NISAR Satellite: ಅಮೆರಿಕಾದ NASAದಿಂದ ಬೆಂಗಳೂರಿಗೆ ಬಂದ 'ನಿಸಾರ್' ಉಪಗ್ರಹ, ಇದರ ವಿಶೇಷತೆ, ಉಪಯೋಗ ತಿಳಿಯಿರಿ
ಅಮೆರಿಕಾದ NASA ಮತ್ತು ಭಾರತದ ISRO ಅಭಿವೃದ್ಧಿ ಪಡಿಸಿದ 'ಉಪಗ್ರಹ' ಒಂದು ಅಮೆರಿಕಾದಿಂದ ಕರ್ನಾಟಕ ರಾಜ್ಯಧಾನಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದೆ.
ಬೆಂಗಳೂರು, ಮಾರ್ಚ್ 09: ಭಾರತ ಬಾಹ್ಯಾಕಾಶ ಸಂಶೋಧನೆಯಲ್ಲಿ ಒಂದಡಿ ಮುಂದೆ ಸಾಗುತ್ತಿದೆ. ಸಾಕಷ್ಟು ಪ್ರಯೋಜನ ನೀಡಬಹುದಾದ ಅಮೆರಿಕಾದ NASA ಮತ್ತು ಭಾರತದ ISRO ಅಭಿವೃದ್ಧಿ ಪಡಿಸಿದ 'ಉಪಗ್ರಹ' ಒಂದು ಅಮೆರಿಕಾದಿಂದ ಕರ್ನಾಟಕ ರಾಜ್ಯಧಾನಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದೆ.
Touchdown in Bengaluru! @ISRO receives NISAR (@NASA-ISRO Synthetic Aperture Radar) on a @USAirforce C-17 from @NASAJPL in California, setting the stage for final integration of the Earth observation satellite, a true symbol of #USIndia civil space collaboration. #USIndiaTogether pic.twitter.com/l0a5pa1uxV
— U.S. Consulate General Chennai (@USAndChennai) March 8, 2023
ಹೌದು, ಅಮೆರಿಕಾದ (US) National Aeronautics and Space Administration (NASA) ಹಾಗೂ ಭಾರತದ Indian Space Research Organisation (ISRO) ಜಂಟಿಯಾಗಿ ಅಮೆರಿಕದಲ್ಲಿ 'ನಿಸಾರ್' ಎಂಬ ಉಗ್ರಹವನ್ನು ಅಭಿವೃದ್ಧಿಪಡಿಸಿವೆ. ಬುಧವಾರ ಅದನ್ನು ಅಮೆರಿಕಾದ ವಾಯುಪಡೆಯ C-17 ವಿಮಾನದ ಮೂಲ ಬೆಂಗಳೂರಿಗೆ ತರಲಾಗಿದೆ ಎಂದು ಚೆನ್ನೈನ ಕಾನ್ಸುಲೇಟ್ ಟ್ವೀಟ್ ನಲ್ಲಿ ಹಂಚಿಕೊಂಡಿದೆ.

ದೇಶದಲ್ಲಿ ಭೂ ಕುಸಿತದಂತಹ ಅಪಾಯ ಎದುರಿಸುವ ಪ್ರದೇಶಗಳ ಅಧ್ಯಯನ, ಕೃಷಿ ಮ್ಯಾಪಿಂಗ್, ಅಪರ್ಚರ್ ರಾಡಾರ್ ಸೇರಿದಂತೆ ವಿವಿಧ ಕಾರ್ಯಗಳಿಗೆ ಈ ನಿಸಾರ್ ಉಪಗ್ರಹ ಬಳಸಲು ಇಸ್ರೋ (ISRO) ನಿರ್ಧರಿಸಿದೆ. ಈ ಉಪಗ್ರಹವು ಅಮೆರಿಕ ಮತ್ತು ಭಾರತದ ಮಧ್ಯದ ಬಾಹ್ಯಾಕಾಶ ಕ್ಷೇತ್ರದಲ್ಲಿನ ಬಾಂಧವ್ಯದ ಪ್ರತೀಕವಾಗಿದೆ ಎಂದು ಕಾನ್ಸುಲೇಟ್ ತಿಳಿಸಿದೆ.

ಪ್ರಸಕ್ತ ಈ ಉಪಗ್ರಹವು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮುಂದಿನ ವರ್ಷ ಉಡಾವಣೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ಭಾರತ ಭೂಕೂಸಿತವನ್ನು ಆಯಾ ಪ್ರದೇಶಗಳ ಭೌಗೋಳಿಕ ಲಕ್ಷಣಗಳು, ಅಧ್ಯಯನಗಳ ಆಧಾರದ ಮೇಲೆ ಶೀಘ್ರ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಇದರಿಂದ ಸಂಭವನೀಯ ಅಪಾಯ ತಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications