ದೊಮ್ಮಲೂರು: ಶಂಕರ್ ನಾಗ್ ಪಾರ್ಕ್ ನಲ್ಲಿ 'ಇಂದಿರಾ ಕ್ಯಾಂಟೀನ್' ಗೆ ತಡೆ
ದೊಮ್ಮಲೂರಿನ ಶಂಕರ್ ನಾಗ್ ಪಾರ್ಕ್ ನಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟುವ ಯೋಜನೆಯಿಂದ ಬೆಂಗಳೂರು ಮಹಾನಗರ ಪಾಲಿಗೆ ಸದ್ಯಕ್ಕೆ ಹಿಂದೆ ಸರಿದಿದೆ. ನಾಗರೀಕರಿಂದ ತೀವ್ರ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಸದ್ಯಕ್ಕೆ ಅಲ್ಲಿ ಕ್ಯಾಂಟೀನ್ ನಿರ್ಮಿಸುವ ಯೋಜನೆಗೆ
ಬೆಂಗಳೂರು, ಜುಲೈ 17: ದೊಮ್ಮಲೂರಿನಲ್ಲಿರುವ ಶಂಕರ್ ನಾಗ್ ಉದ್ಯಾನವನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಮುಂದಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ (ಬಿಬಿಎಂಪಿ) ಸದ್ಯಕ್ಕೆ ಆ ಯೋಜನೆಯನ್ನು ಸ್ಥಗಿತಗೊಳಿಸಿದೆ.
ಕ್ಯಾಂಟೀನ್ ನಿರ್ಮಾಣಕ್ಕಾಗಿ ಪಾರ್ಕ್ ನಲ್ಲಿ ನಡೆಯಬೇಕಿದ್ದ ಮರಗಳ ಮಾರಣಹೋಮ ನಡೆಸಲು ಬಿಬಿಎಂಪಿ ಸಜ್ಜಾಗಿತ್ತು. ಇದರ ವಿರುದ್ಧ ಅಲ್ಲಿ ಸಾರ್ವಜನಿಕರ ಪ್ರತಿಭಟನೆಯೂ ನಡೆದಿತ್ತು.

ಈ ಹಿನ್ನೆಲೆಯಲ್ಲಿ, ಕೆಲ ಅಂತರ್ಜಾಲ ಮಾಧ್ಯಮಗಳು ಅಲ್ಲಿನ ಸ್ಥಳೀಯರ ಅನಿಸಿಕೆಗಳನ್ನು ಸಂಗ್ರಹಿಸಿ ವಿಶೇಷ ವರದಿಯೊಂದನ್ನು ಪ್ರಕಟಿಸಿತ್ತು.
ಈ ವರದಿಗಳು ಬಂದ ಬಳಿಕ, ಆ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್, ಇತ್ತೀಚೆಗೆ ಶಂಕರ್ ನಾಗ್ ಪಾರ್ಕ್ ಗೆ ಭೇಟಿ ನೀಡಿ ಅವಲೋಕಿಸಿದ್ದರು.
ಅಲ್ಲಿನ ವೈವಿಧ್ಯಮರ ಮರ, ಗಡಿ ಹಾಗೂ ಸಾರ್ವಜನಿಕರು ಆ ಪಾರ್ಕ್ ಬಗ್ಗೆ ಇಟ್ಟುಕೊಂಡಿರುವ ಪ್ರೀತಿಯನ್ನು ಗಮನಿಸಿದ ಅವರು, ತಕ್ಷಣವೇ ಬಿಬಿಎಂಪಿಗೆ ಇಂದಿರಾ ಕ್ಯಾಂಟೀನ್ ಅನ್ನು ಪಾರ್ಕ್ ನೊಳಗೆ ನಿರ್ಮಿಸುವ ಯೋಜನೆ ಕೈಬಿಡಬೇಕೆಂದು ಆಗ್ರಹಿಸಿದ್ದರು.
ಇದರನ್ವಯ, ಬಿಬಿಎಂಪಿ ಆ ಯೋಜನೆಗೆ ಸದ್ಯದ ಮಟ್ಟಿಗೆ ಪೂರ್ಣ ವಿರಾಮ ನೀಡಿದೆ.












Click it and Unblock the Notifications