ರಮ್ಯಾ ಅಭಿಮಾನಿಗಳಿಗೆ ಜಗ್ಗೇಶ್ ಟ್ವೀಟ್ ಏಟು
ನವರಸ ನಾಯಕ ಜಗ್ಗೇಶ್ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಸದ್ಬಳಕೆ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಪ್ರತಿನಿತ್ಯ ನೀತಿ ಬೋಧನೆ, ವಚನ, ಗೀತೆ, ರಾಯರ ಬಗ್ಗೆ ತಮ್ಮ ಅಭಿಮಾನಿಗಳಿಗೆ ಹೇಳುತ್ತಿದ್ದಾರೆ. ಆದರೆ, ಟ್ವಿಟ್ಟರ್ ನಲ್ಲೇ ನವರಸಗಳನ್ನು ಹರಿಸುತ್ತ್ತಿರುವ ನಟ ಕಮ್ ರಾಜಕಾರಣಿ ಜಗ್ಗೇಶ್ ಅವರು ಇತ್ತೀಚೆಗೆ ಸಕತ್ ಗರಂ ಆಗಿದ್ದರು. ನೀರ್ ದೋಸೆ ಬೇಯುವ ಹೆಂಚು ತಣ್ಣಗಾದರೂ ನಾಯಕ ಜಗ್ಗೇಶ್ ಅವರನ್ನು ಕೆಣಕಲು ಬಂದ ಮೂವರು ಅಭಿಮಾನಿಗಳನ್ನು ಬ್ಲಾಕ್ ಮಾಡಿಬಿಟ್ಟಿದ್ದಾರೆ.
ಯೋಗ ಒಂದು ಬಾರಿ ಬರುತ್ತದೆ ಯೋಗ್ಯತೆ ಕಡೆಯವರೆಗೂ ಇರುತ್ತದೆ ಎಂದು ಟ್ವೀಟ್ ಮಾಡಿದ್ದು ರಮ್ಯಾ ಅಭಿಮಾನಿಗಳನ್ನು ಕೆರಳಿಸಿ ಟ್ವೀಟ್ ಸಮರಕ್ಕೆ ನಾಂದಿ ಹಾಡಿತ್ತು. ರಮ್ಯಾ ಹೆಸರು ಹೇಳದೆ ಚುನಾವಣೆಯಲ್ಲಿ ಸೋತ ನಂತರ ಸಿನಿಮಾ ಕಡೆ ಮುಖ ಮಾಡುವ ಮೂಳಕ ಅವಕಾಶವಾದಿಯಾಗಿದ್ದೀರಿ ಎಂದು ಹೇಳಿದ್ದರು.
ನೀರ್ ದೋಸೆ ಚಿತ್ರ ಶೂಟಿಂಗ್ ಆಟಿಟ್ಯೂಡ್ ಜನರಿಲ್ಲದೆ ಸರಾಗವಾಗಿ ನಡೆಯಲಿದೆ. ರಾಯರ ಕೃಪೆ, ಪ್ರೀತಿಯ ಅಭಿಮಾನಿಗಳ ಬೆಂಬಲವಿದ್ದರೆ ಸಾಕು ಎಂದು ಮತ್ತೊಮ್ಮೆ ಜಗ್ಗೇಶ್ ಕುಟುಕಿದ್ದರು. ಜಗ್ಗೇಶ್ ಅವರ ಯಾವುದೇ ಟ್ವೀಟ್ ನಲ್ಲೂ ರಮ್ಯಾ ಅವರ ಹೆಸರು ಪ್ರಸ್ತಾಪಿಸಿಲ್ಲ, ರಮ್ಯಾ ಕೂಡಾ ಜಗ್ಗೇಶ್ ಅವರ ಟ್ವೀಟ್ ಗೆ ಉತ್ತರಿಸಿಲ್ಲ. ರಮ್ಯಾ ಅಭಿಮಾನಿಗಳು ಮಾತ್ರ ಜಗ್ಗೇಶ್ ಜತೆ ಸಾಮಾಜಿಕ ಜಾಲ ತಾಣದಲ್ಲಿ ವಾಕ್ಸಮರ ನಡೆಸಿದ್ದಾರೆ. ಸರಣಿ ಟ್ವೀಟ್ ಸಂಗ್ರಹ ಇಲ್ಲಿದೆ ಓದಿ...

