ಮೆಟ್ರೋ ಆಯ್ತು, ಈಗ ಬ್ಯಾಂಕುಗಳ ಫಲಕಗಳಿಂದ ಹಿಂದಿ ತೆರವಿಗೆ ಪ್ರತಿಭಟನೆ
ಬ್ಯಾಂಕುಗಳ ಫಲಕಗಳಲ್ಲಿನ ಹಿಂದಿ ಮಾಹಿತಿ ತೆಗೆಯುವಂತೆ ಕರವೇ ಆಗ್ರಹ. ಎಸ್ ಬಿಐ ಬ್ಯಾಂಕ್ ನ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು.
ಬೆಂಗಳೂರು, ಆಗಸ್ಟ್ 9: ಇತ್ತೀಚೆಗೆ, ನಮ್ಮ ಮೆಟ್ರೋ ರೈಲು ನಿಗಮದ ಫಲಕಗಳಿಂದ ಹಿಂದಿ ಬರಹಗಳನ್ನು ತೆರವುಗೊಳಿಸುವ ಅಭಿಯಾನದಲ್ಲಿ ಯಶಸ್ಸು ಪಡೆದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹಾಗೂ ಇನ್ನಿತರ ಸಂಘಟನೆಗಳು, ಇದೀಗ ರಾಷ್ಟ್ರೀಕೃತ ಬ್ಯಾಂಕುಗಳ ಫಲಕಗಳಲ್ಲಿರುವ ಹಿಂದಿ ಭಾಷೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿವೆ.
ಈ ಹಿನ್ನೆಲೆಯಲ್ಲಿ, ನಗರದ ಎಸ್ ಬಿಐ ಕೇಂದ್ರ ಕಚೇರಿಯ ಮುಂದೆ ಬುಧವಾರ (ಆಗಸ್ಟ್ 9) ಮಧ್ಯಾಹ್ನ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಅಲ್ಲದೆ, ಎಲ್ಲಾ ಬ್ಯಾಂಕುಗಳೂ ತಮ್ಮ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನೇ ಬಳಸಬೇಕೆಂದೂ ಆಗ್ರಹಿಸಿದರು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಇತ್ತೀಚೆಗೆ, ನಮ್ಮ ಮೆಟ್ರೋ ರೈಲು ನಿಗಮಕ್ಕೆ ಸಂಬಂಧಿಸಿದ ಎಲ್ಲಾ ನಿಲ್ದಾಣಗಳು, ಕಚೇರಿಗಳಲ್ಲಿ ಹಾಕಲಾಗಿರುವ ಫಲಕಗಳಿಂದ ಹಿಂದಿ ಭಾಷೆಯ ಮಾಹಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಬೇಕೆಂದು ಪ್ರತಿಭಟನೆ ನಡೆಸಲಾಗಿತ್ತು.
Bengaluru: Karnataka Rakshana Vedike protest in front of SBI Bank branch demanding removal of Hindi signage and compulsory use of Kannada pic.twitter.com/oXMUzFNm3d
— ANI (@ANI) August 9, 2017
ಇದು ದೇಶಾದ್ಯಂತ ಸುದ್ದಿಯಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹಿಂದಿಯನ್ನು ಹೇರುವುದು ಸಾಧ್ಯವಿಲ್ಲ ಎಂದಿದ್ದರು. ಹಾಗಾಗಿ, ಆ ಫಲಕಗಳಿಂದ ಹಿಂದಿ ಬರಹಗಳನ್ನು ತೆಗೆಯಲಾಗಿತ್ತು.












Click it and Unblock the Notifications