Get Updates
Get notified of breaking news, exclusive insights, and must-see stories!

ದೀಪಾವಳಿ 2022; ಎಲ್ಲಾ ದೇವಾಲಯಗಳಲ್ಲೂ ಗೋಪೂಜೆಗೆ ರಾಜ್ಯ ಸರ್ಕಾರದ ಆದೇಶ

ಬೆಂಗಳೂರು, ಅ.20: ದೀಪಾವಳಿಯ ಸಂದರ್ಭದಲ್ಲಿ ರಾಜ್ಯದ ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನಗಳಲ್ಲಿ ಗೋಪೂಜೆ ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ.

ದೀಪಾವಳಿಯ ಕೊನೆಯ ದಿನವಾಗಿ ಆಚರಿಸಲಾಗುವ ಬಲಿಪಾಡ್ಯಮಿಯಂದು (ಅಕ್ಟೋಬರ್ 26 ರಂದು) ಸಂಜೆ 5.30 ರಿಂದ 6.30 ರವರೆಗೆ ಗೋಧೂಳಿ ಲಗ್ನದಲ್ಲಿ ದೇವಾಲಯಗಳಲ್ಲಿ ಗೋವುಗಳ ಪೂಜೆಯನ್ನು ನಡೆಸುವಂತೆ ಅರ್ಚಕರಿಗೆ ನಿರ್ದೇಶಿಸಿದೆ. "ಜನರು ಈ ಸನಾತನ ಹಿಂದೂ ಧರ್ಮದ ಆಚರಣೆಯನ್ನು ಮರೆಯಬಾರದು" ಎಂಬ ಕಾರಣಕ್ಕೆ ಗೋಪೂಜೆಯನ್ನು ಆಯೋಜಿಸಲಾಗಿದೆ.

ಗೋವುಗಳಿಗೆ ಸ್ನಾನ ಮಾಡಿಸಿ, ದೇವಸ್ಥಾನಗಳಿಗೆ ಕರೆತಂದು, ಕುಂಕುಮ, ಅರಿಶಿನ ಮತ್ತು ಹೂವಿನಿಂದ ಅಲಂಕರಿಸಿ, ಅಕ್ಕಿ, ಬೆಲ್ಲ, ಬಾಳೆಹಣ್ಣು ಮತ್ತು ಇತರ ಸಿಹಿತಿಂಡಿಗಳನ್ನು ನೀಡಿ, ದೀಪ ಮತ್ತು ಧೂಪದಿಂದ ಪೂಜಿಸಬೇಕು ಎಂದು ಮುಜರಾಯಿ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

Karnataka Government Orders Gopuja At All Temples On Deepavali

"ಅನಾದಿ ಕಾಲದಿಂದಲೂ ಹಿಂದೂಗಳು ಗೋವನ್ನು ಪೂಜಿಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಗರ ಮತ್ತು ಪಟ್ಟಣಗಳಲ್ಲಿ ಜನರು ಗೋವಿನ ಪೂಜೆಯನ್ನು ಮರೆತಿದ್ದಾರೆ. ಕನಿಷ್ಠ ದೀಪಾವಳಿ - ಬಲಿಪಾಡ್ಯಮಿಯಂದು ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಗೋವಿನ ಪೂಜೆಯನ್ನು ಕಡ್ಡಾಯವಾಗಿ ನಡೆಸುವುದು ಸೂಕ್ತ. ಈ ಸನಾತನ ಹಿಂದೂ ಧರ್ಮದ ಆಚರಣೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲಾಗುತ್ತದೆ" ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಸುತ್ತೋಲೆಯು ಹಿಂದೂ ಸಂಪ್ರದಾಯದಂತೆ ಗೋವಿನ ಮಹತ್ವವನ್ನು ವಿವರಿಸುತ್ತದೆ.

Karnataka Government Orders Gopuja At All Temples On Deepavali

ಈ ವರ್ಷದ ಆಗಸ್ಟ್‌ನಲ್ಲಿ ನಡೆದ ವರಮಹಾಲಕ್ಷ್ಮಿ ಹಬ್ಬದಂದು ಎಲ್ಲಾ ಭಕ್ತೆಯರಿಗೆ ಅರಿಶಿನ, ಕುಂಕುಮ ಮತ್ತು ಆರು ಹಸಿರು ಬಳೆಗಳನ್ನು ನೀಡುವಂತೆ ತನ್ನ ಮುಜರಾಯಿ ಇಲಾಖೆಯು ದೇವಾಲಯಗಳಿಗೆ ತಿಳಿಸಿತ್ತು. ದೇವರಿಗೆ ನೈವೇದ್ಯ ಮಾಡಿದ ನಂತರ ಭಕ್ತರಿಗೆ 25 ಗ್ರಾಂ ಅರಿಶಿನ, 25 ಗ್ರಾಂ ಕುಂಕುಮ ಮತ್ತು ಆರು ಬಳೆಗಳನ್ನು ನೀಡಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+