿಟ್ಟಿನಲ್ಲಿ ಜನವರಿ 10, 2015 ರಂದು ಉದ್ಯೋಗ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಿದ್ದೇವೆ. ವಿವರಗಳು ಹೀಗಿವೆ:
ದಿನಾಂಕ:
ಜನವರಿ
10,
2015,
ಶನಿವಾರ
ಸ್ಥಳ:
ವಾಡಿಯಾ
ಹಾಲ್,
ಇಂಡಿಯನ್
ಇನ್
ಸ್ಟಿಟ್ಯೂಟ್
ಆಫ್
ವರ್ಲ್ಡ್
ಕಲ್ಚರ್,
ಬಿಪಿ
ವಾಡಿಯಾ
ರಸ್ತೆ,
ಬಸವನಗುಡಿ,
ಬೆಂಗಳೂರು
ಸಮಯ:
ಬೆಳಿಗ್ಗೆ
9.30
ರಿಂದ
ಮಧ್ಯಾಹ್ನ
1.30
ರವರೆಗೆ
ನೊಂದಣಿ:
ನೊಂದಾಯಿಸಿಕೊಂಡವರಿಗೆ
ಕಾರ್ಯಕ್ರಮದಲ್ಲಿ
ಭಾಗವಹಿಸಲು
ಅವಕಾಶ
ದೊರೆಯುತ್ತದೆ.
ನೋಂದಾಯಿಸಿಕೊಳ್ಳಲು
ಇಲ್ಲಿ
ಕ್ಲಿಕ್
ಮಾಡಿ
ಐಟಿ ಘಟಕದ ಧ್ಯೇಯೋದೇಶಗಳು:
1. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಮಾರ್ಗದರ್ಶನ ನೀಡುವುದು.
2. ಉದ್ಯೋಗಾಕಾಂಕ್ಷಿಗಳಿಗೆ ಸಹಕಾರಿಯಾಗುವಂತಹ ಉದ್ಯೋಗ ಮಾಹಿತಿ ಕೇಂದ್ರವನ್ನು ಸ್ಥಾಪಿಸುವುದು
3. ಐಟಿ ಉದ್ಯೋಗ ಅರಸಿ ನಾಡಿಗೆ ಹಲವು ಪರಭಾಷಿಕರು ಬರುತ್ತಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರಲು "ಕನ್ನಡ ಕಲಿ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. [ನಮ್ಮ ಮೆಟ್ರೋದಲ್ಲಿ ಕನ್ನಡಿಗರಿಗೆ ಉದ್ಯೋಗ: ಗಡುವು ]
ಇದು ಕರ್ನಾಟಕ ರಕ್ಷಣಾ ವೇದಿಕೆಯ ಐಟಿ ಘಟಕವು ಕನ್ನಡಿಗರ ಅನುಕೂಲಕ್ಕೋಸ್ಕರ ಉಚಿತವಾಗಿ ಆಯೋಜಿಸುತ್ತಿರುವ ಶಿಬಿರವಾಗಿದೆ. ನಿಮ್ಮ ಪರಿಚಿತರೊಂದಿಗೆ ಹಂಚಿಕೊಂಡು ಹೆಚ್ಚಿನ ಜನರಿಗೆ ತಲುಪಿಸಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಐಟಿ ಘಟಕ ಉಪಾದ್ಯಕ್ಷರಾದ ಅಮರನಾಥ್ ಶಿವಶಂಕರ್ ಕೋರಿದ್ದಾರೆ. (ಒನ್ ಇಂಡಿಯಾ ಸುದ್ದಿ)