ಕನ್ನಡ ಅಂಕಣಕಾರ ಕೆ ಸತ್ಯನಾರಾಯಣ ನಿಧನ

ಬೆಂಗಳೂರು ಜನವರಿ 9: ಕನ್ನಡದ ಖ್ಯಾತ ಅಂಕಣಕಾರ ಕೆ ಸತ್ಯನಾರಾಯಣ ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ಜಯನಗರದ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 87 ವರ್ಷ. ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಪೊಲೀಸ್ ಗೌರವದೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಪ್ರೀತಿಯಿಂದ ಕರೆಯಲ್ಪಟ್ಟಂತೆ ಸತ್ಯ ಅವರು 50 ವರ್ಷಗಳ ವೃತ್ತಿಜೀವನವನ್ನು ಹೊಂದಿದ್ದರು. ಅದರಲ್ಲಿ 30 ಪ್ರಮುಖ ಕನ್ನಡ ಪ್ರಕಟಣೆಯೊಂದಿಗೆ ಕಳೆದರು. ಕರ್ನಾಟಕ ಪತ್ರಕರ್ತರ ಶ್ರೇಷ್ಠತೆಯನ್ನು ಗುರುತಿಸಿ ಸರ್ಕಾರವು ಅವರಿಗೆ ಟಿ.ಎಸ್.ರಾಮಚಂದ್ರರಾವ್ ಪ್ರಶಸ್ತಿ ನೀಡಿದೆ.

ಮಾಹಿತಿ ಪೂರ್ಣ ಬರಹ, ಸತ್ವಪೂರ್ಣ ವಿಚಾರಗಳ ಮೂಲಕ ಗುರುತಿಸಿಕೊಂಡಿದ್ದ ಅವರು ತಮ್ಮ ಬಹುಪಾಲು ಜೀವನವನ್ನು ಸುದ್ದಿಮನೆಯ ನಂಟಿನೊಂದಿಗೆ ಕಳೆದವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ನಾಡಿನ ಅನೇಕ ಗಣ್ಯರು ಹಿರಿಯರಾದ ಕೆ. ಸತ್ಯನಾರಾಯಣ ಅವರ ಅಗಲುವಿಕೆಗೆ ಸಂತಾಪ ಸೂಚಿಸಿದ್ದಾರೆ.

Kannada columnist K Satyanarayan passes away

ವ್ಯಕ್ತಿ ವಿಶೇಷ, ಪೇಟೆ ಮಾತು, ಸಮಕಾಲೀನ, ಪೇಟೆ ಮಾತು, ನಗರ ಪ್ರದಕ್ಷಿಣೆ ಅವರ ಜನಪ್ರಿಯ ಅಂಕಣಗಳಾಗಿದ್ದವು. ತನ್ನ ಪ್ರಖರ ಬರಹ, ನಿಖರ ಅಂಕಿಅಂಶ, ಎಂತಹ ಸಮಸ್ಯೆಗೂ ಛೂಪುಬಾಣದಂತೆ ತಾಕಬಲ್ಲ ಹದವಾದ ವ್ಯಂಗ್ಯ ಅವರ ಬರಹಗಳ ವಿಶೇಷತೆಯಾಗಿತ್ತು. ರಾಜಕೀಯ, ಹಣಕಾಸು ವಿಚಾರಗಳನ್ನು ಬರೆಯುವುದರಲ್ಲಿ ಅವರು ಸಿದ್ಧಹಸ್ತರಾಗಿದ್ದರು. ರಾಜ್ಯ, ರಾಷ್ಟ್ರ ಬಜೆಟ್ ವಿಚಾರ ಗಳ ವಿಶ್ಲೇಷಣೆಯಲ್ಲೂ ಅವರದ್ದು ಎತ್ತಿದ ಕೈ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+