Bengaluru 2nd International Airport: ಈ ಭಾಗದಲ್ಲಿ ಏರ್ಪೋರ್ಟ್ ನಿರ್ಮಿಸಲು ಸರ್ಕಾರ ಒಲವು, ಎಲ್ಲಿ?
Bengaluru Second Airport: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru Second Airport) ನಿರ್ಮಾಣಕ್ಕೆ ಸ್ಥಳ ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದೆ. ಹಾಲಿ ಕೆಂಪೇಗೌಡ ವಿಮಾನ ನಿಲ್ದಾಣ (KIA) ದಲ್ಲಿ ಹೆಚ್ಚಿನ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ಎರಡನೇ ವಿಮಾನ ನಿಲ್ದಾಣ ಬೆಂಗಳೂರಿಗೆ ಅಗತ್ಯವಿದೆ ಎಂದು ಸರ್ಕಾರ ಮನಗಂಡು ಈ ಹಿಂದೆ ಏರ್ಪೋರ್ಟ್ ಯೋಜನೆ ಆರಂಭೀಸಲು ಮೂರು ಜಾಗ ಗುರುತಿಸಿತ್ತು. ಆದರೆ ಯಾವುದು ಫೈನಲ್ ಆಗಿಲ್ಲ.
ಇದೀಗ ರಾಜ್ಯ ಸರ್ಕಾರ ಕನಕಪುರ ಮತ್ತು ಬನ್ನೇರುಘಟ್ಟ ರಸ್ತೆಗಳ ಕಡೆಗೆ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಮನಸ್ಸು ಮಾಡಿದೆ ಎಂದು ಹೇಳಲಾಗುತ್ತಿದೆ. ಮೊದಲು ಕನಕಪುರ ಹಾರೋಹಳ್ಳಿ ಕಡೆಗೆ ಎರಡು ಸ್ಥಳ, ಕುಣಿಗಲ್-ನೆಲಮಂಗಲ ಹೆದ್ದಾರಿ ಸಮೀಪ ಒಂದು ಜಾಗ ಗುರುತಿಸಲಾಗಿತ್ತು. ಕೇಂದ್ರದ ಎಎಐ ತಂಡ ನಗರಕ್ಕೆ ಬಂದು ಎಲ್ಲ ಸ್ಥಳಗಳನ್ನು ಪರಿಶೀಲನೆ ಮಾಡಿಕೊಂಡು ಹೋಗಿತ್ತು. ಅದರ ವರದಿ ಬರಬೇಕಿದೆ.

ಇದೇ ವೇಳೆ ತುಮಕೂರು ಭಾಗದಲ್ಲಿ ಬೆಂಗಳೂರು ಎರಡನೇ ಏರ್ಪೋರ್ಟ್ ನಿರ್ಮಿಸಿದರೆ ಅನೇಕ ಜಿಲ್ಲೆಗಳಿಗೆ ಒಳಿತಾಗುತ್ತದೆ. ಮಧ್ಯ ಕರ್ನಾಟಕ ಅಭಿವೃದ್ಧಿ ಆಗಲಿದೆ ಎಂದು ಖದ್ದು, ಸಚಿವರು ಶಾಸಕರೇ ಸರ್ಕಾರವನ್ನು ಒತ್ತಾಯಿಸಿದ್ದರು. ಇದೀಗ ರಾಜ್ಯ ಸರ್ಕಾರವು ಕನಕಪುರ, ಬನ್ನೇರುಘಟ್ಟ ರಸ್ತೆಗಳ ಕಡೆಗೆ ಏರ್ಪೋರ್ಟ್ ನಿರ್ಮಿಸಲು ಒಲವು ಹೊಂದಿರುವುದು ಗೊತ್ತಾಗಿದೆ.
ದೇವನಹಳ್ಳಿಯಲ್ಲಿರುವ ಹಾಲಿ ಏರ್ಪೋರ್ಟ್ನಲ್ಲಿ ವಾರ್ಷಿಕ 85 ಮಿಲಿಯನ್ ಜನರು ಪ್ರಯಾಣ ಮಾಡುತ್ತಿದ್ದಾರೆ. ವಾರ್ಷಿಕವಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಮುಂದಿನ ಹತ್ತು ವರ್ಷಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಒಂದು ವೇಳೆ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಿಸದಿದ್ದರೆ ಜನರು ಭವಿಷ್ಯದಲ್ಲಿ ತಮಿಳುನಾಡಿನ ಹೊಸೂರು ಅನ್ನು ಬದಲಿ ವಿಮಾನ ಸಾರಿಗೆಗೆ ಅವಲಂಭಿಸುವ ನಿರೀಕ್ಷೆ ಇದೆ.
ಸವಾಲುಗಳನ್ನು ದಾಟಿ ಯೋಜನೆ ಆರಂಭಿಸಬೇಕು
ಸದ್ಯ ಎದುರಾಗಿರುವ ಭೌಗೋಳಿಕ, ಹಣಕಾಸು ಹಾಗೂ ಇನ್ನಿತರ ಸವಾಲುಗಳನ್ನು ದಾಟಿ ಒಮ್ಮತದಿಂದ ಬೆಂಗಳೂರಿಗೆ 50-100 ಕಿಲೋ ಮೀಟರ್ ಒಳಗಿನ ಪ್ರದೇಶಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣ ನಿರ್ಮಿಸುವ ಅಗತ್ಯತೆ ಇದೆ. ಈಗಾಗಲೇ ಮೂರು ಸ್ಥಳಗಳನ್ನು ಎಎಐ ಟೀಂ ಪರಿಶೀಲಿಸಿಕೊಂಡು ಹೋಗಿದೆ. ಅದರ ವರದಿ ಬರಬೇಕಿದೆ. ಮತ್ತೊಂದೆಡೆ ತಮಿಳುನಾಡಿನ ಹೊಸೂರು ಬಳಿಕ ಆ ಸರ್ಕಾರ ಏರ್ಪೋರ್ಟ್ ನಿರ್ಮಿಸಲು ಬೆಂಗಳೂರಿಗೆ ಪೈಪೋಟಿ ಒಡ್ಡುತ್ತಲೇ ಇದೆ. ಕರ್ನಾಟಕ ಸರ್ಕಾರ ಹೊಸ ಏರ್ಪೊರ್ಟ್ ಯೋಜನೆಗೆ ಮತ್ತಷ್ಟು ವೇಗ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರದ ನಾಯಕರನ್ನು ಭೇಟಿ ಮಾಡಿ ಮನವೊಲಿಸಿ, ಸೂಕ್ತ ಆಯ್ಕೆ ಮಾಡಿ ಯೋಜನೆ ಆರಂಭಿಸುವಂತೆ ಬೆಂಗಳೂರಿಗರು ಒತ್ತಾಯಿಸುತ್ತಿದ್ದಾರೆ.
-
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications