ಹಿಂದೂ ಧರ್ಮ, ಲಿಂಗಾಯತಕ್ಕೆ ವ್ಯಾಖ್ಯಾನವೇ ಇಲ್ಲ: ಕಾಗೋಡು
ಬೆಂಗಳೂರು, ಸೆಪ್ಟೆಂಬರ್ 16: ಹಿಂದೂ ಧರ್ಮಕ್ಕೇ ಸರಿಯಾದ ವ್ಯಾಖ್ಯಾಸವಿಲ್ಲ. ಹೀಗಿರುವಾಗ, ಲಿಂಗಾಯತರ ಪ್ರತ್ಯೇಕ ಧರ್ಮದ ಕೂಗು ಸರಿಯಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಈಗಾಗಲೇ ಲಿಂಗಾಯದ ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇದೊಂದು ನಿರರ್ಥಕ ಪ್ರಯತ್ನ ಎಂದು ಬಣ್ಣಿಸಿದರು.

ತಮ್ಮ ಮಾತಿಗೆ ಸಮರ್ಥನೆಯನ್ನೂ ನೀಡಿದ ಅವರು, ''ಹಿಂದೂ ಧರ್ಮಕ್ಕೆ ಒಂದು ನಿರ್ದಿಷ್ಟ ವ್ಯಾಖ್ಯಾನವಿಲ್ಲ. ಪ್ರತಿಯೊಬ್ಬ ಜಾತಿಯವನೂ ತನ್ನ ನಂಬಿಕೆಗೆ ತಕ್ಕಂತೆ ಆಚಾರ-ವಿಚಾರ, ಪೂಜೆ, ಪುನಸ್ಕಾರ ಮಾಡುತ್ತಾನೆ. ಅದನ್ನು ಗೌರವಿಸಬೇಕೇ ಹೊರತು ಎಲ್ಲದಕ್ಕೂ ಪ್ರತ್ಯೇಕ ಧರ್ಮದ ಸ್ಥಾನ ಮಾನ ಕೇಳುವುದು ಅರ್ಥವಿಲ್ಲದ ವಿಚಾರ'' ಎಂದಿದ್ದಾರೆ.
ಬಸವಣ್ಣ ಬಹುದೊಡ್ಡ ಸಮಾಜ ಸುಧಾರಕರೇನೋ ಸರಿ. ಆದರೆ, ಅವರ ದೇವರ ಪರಿಕಲ್ಪನೆ, ಅನುಭವ ಮಂಟಪ ಇತ್ಯಾದಿ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.












Click it and Unblock the Notifications