ಹೊಸ ವರ್ಷದಂದು ಮದ್ಯ ಏಕೆ ನಿಷೇಧಿಸಬಾರದು: ಹೈಕೋರ್ಟ್ ಪ್ರಶ್ನೆ
ಬೆಂಗಳೂರು, ಡಿಸೆಂಬರ್ 15 : ಹೊಸ ವರ್ಷದಂದು ಮದ್ಯ ನಿಷೇಧ ಪ್ರಕರಣ ಹೊಸ ವರ್ಷದಂದು ಮದ್ಯವನ್ನು ಏಕೆ ನಿಷೇಧಿಸಬಾರದು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದೆ.
ಹೊಸ ವರ್ಷಾಚರಣೆ ನೆಪದಲ್ಲಿ ಮದ್ಯ ಸೇವನೆ ಮಾಡಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬರುವ ಡಿಸೆಂಬರ್ 31 ಹಾಗೂ 2018 ರ ಜನವರಿ 1 ರಂದು ಬೆಂಗಳೂರು ನಗರದಲ್ಲಿ ಮದ್ಯ ಮಾರಾಟ ನಿರ್ಬಂಧಿಸುವಂತೆ ಸೂಚನೆ ನೀಡಬೇಕು ಎಂದು ಪುರುಷ ರಕ್ಷಣಾ ವೇದಿಕೆ ಕಾರ್ಯಕರ್ತ ನಾಗೇಶ್ ಎಂಬುವವರು ಕರ್ನಾಟಕ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಗಾಂಧಿ ಜಯಂತಿಯಂದು ಮದ್ಯ ನಿಷೇಧಿಸಿದ ಮಾದರಿಯಲ್ಲಿಯೇ ಹೊಸ ವರ್ಷಕ್ಕೆ ಯಾಕೆ ಮದ್ಯ ನಿಷೇಧಿಸಬಾರದು ಎಂದು ಹೈಕೋರ್ಟ್ ಪ್ರಶಸ್ನಿಸಿದೆ. ಕಳೆದ ವರ್ಷ ನಡೆದಂತೆ ಯಾವುದೇ ಅಹಿತಕರ ಘಟನೆ ನಡೆಯಲು ಅವಕಾಶ ನೀಡದಂತೆ ಸೂಚನೆ ನೀಡಿದೆ.
ಈ ಬಾರಿ ಅಹಿತಕರ ಘಟನೆಗಳನ್ನು ತಡೆಯಲಿ ಯಾವ ರೀತಿ ಮುಂಜಾಗೃತಾ ಕ್ರಮವನ್ನು ತೆಗೆದುಕೊಂಡಿದೆ ಎಂದು ಪೊಲೀಸ್ ಕಮಿಷನರ್ ಅವರಿಗೆ ಅಫಿಡೆವಿಟ್ ನೀಡಲು ವಿಭಾಗೀಯ ಪೀಠ ಸೂಚಿಸಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಆಳವಡಿಸಲಾಗಿದೆ ಮೇಲ್ಸೇತುವೆಗಳ ಮೇಲೆ ಆಚರಣೆ ನಿಷೇಧಿಸಿದ್ದೇವೆ ಅತಿವೇಗ , ನಿರ್ಲಕ್ಷ್ಯ ದಿಂದ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಸರ್ಕಾರದ ಪರ ಎಎಜಿ ಪೊನ್ನಣ್ಣ ದಿಂದ ಹೈಕೋರ್ಟ್ ಮಾಹಿತಿ ನೀಡಿದ್ದಾರೆ. ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.












Click it and Unblock the Notifications