ಆನ್ಲೈನ್ ಪುಸ್ತಕ ಮಳಿಗೆ ಕನ್ನಡಲೋಕ ವೆಬ್ ತಾಣ ಲೋಕಾರ್ಪಣೆ
ಬಸವ ಜಯಂತಿಯ ಪ್ರಯುಕ್ತ ಆನ್ ಲೈನ್ ಪುಸ್ತಕ ಮಳಿಗೆ ಕನ್ನಡಲೋಕ.ಇನ್ ಎಂಬ ಹೊಸ ವೆಬ್ ತಾಣವನ್ನು ಲೋಕಾರ್ಪಣೆ ಮಾಡಲಾಗಿದೆ.
ಬೆಂಗಳೂರು, ಏಪ್ರಿಲ್ 29: ಅಣ್ಣ ಬಸವಣ್ಣನವರು ಹುಟ್ಟಿದ ಈ ಶುಭ ದಿನ ಹೊಸ ವೆಬ್ ಸೈಟ್ 'ಕನ್ನಡಲೋಕ'ವನ್ನು (www.kannadaloka.in) ಲೋಕಾರ್ಪಣೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ನಮ್ಮ ಎಲ್ಲಾ ವಸ್ತುಗಳ ಮೇಲೆ ಶೇಕಡಾ 10% ರಿಯಾಯಿತಿ ಮತ್ತು ಬಸವಣ್ಣನವರ ವಚನಗಳ ಪುಸ್ತಕವನ್ನು ಉಚಿತವಾಗಿ ನೀಡಲಾಗಿದ್ದು,. ಕೂಪನ್ ಕೋಡ್ 'KANNADA' ಬಳಸಿ 10% ರಿಯಾಯಿತಿ ಪಡೆಯಬಹುದು.
ಏನಿದು ವೆಬ್ ಸೈಟ್?: ಕಿಂಗ್ಸ್ ಮಾರ್ಟ್ ಎಂಬ ವೆಬ್ ಸೈಟ್ ಪ್ರಾರಂಭಿಸಿದ ನಾವು ಮೊದಲಿಗೆ ಮೊಬೈಲ್ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳನ್ನು ಮಾರಾಟ ಮಾಡುತ್ತಿದ್ದೆವು. ಸ್ವಲ್ಪ ತಿಂಗಳುಗಳ ನಂತರ ಕನ್ನಡ ಪುಸ್ತಕಗಳನ್ನು ಮಾರಲು ಶುರು ಮಾಡಿದೆವು.
ಎಸ್ ಎಲ್ ಬೈರಪ್ಪನವರ 'ಉತ್ತರಕಾಂಡ' ಕಾದಂಬರಿ ಬಿಡುಗಡೆಯಾದಾಗ ಅದನ್ನು ನಮ್ಮ ವೆಬ್ ಸೈಟ್ ನಲ್ಲಿ ಪೂರೈಸುವ ಕೆಲಸ ಶುರು ಮಾಡಿದಾಗ ಕನ್ನಡ ಸಾಹಿತ್ಯಕ್ಕೆ ದೊಡ್ಡ ಓದುಗರ ಬಳಗವಿದೆ ಎಂದು ಮನವರಿಕೆಯಾಯಿತು.

ಆ ಸಮಯದಲ್ಲಿ ನಮ್ಮ ಗ್ರಾಹಕರು ಕೊಟ್ಟ ಅಭಿಪ್ರಾಯದಲ್ಲಿ ಕನ್ನಡ ಪುಸ್ತಕ ದೂರದ ಊರುಗಳಿಗೆ ಕೊಡುವ ಸೇವೆ ಇಲ್ಲ ಇದ್ದರು ಅಂಚೆ ವೆಚ್ಚವೇ ಹೆಚ್ಚು, ಕನ್ನಡ ಪುಸ್ತಕ ನಮ್ಮ ಮನೆಯ ಬಾಗಿಲಿಗೆ ಬರುವ ವ್ಯವಸ್ಥೆಯಾದರೆ ಇನ್ನ ಹಲವಾರು ಪುಸ್ತಕ ಕೊಂಡು ಓದಬಹುದು. ಈ ರೀತಿ ಹಲವಾರು ಅಭಿಪ್ರಾಯಗಳು ಬಂದವು. ಕನ್ನಡಿಗರಾದ ನಾವು ಈ ಒಂದು ವ್ಯವಸ್ಥೆ ನಮ್ಮಿಂದಲೇ ಶುರುವಾಗಲಿ ಎಂದು ಕನ್ನಡಲೋಕ ಪ್ರಾರಂಭಿಸಿದ್ದೇವೆ ಎಂದು ಕನ್ನಡಲೋಕ ವೆಬ್ ರೂವಾರಿಗಳು ಹೇಳಿದ್ದಾರೆ.
ಕಿಂಗ್ಸ್ ಮಾರ್ಟ್ ವೆಬ್ ಸೈಟ್ ಗೆ ಕನ್ನಡತನವಿಲ್ಲ. ಎಷ್ಟು ಸಾಧ್ಯವೊ ಅಷ್ಟು ಕನ್ನಡವನ್ನು ಉಣಬಡಿಸೋಣವೆಂದು ಹೊಸ ವೆಬ್ ಸೈಟ್ ಗೆ ಕನ್ನಡಲೋಕ ಎಂದು ನಾಮಕರಣ ಮಾಡಿದೆವು. ಈ ವೆಬ್ ಸೈಟ್ ಮೂಲಕ ಕನ್ನಡ ಪುಸ್ತಕವನ್ನು ಕನ್ನಡಿಗರ ಮನೆ ಬಾಗಿಲಿಗೆ ಆದಷ್ಟು ಕಡಿಮೆ ಬೆಲೆಗೆ ತಲುಪಿಸುವುದು ಯೋಚನೆ. ಮುಂದೆ ಕನ್ನಡ ಬಾವುಟ, ಕನ್ನಡ ಟಿ ಶರ್ಟ್, ಕನ್ನಡ ಪೋಸ್ಟರ್, ಕನ್ನಡ ಸಿನಿಮಾ ಡಿವಿಡಿ ಇನ್ನು ಹಲವಾರು ವಸ್ತುಗಳನ್ನು ಸೇರಿಸುತ್ತೇವೆ.
ಈ ನಮ್ಮ ಪಯಣಕ್ಕೆ ಸಾದಾ ಸ್ಪೂರ್ತಿಯಾಗಿರುವುದು ಸಾಹಿತ್ಯ ಭಂಡಾರದ ರಾಜು ಸಹೋದರರು. concave ಮೀಡಿಯಾದ ನಂದೀಶ್, ಎಸ್ ಎಲ್ ಬೈರಪ್ಪ ಫೇಸ್ಬುಕ್ ಪುಟದ ಅಡ್ಮಿನ್ ಶಶಾಂಕ್, ತಂತ್ರಾಂಶದ ಚಂದನ್ ವೀರಭದ್ರ, ಸಾಮಾನ್ಯ ಕನ್ನಡಗ ಫೇಸ್ಬುಕ್ ಅಡ್ಮಿನ್ ಆಗಿರುವ ಶರತ್.
-
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications