ಆನ್ಲೈನ್ ಪುಸ್ತಕ ಮಳಿಗೆ ಕನ್ನಡಲೋಕ ವೆಬ್ ತಾಣ ಲೋಕಾರ್ಪಣೆ
ಬಸವ ಜಯಂತಿಯ ಪ್ರಯುಕ್ತ ಆನ್ ಲೈನ್ ಪುಸ್ತಕ ಮಳಿಗೆ ಕನ್ನಡಲೋಕ.ಇನ್ ಎಂಬ ಹೊಸ ವೆಬ್ ತಾಣವನ್ನು ಲೋಕಾರ್ಪಣೆ ಮಾಡಲಾಗಿದೆ.
ಬೆಂಗಳೂರು, ಏಪ್ರಿಲ್ 29: ಅಣ್ಣ ಬಸವಣ್ಣನವರು ಹುಟ್ಟಿದ ಈ ಶುಭ ದಿನ ಹೊಸ ವೆಬ್ ಸೈಟ್ 'ಕನ್ನಡಲೋಕ'ವನ್ನು (www.kannadaloka.in) ಲೋಕಾರ್ಪಣೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ನಮ್ಮ ಎಲ್ಲಾ ವಸ್ತುಗಳ ಮೇಲೆ ಶೇಕಡಾ 10% ರಿಯಾಯಿತಿ ಮತ್ತು ಬಸವಣ್ಣನವರ ವಚನಗಳ ಪುಸ್ತಕವನ್ನು ಉಚಿತವಾಗಿ ನೀಡಲಾಗಿದ್ದು,. ಕೂಪನ್ ಕೋಡ್ 'KANNADA' ಬಳಸಿ 10% ರಿಯಾಯಿತಿ ಪಡೆಯಬಹುದು.
ಏನಿದು ವೆಬ್ ಸೈಟ್?: ಕಿಂಗ್ಸ್ ಮಾರ್ಟ್ ಎಂಬ ವೆಬ್ ಸೈಟ್ ಪ್ರಾರಂಭಿಸಿದ ನಾವು ಮೊದಲಿಗೆ ಮೊಬೈಲ್ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳನ್ನು ಮಾರಾಟ ಮಾಡುತ್ತಿದ್ದೆವು. ಸ್ವಲ್ಪ ತಿಂಗಳುಗಳ ನಂತರ ಕನ್ನಡ ಪುಸ್ತಕಗಳನ್ನು ಮಾರಲು ಶುರು ಮಾಡಿದೆವು.
ಎಸ್ ಎಲ್ ಬೈರಪ್ಪನವರ 'ಉತ್ತರಕಾಂಡ' ಕಾದಂಬರಿ ಬಿಡುಗಡೆಯಾದಾಗ ಅದನ್ನು ನಮ್ಮ ವೆಬ್ ಸೈಟ್ ನಲ್ಲಿ ಪೂರೈಸುವ ಕೆಲಸ ಶುರು ಮಾಡಿದಾಗ ಕನ್ನಡ ಸಾಹಿತ್ಯಕ್ಕೆ ದೊಡ್ಡ ಓದುಗರ ಬಳಗವಿದೆ ಎಂದು ಮನವರಿಕೆಯಾಯಿತು.

ಆ ಸಮಯದಲ್ಲಿ ನಮ್ಮ ಗ್ರಾಹಕರು ಕೊಟ್ಟ ಅಭಿಪ್ರಾಯದಲ್ಲಿ ಕನ್ನಡ ಪುಸ್ತಕ ದೂರದ ಊರುಗಳಿಗೆ ಕೊಡುವ ಸೇವೆ ಇಲ್ಲ ಇದ್ದರು ಅಂಚೆ ವೆಚ್ಚವೇ ಹೆಚ್ಚು, ಕನ್ನಡ ಪುಸ್ತಕ ನಮ್ಮ ಮನೆಯ ಬಾಗಿಲಿಗೆ ಬರುವ ವ್ಯವಸ್ಥೆಯಾದರೆ ಇನ್ನ ಹಲವಾರು ಪುಸ್ತಕ ಕೊಂಡು ಓದಬಹುದು. ಈ ರೀತಿ ಹಲವಾರು ಅಭಿಪ್ರಾಯಗಳು ಬಂದವು. ಕನ್ನಡಿಗರಾದ ನಾವು ಈ ಒಂದು ವ್ಯವಸ್ಥೆ ನಮ್ಮಿಂದಲೇ ಶುರುವಾಗಲಿ ಎಂದು ಕನ್ನಡಲೋಕ ಪ್ರಾರಂಭಿಸಿದ್ದೇವೆ ಎಂದು ಕನ್ನಡಲೋಕ ವೆಬ್ ರೂವಾರಿಗಳು ಹೇಳಿದ್ದಾರೆ.
ಕಿಂಗ್ಸ್ ಮಾರ್ಟ್ ವೆಬ್ ಸೈಟ್ ಗೆ ಕನ್ನಡತನವಿಲ್ಲ. ಎಷ್ಟು ಸಾಧ್ಯವೊ ಅಷ್ಟು ಕನ್ನಡವನ್ನು ಉಣಬಡಿಸೋಣವೆಂದು ಹೊಸ ವೆಬ್ ಸೈಟ್ ಗೆ ಕನ್ನಡಲೋಕ ಎಂದು ನಾಮಕರಣ ಮಾಡಿದೆವು. ಈ ವೆಬ್ ಸೈಟ್ ಮೂಲಕ ಕನ್ನಡ ಪುಸ್ತಕವನ್ನು ಕನ್ನಡಿಗರ ಮನೆ ಬಾಗಿಲಿಗೆ ಆದಷ್ಟು ಕಡಿಮೆ ಬೆಲೆಗೆ ತಲುಪಿಸುವುದು ಯೋಚನೆ. ಮುಂದೆ ಕನ್ನಡ ಬಾವುಟ, ಕನ್ನಡ ಟಿ ಶರ್ಟ್, ಕನ್ನಡ ಪೋಸ್ಟರ್, ಕನ್ನಡ ಸಿನಿಮಾ ಡಿವಿಡಿ ಇನ್ನು ಹಲವಾರು ವಸ್ತುಗಳನ್ನು ಸೇರಿಸುತ್ತೇವೆ.
ಈ ನಮ್ಮ ಪಯಣಕ್ಕೆ ಸಾದಾ ಸ್ಪೂರ್ತಿಯಾಗಿರುವುದು ಸಾಹಿತ್ಯ ಭಂಡಾರದ ರಾಜು ಸಹೋದರರು. concave ಮೀಡಿಯಾದ ನಂದೀಶ್, ಎಸ್ ಎಲ್ ಬೈರಪ್ಪ ಫೇಸ್ಬುಕ್ ಪುಟದ ಅಡ್ಮಿನ್ ಶಶಾಂಕ್, ತಂತ್ರಾಂಶದ ಚಂದನ್ ವೀರಭದ್ರ, ಸಾಮಾನ್ಯ ಕನ್ನಡಗ ಫೇಸ್ಬುಕ್ ಅಡ್ಮಿನ್ ಆಗಿರುವ ಶರತ್.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications