ಜಯಾ ವಿಧಿವಶ: ಕರ್ನಾಟಕದ ನಾಯಕರು ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 6: ತಮಿಳುನಾಡು ಮುಖ್ಯಮಂತ್ರಿ ಜಯ ಲಲಿತಾ ಅವರು ಸೋಮವಾರ ರಾತ್ರಿ ವಿಧಿವಶವಾಗಿದ್ದು, ಕರ್ನಾಟಕದ ಮುಖ್ಯನಾಯಕರಾದ ಮುಖ್ಯಮಂತ್ರಿ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಬಿ. ಎಸ್ ಯಡಿಯೂರಪ್ಪ, ಶೋಭ ಕರಂದ್ಲಾಜೆ ಕಂಬನಿ ಮಿಡಿದಿದ್ದಾರೆ.
[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]

ಮಹಾನ್ ನಾಯಕಿ: ಖರ್ಗೆ
ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಜಯಲಲಿತಾ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ್ದು, ಅಕೆ ಒಬ್ಬ ಮಹಾನ್ ನಟಿ, ರಾಜಕೀಯ ಕಂಡ ಮಹಾನ್ ನಾಯಕಿ, ತಮಿಳುನಾಡಿನ ಬಡ ಜನರ ಮನಸ್ಸಿನಲ್ಲಿ ಮನೆ ಮಾಡಿದ ಅಮ್ಮಾಆಗಿದ್ದಾರೆ. ಎರಡನೇ ಹಂತದ ಮುಖಂಡತ್ವದಲ್ಲಿ ಯಾರನ್ನು ಅವರು ಬೆಳೆಸಲಿಲ್ಲ. ಅವರ ನಿರ್ಧಾರಗಳು ತಮಿಳುನಾಡನ್ನು ಭದ್ರವಾಗಿಸಿದ್ದವು, ಅನೇಕ ರಾಜಕೀಯ ಹೋರಾಟ, ಏರಿಳಿತವನ್ನು ಕಂಡು ಗಟ್ಟಿಗಿತ್ತಿ ಎಂದು ಅವರು ತಿಳಿಸಿದರು.

ಅಚ್ಚರಿ ಸೃಷ್ಟಸಿದ ಉಕ್ಕಿನ ಮಹಿಳೆ
ಬಿಜೆಪಿ ಮುಖಂಡ ಸುರೇಶ್ ಕುಮಾರ್ ಜಯಾ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿ, ಮೈಸೂರು ಕೋಮಲವಲ್ಲಿ ಆಗಿದ್ದು ತಮಿಳುನಾಡಿನ ಅಮ್ಮ, ಜಯಾ ಒಬ್ಬ ಉಕ್ಕಿನ ಮಹಿಳೆಯಾಗಿ ಕಡಿಮೆ ಅವಧಿಯಲ್ಲಿ ರಾಜಕೀಯ ಅಚ್ಚರಿಗಳನ್ನು ಸೃಷ್ಟಿಸಿದರು. ಆದರೆ ಅವರು ಇಂದು ಇತಿಹಾಸ ಎಂದು ಹೇಳಿದ್ದಾರೆ.[ಅಮ್ಮ 'ಜನ ಪ್ರೀತಿ' ಗಳಿಸಿದ ಕ್ಯಾಂಟೀನ್ ನಿಂದ ಲ್ಯಾಪ್ ಟಾಪ್ ವರೆಗೆ]

ಮುಂದಿನ ಮಹಿಳಾ ಪ್ರಧಾನಿಯಾಗುತ್ತಿದ್ದರು: ಕರಂದ್ಲಾಜೆ
ಕರ್ನಾಟಕದ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರು ಜಯಲಲಿತಾ ಸಾವಿನ ಬಗ್ಗೆ ಭಾವುಕರಾಗಿ ಮಾತನಾಡಿ, ಜಯಲಲಿತಾ ಅವರ ಸಾಧನೆ ಅಜರಾಮರ, ಅವರು ಇದ್ದಿದ್ದರೆ ಮುಂದೊಂದು ದಿನ ಪ್ರಧಾನಿಯಾಗುತ್ತಿದ್ದರು. ಅವರ ಕನ್ನಡದ ಮಗಳಾಗಿ ಹುಟ್ಟಿ ತಮಿಳುನಾಡನ್ನು ಆಳಿದ ಧೀರೆ, ರಾಜಕೀಯ, ಚಿತ್ರರಂಗ, ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಸಾಧನೆ ಅಪ್ರತಿಮವಾದದು ಎಂದು ನುಡಿದಿದ್ದಾರೆ. [ಜಯಾ ಸಾವು ಕನ್ನಡಿಗರಿಗೂ ದುಃಖ ತಂದಿದೆ : ಸಿದ್ದು]

ಜನ ಸಹನೆ ಕಳೆದುಕೊಳ್ಳದಿರಲಿ: ಬಿಎಸ್ ವೈ
ಬಿಜೆಪಿ ಮುಖಂಡ, ಮಾಜಿ ಮುಖ್ಯ ಮಂತ್ರಿ ಎಸ್ ಯಡಿಯೂರಪ್ಪ ಅವರು ಜಯಲಲಿತಾ ಅವರ ಬಗ್ಗೆ ಮಾತನಾಡುತ್ತಾ ಜಯಲಲಿತಾ ಅವರು ಧೀಮಂತ ಜೀವನವನ್ನು ನಡೆಸಿದವರು, ರಾಜಕೀಯವಾಗಿ ಮತ್ತು ಚಿತ್ರ ರಂಗದ ಹಾದಿಯಲ್ಲಿ ಅನೇಕ ಕಷ್ಟಗಳನ್ನು ಉಂಡವರು ಅವರ ನಾಯಕತ್ವದಲ್ಲಿ ತಮಿಳುನಾಡು ಅಭಿವೃದ್ಧಿಯನ್ನು ಪಡೆದಿದೆ. ಅವರ ಸಾವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ತಮಿಳುನಾಡಿನ ಜನತೆಗೆ ನೀಡಲಿ, ಜನರು ಯಾವುದೇ ಕಾರಣಕ್ಕೂ ಸಹನೆಯನ್ನು ಕಳೆದುಕೊಂಡು ಅನಾಹುತಗಳನ್ನು ಮಾಡದಿರಲಿ ಎಂದು ಹೇಳಿದರು.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications