ಬೆಂಗಳೂರಿಗೆ ಕಾದಿದೆ ನೀರಿನ ಬರ: ಬಿಬಿಸಿ ವರದಿಯಲ್ಲಿ ಎಚ್ಚರಿಕೆ
ಬೆಂಗಳೂರು, ಫೆಬ್ರವರಿ 12 : ಕುಡಿಯುವ ನೀರಿನ ಅಭಾವ ಹೊಂದಿರುವ ಜಗತ್ತಿನ 11 ಮಹಾನಗರಗಳ ಸಮಸ್ಯೆಯನ್ನು ಬಿಬಿಸಿ ನ್ಯೂಸ್ ವಾಹಿನಿ ತೆರೆದಿಟ್ಟಿದ್ದು, ಅಂತಹ ಬಾಯಾರಿದ ನಗರಗಳ ಸಾಲಿನಲ್ಲಿ ಬೆಂಗಳೂರು ಕೂಡ ಒಂದಾಗಿದೆ.
ಇನ್ನೂ ಗಂಭೀರ ವಿಷಯವೆಂದರೆ ಹೀಗೆ ವಿಶ್ವದಲ್ಲಿ ನೀರಿನ ಗಂಭೀರ ಕೊರತೆ ಎದುರಿಸುತ್ತಿರ ಬಹುದಾದ 11 ನಗರಗಳ ಪೈಕಿ ಬೆಂಗಳೂರು ವಿಶ್ವದಲ್ಲೇ 2 ನೇ ಸ್ಥಾನದಲ್ಲಿದೆ. ಅಭಿವೃದ್ಧಿ ನಗರೀಕರಣದ ನೆಪದಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಕಳೆದುಕೊಂಡಿರುವ ನಗರಗಳು ಮತ್ತು ಅಲ್ಲಿನ ದುಸ್ಥಿತಿ ಕುರಿತು ವಾಹಿನಿ ವರದಿ ಮಾಡಿದೆ. ಬಿಬಿಸಿಯ ವೆಬ್ ಸೈಟ್ ನಲ್ಲಿ11 ನಗರಗಳ ಕಿರುಚಿತ್ರಣ ನೀಡಲಾಗಿದೆ.
ವರದಿ ಪ್ರಕಾರ 2030 ರ ವೇಳೆಗೆ ಜಗತ್ತಿನಾದ್ಯಂತ, ಶೇ.40 ರಷ್ಟು ಶುದ್ಧ ನೀರಿನ ಕೊರತೆ ಎದುರಾಗಲಿದೆ. ನಗರಗಳಿಗೆ ಹರಿದು ಬರುತ್ತಿರುವ ಭಾರಿ ಜನಸಂಖ್ಯೆ, ನೀರಿನ ಸೂಕ್ತನಿರ್ವಹಣೆ ಕೊರತೆ, ನೀರಿನ ಮರುಬಳಕೆ ತಂತ್ರಜ್ಞಾನ ಬಳಕೆ ಮಾಡದಿರುವುದು ಮತ್ತು ಭಾರೀ ಪ್ರಮಾಣದಲ್ಲಿ ನೀರಿನ ಬಳಕೆ ಮಾಡುತ್ತಿರುವ ಕಾರಣ, ಜಗತ್ತಿನ ಹಲವು ನಗರಗಳು ಮುಂದಿನ ದಿನಗಳಲ್ಲಿ ಗಂಭೀರವಾದ ನೀರಿನ ಸಮಸ್ಯೆ ಎದುರಿಸಲಿದೆ ಎಂದು ವರದಿ ಹೇಳಿದೆ.

ವರದಿ ಅನ್ವಯ ಮೊದಲ ಸ್ಥಾನದಲ್ಲಿ ಬ್ರೆಜಿಲ್ ಸಾವೋ ಪಾಲೋ ಇದ್ದರೆ, 2 ನೇ ಸ್ಥಾನದಲ್ಲಿ ಬೆಂಗಳೂರು ಮತ್ತು 3 ನೇ ಸ್ಥಾನದಲ್ಲಿ ಚೀನಾ ರಾಜಧಾನಿ ಬೀಜಿಂಗ್ ಇದೆ. ಉಳಿದಂತೆ ಕೈರೋ, ಜಕಾರ್ತಾ, ಮಾಸ್ಕೋ, ಇಸ್ತಾಂಬೂಲ್, ಮೆಕ್ಸಿಕೋ,, ಲಂಡನ್, ಟೋಕಿಯೋ, ಮಿಯಾಮಿ ನಗರಗಳಿವೆ.
ಬೆಂಗಳೂರಿನ ಸಮಸ್ಯೆ: ಬೆಂಗಳೂರು ತಂತ್ರಜ್ಞಾನ ಹಬ್ ಆಗಿ ಬೆಳೆಯುತ್ತಿರುವ ಬೆನ್ನಲ್ಲೇ, ನಗರ ಅಭಿವೃದ್ಧಿ ತ್ವರಿತವಾಗುತ್ತಿದೆ. ಇದು ಸ್ಥಳೀಯ ಆಡಳಿತವನ್ನು ಕಂಗಾಲಾಗಿಸಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಆಡಳಿತವು ನಗರದ ನೀರು ಮತ್ತು ಚರಂಡಿ ವ್ಯವಸ್ಥೆ ಸುಧಾರಣೆಗೆ ಪರದಾಡುವಂತೆ ಆಗಿದೆ.
ಪರಿಸ್ಥಿತಿಯನ್ನು ಅತ್ಯಂತ ಕೆಟ್ಟದಾಗಿಸಿರುವ ನಗರದ ಪ್ಲಂಬಿಂಗ್ ವ್ಯವಸ್ಥೆ ತುರ್ತಾಗಿ ಉತ್ತಮ ದರ್ಜೆಗೇರಿಸುವ ಅಗತ್ಯವಿದೆ. ನಗರದ ಅರ್ಧದಷ್ಟು ನೀರು ಕೊಳಚೆ ಸೇರುತ್ತದೆ ಎಂದು ವರದಿ ತಿಳಿಸಿದೆ. ಇನ್ನೊಂದೆಡೆ, ಬೆಂಗಳೂರಿನಲ್ಲಿ ಜಲ ಮಾಲಿನ್ಯವೂ ತೀವ್ರವಾಗಿದೆ. ನಗರದ ಕೆರೆಗಳಲ್ಲಿರುವ ಶೇ.೮೫ರಷ್ಟು ನೀರು ಕೇವಲ ನೀರಾವರಿ ಮತ್ತು ಕೈಗಾರಿಕಾ ಉಪಯೋಗಕ್ಕಷ್ಟೇ ಬಳಸಬಹುದು. ಒಂದೇ ಒಂದು ಕೆರೆಯ ನೀರನ್ನು ಕುಡುಯುವುದಕ್ಕೆ ಅಥವಾ ಸ್ನಾನಕ್ಕೆ ಯೋಗ್ಯವಿಲ್ಲ ಎನ್ನಲಾಗಿದೆ. ಹೀಗೆ ವರದಿಯಲ್ಲಿ ಹಲವು ಆತಂಕಕಾರಿ ಅಂಶಗಳು ಒಳಗೊಂಡಿದೆ.
ಭೂಮಿಯ ಮೇಲ್ಮೈ ಮೇಲೆ ಶೇ.70 ರಷ್ಟು ಭಾಗ ನೀರಿನಿಂದ ತುಂಬಿದ್ದರೂ, ಕೇವಲ ಶೇ.3 ರಷ್ಟು ಭಾಗ ಮಾತ್ರ ಕುಡಿಯಬಹುದಾದ ಶುದ್ಧ ನೀರು. ಒಂದು ಶತಕೋಟಿಗೂ ಅಧಿಕ ಮಂದಿ ನೀರಿನ ಕೊರತೆ ಹೊಂದಿದ್ದಾರೆ. ಅಲ್ಲದೆ, ಸುಮಾರು 2.7 ಶತಕೋಟಿ ಜನರು ವರ್ಷದಲ್ಲಿ ಕನಿಷ್ಠ 1 ತಿಂಗಳಾದರೂ ನೀರಿನ ಸಮಸ್ಯಯೆಯಿಂದ ಬಳಲುತ್ತಾರೆ. ಜಗತ್ತಿನ ಪ್ರಮುಖ 500 ನಗರಗಳಲ್ಲಿ ನಡೆದ ಸಮೀಕ್ಷೆಯ ಪ್ರಕಾರ ನಾಲಕ್ರಲ್ಲಿ ಒಂದು ನಗರದಲ್ಲಿ ನೀರಿನ ಅಭಾವ ತುಂಬಾ ಇದೆ ಎಂದು ವರದಿ ಹೇಳಿದೆ.
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್












Click it and Unblock the Notifications