ಅಭಿಮಾನಿಗಳನ್ನು ಬ್ಲಾಕ್ ಮಾಡಿಬಿಟ್ಟಿದ್ದಾರೆ
ನಟ ಕಮ್ ರಾಜಕಾರಣಿ ಜಗ್ಗೇಶ್ ಅವರು ಇತ್ತೀಚೆಗೆ ಸಕತ್ ಗರಂ ಆಗಿದ್ದರು. ನೀರ್ ದೋಸೆ ಬೇಯುವ ಹೆಂಚು ತಣ್ಣಗಾದರೂ ನಾಯಕ ಜಗ್ಗೇಶ್ ಅವರನ್ನು ಕೆಣಕಲು ಬಂದ ಮೂವರು ಅಭಿಮಾನಿಗಳನ್ನು ಬ್ಲಾಕ್(ಟ್ವೀಟ್ ಐಡಿ) ಮಾಡಿಬಿಟ್ಟಿದ್ದಾರೆ.
|
ರಾಧಿಕಾ, ಐಂದ್ರಿತಾ, ರಮ್ಯಾ ಹೆಸರೇ ಇಲ್ಲ
ರಾಧಿಕಾ ಪಂಡಿತ್, ಐಂದ್ರಿತಾ, ಹರ್ಷಿಕಾ ಒಳ್ಳೆ ನಡವಳೀಕೆ ಹೊಂದಿದ್ದಾರೆ ಅವರಿಗೆ ಒಳ್ಳೆ ಭವಿಷ್ಯವಿದೆ ಎಂದಿರುವ ಜಗ್ಗೇಶ್ ರಮ್ಯಾ ಹೆಸರು ಪ್ರಸ್ತಾಪಿಸೇ ಇಲ್ಲ.
|
ಅಭಿಮಾನಿಗಳ ಕಿರಿಕಿರಿಗೆ ಬೇಸತ್ತ ಜಗ್ಗೇಶ್
ರಮ್ಯಾ ಪರ ಟ್ವೀಟ್ ಮಾಡಿ ಕಿರಿಕಿರಿ ಉಂಟು ಮಾಡಿದ ಅಭಿಮಾನಿಗಳಿಂದ ಬೇಸತ್ತ ಜಗ್ಗೇಶ್
|
ಅಧಿಕ ಪ್ರಸಂಗಿಗಳನ್ನು ಬ್ಲಾಕ್ ಮಾಡಿದೆ
ನನ್ನ ಅಕೌಂಟ್ ನಲ್ಲಿ ಅಧಿಕಪ್ರಸಂಗಿಗಳಿಗೆ ಜಾಗವಿಲ್ಲ ಎಂದ ಜಗ್ಗೇಶ್
|
ರಮ್ಯಾ ಅಭಿಮಾನಿಯೊಬ್ಬರಿಂದ ಟ್ವೀಟ್
ರಮ್ಯಾ ಅಭಿಮಾನಿಯೊಬ್ಬರಿಂದ ಟ್ವೀಟ್, ಜಗ್ಗೇಶ್ ಅಭಿಮಾನಿಗೆ ಪ್ರತಿ ಸವಾಲು
|
ವಿಪರೀತ ಹೋದ ಟ್ವೀಟ್ ವಾಕ್ಸಮರ
ವಿಪರೀತ ಹೋದ ಟ್ವೀಟ್ ವಾಕ್ಸಮರ, ರಮ್ಯಾ ಅಭಿಮಾನಿಯಿಂದ ಆಕ್ರೋಶಿತ ಟ್ವೀಟ್
|
ಜಗ್ಗೇಶ್ ಅವರಿಗೆ ಹಿತ ವಚನ ನೀಡಿದ ಟ್ವೀಟ್
ಜಗ್ಗೇಶ್ ಅವರಿಗೆ ಅಭಿಮಾನಿಯೊಬ್ಬರು ಹಿತ ವಚನ ನೀಡಿದ ಟ್ವೀಟ್
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications