ಹಂಸಲೇಖ ಮುನ್ನುಡಿ ಪಡೆದ ಲಕ್ಷ್ಮಿಕಾಂತರ 'C++ ಗೌರಮ್ಮ'
ಬೆಂಗಳೂರು, ನ.13: ಟೋಟಲ್ ಕನ್ನಡ.ಕಾಂ ಪುಸ್ತಕ ಮಳಿಗೆ ಸ್ಥಾಪಿಸುವ ಮೂಲಕ ಸಾಫ್ಟ್ ವೇರ್ ವೃತ್ತಿ ತೊರೆದು ಕನ್ನಡ ಪುಸ್ತಕ ಪ್ರಕಾಶಕರ ಸಾಲಿಗೆ ಸೇರಿದ ಲಕ್ಷ್ಮಿಕಾಂತ್ ಅವರು ಈಗ ಸಾಹಿತಿಯಾಗಿ ಹೊರ ಹೊಮ್ಮಿದ್ದಾರೆ.
ಟೋಟಲ್ ಕನ್ನಡ.ಕಾಂ ಮೂಲಕ ಕನ್ನಡ ಪುಸ್ತಕ ಮಾರಾಟ, ಪ್ರಕಟಣೆ, ಕನ್ನಡ ಅಪರೂಪದ ಚಿತ್ರಗಳ ಡಿವಿಡಿ ಹೊರತರುವ ಕಾರ್ಯಗಳ ನಡುವೆ ಹನಿಗವನಗಳು ಹಾಗೂ ದೊಡ್ಡ ಕವನಗಳನ್ನೊಳಗೊಂಡ ಪುಸ್ತಕವನ್ನು ಇತ್ತೀಚೆಗೆ ಲೋಕಾರ್ಪಣೆ ಮಾಡಿದ್ದಾರೆ. C++ ಗೌರಮ್ಮ ಹೆಸರಿನ ಕೃತಿಗೆ ಸಂಗೀತ ಬ್ರಹ್ಮ ಹಂಸಲೇಖ ಬರೆದ ಮುನ್ನುಡಿ ಇಂತಿದೆ:
ಬೆಂಗಳೂರಿನಲ್ಲಿ ಒಂದು ಸೈಟು ಕೊಂಡು ಸ್ವಂತ ಮನೆ ಕಟ್ಟಿಕೊಳ್ಳಲು ಕನಿಷ್ಟ 30 ವರ್ಷ ದುಡಿಯಬೇಕು, ಉಳಿಯಬೇಕು, ಉಳಿಸಬೇಕು; ಅದರಲ್ಲೂ ಸನ್ಮಾರ್ಗದಲ್ಲಿ ಗಳಿಸಬೇಕೆಂದರೆ ಬಹಳ ಹೆಣಗಬೇಕು. 30-40 ಅಥವಾ 40-60 ರ ಒಂದು ಸ್ವಂತ ಸೈಟು ಮನೆ ನಮ್ಮದೂಂತ ಹೇಳ್ಕೊಳ್ಳೋದಕ್ಕೆ ಇಷ್ಟು ಶ್ರಮ ಇರೋವಾಗ.....
1,91,791 ಚದರ ಕಿ.ಮೀ ವಿಸ್ತೀರ್ಣದ ಕರ್ನಾಟಕವೆಂಬ ಸೈಟು, ಇಲ್ಲಿನ ಜಲ ಖನಿಜ ನಿಸರ್ಗ ಸಂಪತ್ತು, ಇತಿಹಾಸ ಪರಂಪರೆ ಸಂಸ್ಕೃತಿಯ ಹಿರಿಮೆ ಗರಿಮೆಗಳೆಲ್ಲಾ ನಮ್ಮದೂ ಅಂತ ಹೇಳಿಕೊಳ್ಳುತ್ತೇವಲ್ಲ ನಾವು.....
ಈ ಸ್ವಂತಿಕೆಯ ಸಾಫಲ್ಯದ ಹಿಂದಿನ ಶ್ರಮ, ತಪಸ್ಸು, ಎಷ್ಟಿರಬಹುದು.....
ಕಂಪ್ಯೂಟರ್ ಇಂಜಿನಿಯರೊಬ್ಬ ಅಮೆರಿಕದಲ್ಲಿ 8 ವರ್ಷ ಇದ್ದು, ಎಲ್ಲಾ ಬಿಟ್ಟು ಬಂದು ‘ಟೋಟಲ್ ಕನ್ನಡ' ಅನ್ನೊ ಒಂದು ಮಳಿಗೆ ಮಾಡಿದ್ದಾನೇ ಅಂದ್ರೆ ‘ಕನ್ನಡದಲ್ಲಿ ಬದುಕಿದೆ' ಅಂತ ತಾನೇ ಅರ್ಥ !
ಕನ್ನಡದ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ಹಳ್ಳಿ ಹಳ್ಳಿ ಸುತ್ತಿ ಕನ್ನಡವನ್ನು ಓದುವ ಹುಚ್ಚನ್ನು ಹಬ್ಬಿಸಿದವರು ಹುಯಿಲಗೊಳ ನಾರಾಯಣರಾಯರು.
ಕನ್ನಡದ ಹುಚ್ಚನ್ನು ಹಬ್ಬಿಸಿದವರ ಪರಂಪರೆ ಕರ್ನಾಟಕವೆಂಬ ಏಕೀಕರಣದ ಚರಿತ್ರೆಯಲ್ಲಿ ಲಕ್ಷ ಹೆಸರುಗಳಿಗೂ ಹೆಚ್ಚಿದೆ.
‘ಟೋಟಲ್ ಕನ್ನಡ' ದ ಅಂಗಡಿ ಮಾಲಿಕನಿಗೂ ಈ ಪರಂಪರೆಯಲ್ಲಿ ಹೆಸರು ದಕ್ಕಿಸಿಕೊಳ್ಳುವ ಅದೃಷ್ಟವೊದಗಿದೆ ಎನ್ನುವುದೇ ಕನ್ನಡದ ಭಾಗ್ಯ, ಕವಿಯ ಪುಣ್ಯ.
‘ಕಾಲವಿ' ತನ್ನ ಬದುಕಿನ ಎಲ್ಲ ಘಳಿಗೆಗಳನ್ನು ಕನ್ನಡದ ಮೂಲಕವೇ ಸವಿಯಲು ಅಪೇಕ್ಷಿಸುತ್ತದೆ. ಮುಂದೆ ಓದಿ...

ಕನ್ನಡದ ಭಾಗ್ಯ, ಕವಿಯ ಪುಣ್ಯ
ತಾನು ಬರೆದ ಕವನಗಳನ್ನು ಪತ್ರಿಕೆಗಳು ಪ್ರಕಟಿಸದೇ ಹೋದಾಗ, ಚಿಂತೆ ಮಾಡದೆ, ದಿನಕ್ಕೊಂದು ಕವನದಂತೆ, ತನ್ನ ಅಂಗಡಿಯ ಮುಂದೆ ಫಲಕದಲ್ಲಿ ಬರೆದು ಬಿತ್ತರಿಸಿದ ಪುಣ್ಯಾತ್ಮ ಈ‘ಕಾಲವಿ'. ಕನ್ನಡ ಈತನನ್ನು ಕಾಪಾಡದೇ ಬಿಟ್ಟೀತೇ ! ಪ್ರಾಸಗಳ ಮೇಲೆ ವಿಪರೀತ ಏಕಾಗ್ರತೆ ಈತನ ಕವನಗಳಲ್ಲಿನ ದೋಷ. ವಸ್ತುವಲಯ ವಿಸ್ತಾರವಾಗಿದೆ. ಅದು ಈತನ ವಿಶಾಲ ಗುಣ.
ಪ್ರೀತಿಸುವಾಗ ನವ್ಯ; ಮದುವೆಯಾದರೆ ಬಂಡಾಯ; ಇದೇ ಬಾಳ ಸಾಹಿತ್ಯದ ಮಜಾ ಮಜಲು. ಇದು ‘ಕಾಲವಿ' ಬರೆದ ‘ಕವನದ' ಸಂಕ್ಷಿಪ್ತ ರೂಪ.

ಹೃದಯ ನಿರಾಳ
‘ಕಾಲವಿ' ಯ ಎಲ್ಲಾ ಕವನಗಳನ್ನು ನಮ್ಮ ದೇಸಿ ಕಾಲೇಜಿನ ವಿದ್ಯಾರ್ಥಿಗಳು ವಾಚಿಸಿ, ಚರ್ಚಿಸಿ, ಹೊಗಳಿ, ವಿಮರ್ಶಿಸಿ, ಕೆಲವನ್ನು ಅವರುಗಳೇ ಪರಿಷ್ಕರಿಸಿ, ನನ್ನೆದುರು ಓದಿದಾಗ, ‘ಕಾಲವಿ' ಯ ವಿಸ್ತಾರ ವಸ್ತುವಲಯ, ಕನ್ನಡದ ನವೀಕರಣ, ಚಿಂತನೆ, ಪ್ರಾಸಾಂಬರ, ಕನ್ನಡಕ್ಕೆ ಭಯವಿಲ್ಲ ಎಂಬ ಭರವಸೆ ಇತ್ಯಾದಿಗಳು ಹುಟ್ಟಿ ಹೃದಯ ನಿರಾಳವಾಯಿತು.

‘ಕಾಲವಿ’ ಯ ಒಂದು ಕವನ ನೋಡಿ
ಹರಿದ ಅರಿವೆಯಾ ತೊಟ್ಟವನನ್ನು
ನೋಡಿ ಬೀದಿ ನಾಯಿಯೂ ಸಹ
ಬೊಗಳುವುದು;
ಬಡವ-ಬಲ್ಲಿದ ಎಂಬುದು
ನಾಯಿಗು ಸಹ ಹೇಗೆ
ತಿಳಿಯುವುದು !
ಕರ್ನಾಟಕವೆಲ್ಲಾ ಟೋಟಲ್ ಕನ್ನಡವಾಗಲಿ
ಒ ಐove - ಇ ನಿಂದ - ಹಂಸಲೇಖ.

ಕಾಲವಿ ಲಾಸ್ಟ್ ಪಂಚ್
ಹಿರಿ ಮಗ Hardware
ಕಿರಿ ಮಗ Software
ಅಪ್ಪ ಅಮ್ಮ No Where
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications