ವಸಂತ್ ಶೆಟ್ಟಿ ಅವರ 'ಕನ್ನಡ ಜಗತ್ತು' ಕೃತಿ ಬಿಡುಗಡೆಗೆ ಆಹ್ವಾನ
ಬೆಂಗಳೂರು, ಡಿ.11: ಜಾಗತೀಕರಣ ಕನ್ನಡದ ಶತ್ರುವೇ? ಕನ್ನಡಿಗರ ಏಳಿಗೆಯಲ್ಲಿ ಕನ್ನಡದ ಪಾತ್ರವೇನು? ಕನ್ನಡಿಗರು ಪ್ರಪಂಚದ ಇತರೆ ನುಡಿ ಜನಾಂಗಗಳಿಂದ ಕಲಿಯಬಹುದಾದದ್ದೇನು? ಈ ರೀತಿಯ ಹಲವು ಪ್ರಶ್ನೆಗಳಿಗೆ ಉತ್ತರ ನೀಡಬಲ್ಲ ಕೃತಿಯನ್ನು ಅಂಕಣಕಾರ ವಸಂತ್ ಶೆಟ್ಟಿ ಅವರು ಹೊರ ತಂದಿದ್ದಾರೆ.
ಜಾಗತೀಕರಣ, ತಂತ್ರಜ್ಞಾನದ ಬದಲಾವಣೆ, ಕಳೆದ ನೂರು ವರ್ಷಗಳ ಜಿಯೋ ಪಾಲಿಟಿಕಲ್ ಪಲ್ಲಟಗಳ ನಡುವೆ ಕನ್ನಡ ತನ್ನ ಇರುವಿಕೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ಬಗ್ಗೆ ಪ್ರಪಂಚದ ಇತರೆ ನುಡಿಸಮುದಾಯಗಳಿಂದ ಕಲಿಯುವುದು ಸಾಕಷ್ಟಿದೆ.

ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಕನ್ನಡದ ಮುಂದೆ ಎದುರಾಗಿರುವ ಸವಾಲುಗಳ ಸ್ವರೂಪ ಕಳೆದ ಎರಡು ಸಾವಿರ ವರ್ಷದಲ್ಲಿ ಕಂಡ ಸವಾಲುಗಳಿಗಿಂತ ಬಹಳ ಬೇರೆಯೇ ಸ್ವರೂಪದ್ದಾಗಿರುವುದರಿಂದ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ನಾವು ಯೋಚನೆ ಮಾಡುತ್ತಿರುವ ರೀತಿಯೂ ಬದಲಾಗಬೇಕಿದೆ.
ಕನ್ನಡ ಜಾಗತೀಕರಣವನ್ನು ಎದುರಿಸುವುದು ಹೇಗೆ? ಪ್ರಪಂಚದ ಇತರೆ ಯಶಸ್ವಿ ಭಾಷಾ ಸಮುದಾಯಗಳಿಂದ ಕನ್ನಡಿಗರು ಕಲಿಯಬೇಕಾದದ್ದು ಏನು? ಕನ್ನಡಿಗರ ಏಳಿಗೆಯಲ್ಲಿ ಕನ್ನಡದ ಮಹತ್ವವೇನು ಅನ್ನುವ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಉದಯವಾಣಿ ಪತ್ರಿಕೆಯಲ್ಲಿ ಒಂದೂವರೆ ವರ್ಷಗಳ ಕಾಲ ಪ್ರಕಟವಾಗುತ್ತಿದ್ದ 'ಕನ್ನಡ ಜಗತ್ತು" ಅಂಕಣ ಮಾಡಿತ್ತು. ಈ ಅಂಕಣ ಬರಹಗಳ ಸಂಕಲನವನ್ನು ಪುಸ್ತಕದ ರೂಪದಲ್ಲಿ ಬನವಾಸಿ ಬಳಗ ಪ್ರಕಾಶನ ಹೊರ ತರುತ್ತಿದೆ.
ಶನಿವಾರ ಡಿಸೆಂಬರ್ 12, ಬೆಳಿಗ್ಗೆ 10.30ಕ್ಕೆ ಬಸವನಗುಡಿಯ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ನಡೆಯಲಿದೆ. ಉದಯವಾಣಿ ಪತ್ರಿಕೆಯ ಸಮೂಹ ಸಂಪಾದಕರಾದ ರವಿ ಹೆಗಡೆ, ಹಿರಿಯ ಪತ್ರಕರ್ತರು ಹಾಗೂ ಮಾಧ್ಯಮ ಸಲಹೆಗಾರರಾದ ರಾಮಕೃಷ್ಣ ಉಪಾಧ್ಯ ಹಾಗೂ ಶಾಸಕರು ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ವೈ.ಎಸ್.ವಿ ದತ್ತಾ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ತಪ್ಪದೇ ಪಾಲ್ಗೊಳ್ಳಿ ಎಂದು ವಸಂತ್ ಶೆಟ್ಟಿ ಅವರು ಎಲ್ಲರನ್ನು ಆಹ್ವಾನಿಸಿದ್ದಾರೆ.ಹೆಚ್ಚಿನ ವಿವರಗಳಿಗೆ ಫೇಸ್ ಬುಕ್ ಇವೆಂಟ್ ಪುಟವನ್ನು ನೋಡಿ. (ಒನ್ ಇಂಡಿಯಾ ಸುದ್ದಿ)
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications