ಚಾಲುಕ್ಯರ ಅಜೇಯ ಸೇನೆ ''ಕರ್ಣಾಟ ಬಲ'' ವೆಬ್ಸೈಟ್ ಲೋಕಾರ್ಪಣೆ
ವೈಭವೋಪೇತ ಅಲಂಕಾರ, ಸವಲತ್ತುಗಳ ಅರಮನೆ ನಿಮ್ಮದು ಇಲ್ಲೇ ಇದ್ದುಕೊಂಡು ಇದನ್ನ ಬಳಸುತ್ತಾ ಇರುತ್ತೀರಿ ಅಂದರೆ ಅರಮನೆ ನಿಮ್ಮದು ಅಂತ ಅಂದರೂ ಅದರ ಸವಲತ್ತು, ವೈಭವಗಳ ಅರಿಯದೆ ಹಳೆಯದು ಅರಮನೆಯಂತ 30*40 ವಿಸ್ತೀರ್ಣದ ನಾವೇ ಕಟ್ಕೊಂಡ ಮನೆಯೆ ಶ್ರೇಷ್ಠ ಅಂತ ನಾವೇ ಕಟ್ಕೊಂಡ ಮನೆಯಲ್ಲಿ ಬದುಕಿದರೆ ಅದು ಅರಮನೆಯ ತಪ್ಪಲ್ಲ. ಅದರ ಬಗ್ಗೆ ಸರಿಯಾಗಿ ತಿಳಿಯದಿರುವುದು ಬಳಸದ ಜನರ ಮೂಢತನ. ಇಂತಹ ಅರಮನೆ ವೈಭವ, ಸವಲತ್ತುಗಳ ಭಾಷೆ ಕನ್ನಡ, ಆದರೆ ಕನ್ನಡದಲ್ಲಿರುವ ಭಾಷಾ ಸವಲತ್ತುಗಳು, ಶ್ರಿಮಂತಿಕೆ ತುಂಬಾ ಜನಕ್ಕೆ ಗೊತ್ತಿಲ್ಲದಿರುವುದು ವಿಪರ್ಯಾಸ.
ಈ ಮೂಢತನ ಹೋಗಲಾಡಿಸಲು ಹಾಗೂ ಭಾಷೆಯ ಉಳಿಸಲು ಟೊಂಕಕಟ್ಟಿ ನಿಲ್ತಾ ಇದ್ದಾರೆ "ಕರ್ಣಾಟ ಬಲ" ತಂಡದವರು. ಚಾಲುಕ್ಯರ ಅಜೇಯ ಸೇನೆಯ ಹೆಸರಿಟ್ಟುಕೊಂಡಿದ್ದಾರೆ.ಕನ್ನಡ ಭಾಷೆಗಾಗಿ ಶ್ರಮಿಸಲು ಒಗ್ಗೂಡಿ ನಿಂತಿದ್ದಾರೆ.

ಕನ್ನಡ ರಾಜ್ಯೋತ್ಸವದ ಶುಭದಿನದಿಂದು ಕೆಂಗಲ್ ಹನುಮಂತಯ್ಯ ಕಲಾಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಎಂ.ರಾಜಶೇಖರ್ ಕರ್ಣಾಟ ಬಲ ಯೂಟೂಬ್ ಚಾನೆಲ್,ಲಾಂಛನ ಮತ್ತು ವೆಬ್ ಸೈಟ್ ಲೋಕಾರ್ಪಣೆಗೊಳಿಸಿದರು.
ಭವಿಷ್ಯದ ಕನ್ನಡ ತಂತ್ರಜ್ಞಾನದ ಜೊತೆಗೆ ಬೆಳೆಯಬೇಕೆಂದು, ಕನ್ನಡ ಭಾಷೆ ಬಳಕೆ ಅಭಿಮಾನದಿಂದ ಇರಬೇಕೆ ಹೊರತು ತೋರಿಕೆಗಾಗಿ ಅಲ್ಲ ಎಂದು ಹೇಳುತ್ತಾ "ನಿರಂತರ ಕನ್ನಡ ಕಲಿಕೆ ನಿರಂತರ ಕನ್ನಡ ಬಳಕೆ ನನ್ನ ಕಾಯಕ" ಎಂಬ ತತ್ವವನ್ನು ಪ್ರತಿಯೊಬ್ಬ ಕನ್ನಡಿಗರು ಜೀವನದಲ್ಲಿ ಅಳವಡಿಸಿ ಕೊಂಡು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಮಾತಾಡಿ ಹಾರೈಸಿದರು.

ಕ.ಸಾ.ಪ ಅಧ್ಯಕ್ಷ ಡಾ.ಮನು ಬಳಿಗಾರ್ ಮಾತಾಡಿ ನಾಡಿನ ಸಾಹಿತ್ಯ, ಸಂಸ್ಕೃತಿ ಸಂಪದ್ಭರಿತವಾದದ್ದು. ಇತಿಹಾಸ ಹೆಕ್ಕಿ ತೆಗೆದು ನಾಡಿನ ಜನತೆಗೆ ಉಪಯುಕ್ತವಾಗುವ ಕೆಲಸ ಮಾಡುತ್ತಿರುವ ಕರ್ಣಾಟ ಬಲ ತಂಡಕ್ಕೆ ಎಲ್ಲರು ಬೆಂಬಲಕೊಡಬೇಕೆಂದರು.

ನಟ, ನಿರ್ದೇಶಕ ಸುರೇಶ ಹೆಬ್ಳೀಕರ್ ಮತ್ತು ಶೇಷಾದ್ರಿಪುರಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಹೆಚ್. ಎಸ್. ಅನುಪಮಾ ಸಹ ತಂಡಕ್ಕೆ ಹಾರೈಸಿದರು. ಚಿತ್ರ ಸಾಹಿತಿ ಡಾ||ವಿ.ನಾಗೇಂದ್ರ ಪ್ರಸಾದ ಉಪಸ್ಥಿತರಿದ್ದರು.
ಕರ್ಣಾಟ ಬಲದ ಅಧ್ಯಕ್ಷರಾದ ಭುವನೇಶ್ ಮತ್ತು ತಂಡದವರು ದಿವ್ಯ ಆಲೂರವರ ನಿರೂಪಣೆಯಲ್ಲಿಕಾರ್ಯಕ್ರಮ ನಡೆಯಿಸಿಕೊಟ್ಟರು. ಕರ್ಣಾಟ ಬಲದ ಆಗಮನದಿಂದ ಚಾಲುಕ್ಯೆ ಸೇನೆಯ ಬಲ ಕನ್ನಡಕ್ಕೆ ಬಂದಂತಾಗಿದೆ.
-
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ನೈರುತ್ಯ ರೈಲ್ವೆ: 194 ಗೂಡ್ಸ್ ರೈಲು ಮ್ಯಾನೇಜರ್ ಹುದ್ದೆ; ಕನ್ನಡಿಗರಿಗೆ ಅನ್ಯಾಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು -
Bengaluru: ಬೆಂಗಳೂರಲ್ಲಿ ಟೀ ಶಾಪ್ನಲ್ಲಿ 10 ಭಾಷೆ ಮಾತನಾಡುವವರು ಸಿಗ್ತಾರೆ: ನಾರ್ಥಿ ಯುವತಿ ವೈರಲ್ ಪೋಸ್ಟ್ -
ಸಿನಿಮಾಗಳಲ್ಲಿ ಅಶ್ಲೀಲ ಸಾಹಿತ್ಯಕ್ಕೆ ಕಡಿವಾಣ ಹಾಕಿ: ಪ್ರೇಮ್ ವಿವಾದದ ಬೆನ್ನಲ್ಲೇ ಫಿಲ್ಮ್ ಚೇಂಬರ್ಗೆ ಮಹಿಳಾ ಆಯೋಗ ಪತ್ರ -
Prem: ಸರ್ಸೆ ಸೆರಗ ಹಾಡನ್ನ ಎಲ್ರೂ ತಪ್ಪಾಗಿ ಅರ್ಥ ಮಾಡ್ಕೊಂಡಿದ್ದಾರೆ, ನನ್ನ ಉದ್ದೇಶ ಅದಾಗಿರಲಿಲ್ಲ: ಪ್ರೇಮ್ -
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಆಗ್ರಹ; ರಾಜ್ಯದ ಎಲ್ಲ ಸಂಸದರಿಗೆ ಪುರುಷೋತ್ತಮ ಬಿಳಿಮಲೆ ಪತ್ರ -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
KD Song Controversy: ಸೆರಗ ಸರ್ಸೆ ಹಾಡು ವಿವಾದ: ಪ್ರೇಮ್ ವಿರುದ್ಧ ದೂರು, ನೋಟಿಸ್ ಬೆನ್ನಲ್ಲೇ ಹಿಂದಿ ಹಾಡು ಡಿಲೀಟ್ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ












Click it and Unblock the Notifications